<p><strong>ನವದೆಹಲಿ:</strong> ಬಾರ್ಡರ್ ಗಾವಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ನಾಲ್ಕನೇ ಪಂದ್ಯ ನಡೆಯಲಿರುವ ಬ್ರಿಸ್ಬೇನ್ ರಾಜ್ಯದ ಕೋವಿಡ್ ತಡೆ ನಿಯಮಗಳಿಗೆ ಭಾರತ ಅಸಮಾಧಾನ ವ್ಯಕ್ತಪಡಿಸಿದೆ. ಅದರ ಬೆನ್ನಲ್ಲೇ ತನ್ನ ಪಟ್ಟು ಸಡಿಲಿಸಲು ಕ್ವಿನ್ಸ್ಲ್ಯಾಂಡ್ ಸರ್ಕಾರವು ಒಪ್ಪದ ಕಾರಣ ಪಂದ್ಯದ ಆಯೋಜನೆ ಅನುಮಾನವಾಗಿದೆ.</p>.<p>ಜನವರಿ 15ರಿಂದ ನಾಲ್ಕನೇ ಪಂದ್ಯ ನಡೆಯಲಿದೆ. ತಂಡವು ಏಳರಿಂದ 11ರವರೆಗೆ ಸಿಡ್ನಿಯಲ್ಲಿ ಮೂರನೇ ಟೆಸ್ಟ್ ಆಡಲಿದೆ. ಬ್ರಿಸ್ಟೆನ್ ಇರುವುದು ಕ್ವಿನ್ಸ್ಲ್ಯಾಂಡ್ನಲ್ಲಿ. ಸಿಡ್ನಿಯು ನ್ಯೂಸೌತ್ ವೇಲ್ಸ್ ರಾಜ್ಯದಲ್ಲಿದೆ.</p>.<p>ಕ್ವಿನ್ಸ್ಲ್ಯಾಂಡ್ ರಾಜ್ಯ ಸರ್ಕಾರವು ಬೇರೆ ರಾಜ್ಯಗಳಿಂದ ಬರುವವರು ಕಡ್ಡಾಯ ಕ್ವಾರಂಟೈನ್ ಪಾಲಿಸಬೇಕು ಎಂಬ ನಿಯಮ ಮಾಡಿದೆ. ಆದ್ದರಿಂದ ಭಾರತ ತಂಡಕ್ಕೂ ಇದು (ಹೋಟೆಲ್–ಕ್ರೀಡಾಂಗಣ–ಹೋಟೆಲ್) ಈ ನಿಯಮ ಅನ್ವಯವಾಗಲಿದೆ.</p>.<p>ಆದರೆ, ಸರಣಿಗೂ ಮುನ್ನ 14 ದಿನಗಳ ಕಟ್ಟುನಿಟ್ಟಿನ ಕ್ವಾರಂಟೈನ್ ಪಾಲಿಸಲಾಗಿದೆ. ಈಗ ಮತ್ತೆ ಅಗತ್ಯವಿಲ್ಲ ಎಂಬುದು ಭಾರತದ ನಿಲುವಾಗಿದೆ.</p>.<p>’ಇದು ಗೊಂದಲಮಯ ಸ್ಥಿತಿಯಾಗಿದೆ. ಇನ್ನೂ ಕೆಲವು ದಿನ ಕಾದು ನೋಡೋಣ‘ ಎಂದು ಬಿಸಿಸಿಐ ಮೂಲಗಳು ಸ್ಪಷ್ಟಪಡಿಸಿವೆ.</p>.<p>ಒಂದೊಮ್ಮೆ ಬ್ರಿಸ್ಬೆನ್ನಲ್ಲಿ ಪಂದ್ಯ ರದ್ದಾದರೆ ಸಿಡ್ನಿಯಲ್ಲಿಯೇ ನಡೆಸುವ ಸಾಧ್ಯತೆ ಎಂದೂ ಹೇಳಲಾಗುತ್ತಿದೆ.</p>.<p>ಗಾಬಾದಲ್ಲಿಯೇ ನಡೆಯಲಿ: ವೇಡ್</p>.<p>ಸಿಡ್ನಿಯಲ್ಲಿ ನಾಲ್ಕನೇ ಟೆಸ್ಟ್ ಪಂದ್ಯವನ್ನೂ ಆಯೋಜಿಸುವುದಕ್ಕೆ ಆಸ್ಟ್ರೇಲಿಯಾ ತಂಡದ ಆಟಗಾರ ಮ್ಯಾಥ್ಯೂ ವೇಡ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.</p>.<p>’ಸಿಡ್ನಿಯಲ್ಲಿ ಒಂದರ ಹಿಂದೆ ಒಂದು ಎರಡು ಪಂದ್ಯಗಳು ನಡೆಯುವುದು ಸರಿಯಲ್ಲ. ಬ್ರಿಸ್ಟೆನ್ನ ಗಾಬಾದ್ಲಲಿ ನಡೆಯಲಿ‘ ಎಂದು ಪ್ರತಿಪಾದಿಸಿದ್ದಾರೆ.</p>.<p>’ಕ್ವಿನ್ಸ್ಲ್ಯಾಂಡ್ ನಿಯಮ ಮತ್ತು ಭಾರತದ ನಿಲುವಿನ ಕುರಿತು ನನಗೆ ತಿಳಿದಿಲ್ಲ. ಪೂರ್ವ ನಿರ್ಧಾರದಂತೆಯೇ ಪಂದ್ಯಗಳು ನಡೆದರೆ ಒಳ್ಳೆಯದು‘ ಎಂದು ವೇಡ್ ಹೇಳಿದ್ದಾರೆ.</p>.<p>’ಕೋವಿಡ್ ತಡೆಗೆ ಕಠಿಣವಾದ ಶಿಷ್ಟಾಚಾರ ಪಾಲನೆ ಮತ್ತು ಸುರಕ್ಷಾ ನಿಯಮಗಳು ಇರುತ್ತವೆ. ಆ ಸವಾಲುಗಳನ್ನು ಎದುರಿಸಲು ನಾವು ಸಿದ್ಧರಾಗಿದ್ದೇವೆ. ನಮ್ಮ ತಂಡವು ಗಾಬಾದಲ್ಲಿ ಆಡುವುದನ್ನು ಯಾವಾಗಲೂ ಪ್ರೀತಿಸುತ್ತದೆ‘ ಎಂದು ವೇಡ್ ಅಭಿಪ್ರಾಯಪಟ್ಟಿದ್ದಾರೆ.</p>.<p>ಗಾಬಾ ಕ್ರೀಡಾಂಗಣದಲ್ಲಿ ಭಾರತವು ಇದುವರೆಗೆ ಟೆಸ್ಟ್ ಗೆದ್ದಿಲ್ಲ.</p>.<p>‘ನಿಯಮ ಪಾಲಿಸದಿದ್ದರೆ ಬರುವುದೇ ಬೇಡ‘</p>.<p>ನಿಯಮ ಪಾಲಿಸಿ ಇಲ್ಲದಿದ್ದರೆ ಬ್ರಿಸ್ಟೆನ್ಗೆ ಪ್ರಯಾಣಿಸುವ ಅಗತ್ಯವಿಲ್ಲವೆಂದು ಕ್ವಿನ್ಸ್ಲ್ಯಾಂಡ್ ರಾಜ್ಯದ ಸಚಿವೆ ರೋಸ್ ಬೇಟ್ಸ್ ಅವರು ಭಾರತ ತಂಡಕ್ಕೆ ಕಟುವಾದ ಎಚ್ಚರಿಕೆ ಕೊಟ್ಟಿದ್ದಾರೆ.</p>.<p>ಅವರು ಈ ಹೇಳಿಕೆ ನೀಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.</p>.<p>ಇದಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿರುವ ಭಾರತದ ಮಾಜಿ ಕ್ರಿಕೆಟಿಗ ವಾಸೀಂ ಜಾಫರ್, ’ಭಾರತ ತಂಡದ ಬ್ಯಾಗ್ನಲ್ಲಿ ಬಾರ್ಡರ್–ಗಾವಸ್ಕರ್ ಟ್ರೋಫಿ ಇದೆ‘ ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ ಇಂಗ್ಲೆಂಡ್ ಆಟಗಾರ ಜೋಫ್ರಾ ಆರ್ಚರ್ ಅವರು ಬ್ಯಾಗ್ ಅನ್ನು ಬೆನ್ನಿಗೇರಿಸಿಕೊಂಡು ಮುಗುಳ್ನಗುತ್ತಿರುವ ಚಿತ್ರವನ್ನೂ ಹಾಕಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಬಾರ್ಡರ್ ಗಾವಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ನಾಲ್ಕನೇ ಪಂದ್ಯ ನಡೆಯಲಿರುವ ಬ್ರಿಸ್ಬೇನ್ ರಾಜ್ಯದ ಕೋವಿಡ್ ತಡೆ ನಿಯಮಗಳಿಗೆ ಭಾರತ ಅಸಮಾಧಾನ ವ್ಯಕ್ತಪಡಿಸಿದೆ. ಅದರ ಬೆನ್ನಲ್ಲೇ ತನ್ನ ಪಟ್ಟು ಸಡಿಲಿಸಲು ಕ್ವಿನ್ಸ್ಲ್ಯಾಂಡ್ ಸರ್ಕಾರವು ಒಪ್ಪದ ಕಾರಣ ಪಂದ್ಯದ ಆಯೋಜನೆ ಅನುಮಾನವಾಗಿದೆ.</p>.<p>ಜನವರಿ 15ರಿಂದ ನಾಲ್ಕನೇ ಪಂದ್ಯ ನಡೆಯಲಿದೆ. ತಂಡವು ಏಳರಿಂದ 11ರವರೆಗೆ ಸಿಡ್ನಿಯಲ್ಲಿ ಮೂರನೇ ಟೆಸ್ಟ್ ಆಡಲಿದೆ. ಬ್ರಿಸ್ಟೆನ್ ಇರುವುದು ಕ್ವಿನ್ಸ್ಲ್ಯಾಂಡ್ನಲ್ಲಿ. ಸಿಡ್ನಿಯು ನ್ಯೂಸೌತ್ ವೇಲ್ಸ್ ರಾಜ್ಯದಲ್ಲಿದೆ.</p>.<p>ಕ್ವಿನ್ಸ್ಲ್ಯಾಂಡ್ ರಾಜ್ಯ ಸರ್ಕಾರವು ಬೇರೆ ರಾಜ್ಯಗಳಿಂದ ಬರುವವರು ಕಡ್ಡಾಯ ಕ್ವಾರಂಟೈನ್ ಪಾಲಿಸಬೇಕು ಎಂಬ ನಿಯಮ ಮಾಡಿದೆ. ಆದ್ದರಿಂದ ಭಾರತ ತಂಡಕ್ಕೂ ಇದು (ಹೋಟೆಲ್–ಕ್ರೀಡಾಂಗಣ–ಹೋಟೆಲ್) ಈ ನಿಯಮ ಅನ್ವಯವಾಗಲಿದೆ.</p>.<p>ಆದರೆ, ಸರಣಿಗೂ ಮುನ್ನ 14 ದಿನಗಳ ಕಟ್ಟುನಿಟ್ಟಿನ ಕ್ವಾರಂಟೈನ್ ಪಾಲಿಸಲಾಗಿದೆ. ಈಗ ಮತ್ತೆ ಅಗತ್ಯವಿಲ್ಲ ಎಂಬುದು ಭಾರತದ ನಿಲುವಾಗಿದೆ.</p>.<p>’ಇದು ಗೊಂದಲಮಯ ಸ್ಥಿತಿಯಾಗಿದೆ. ಇನ್ನೂ ಕೆಲವು ದಿನ ಕಾದು ನೋಡೋಣ‘ ಎಂದು ಬಿಸಿಸಿಐ ಮೂಲಗಳು ಸ್ಪಷ್ಟಪಡಿಸಿವೆ.</p>.<p>ಒಂದೊಮ್ಮೆ ಬ್ರಿಸ್ಬೆನ್ನಲ್ಲಿ ಪಂದ್ಯ ರದ್ದಾದರೆ ಸಿಡ್ನಿಯಲ್ಲಿಯೇ ನಡೆಸುವ ಸಾಧ್ಯತೆ ಎಂದೂ ಹೇಳಲಾಗುತ್ತಿದೆ.</p>.<p>ಗಾಬಾದಲ್ಲಿಯೇ ನಡೆಯಲಿ: ವೇಡ್</p>.<p>ಸಿಡ್ನಿಯಲ್ಲಿ ನಾಲ್ಕನೇ ಟೆಸ್ಟ್ ಪಂದ್ಯವನ್ನೂ ಆಯೋಜಿಸುವುದಕ್ಕೆ ಆಸ್ಟ್ರೇಲಿಯಾ ತಂಡದ ಆಟಗಾರ ಮ್ಯಾಥ್ಯೂ ವೇಡ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.</p>.<p>’ಸಿಡ್ನಿಯಲ್ಲಿ ಒಂದರ ಹಿಂದೆ ಒಂದು ಎರಡು ಪಂದ್ಯಗಳು ನಡೆಯುವುದು ಸರಿಯಲ್ಲ. ಬ್ರಿಸ್ಟೆನ್ನ ಗಾಬಾದ್ಲಲಿ ನಡೆಯಲಿ‘ ಎಂದು ಪ್ರತಿಪಾದಿಸಿದ್ದಾರೆ.</p>.<p>’ಕ್ವಿನ್ಸ್ಲ್ಯಾಂಡ್ ನಿಯಮ ಮತ್ತು ಭಾರತದ ನಿಲುವಿನ ಕುರಿತು ನನಗೆ ತಿಳಿದಿಲ್ಲ. ಪೂರ್ವ ನಿರ್ಧಾರದಂತೆಯೇ ಪಂದ್ಯಗಳು ನಡೆದರೆ ಒಳ್ಳೆಯದು‘ ಎಂದು ವೇಡ್ ಹೇಳಿದ್ದಾರೆ.</p>.<p>’ಕೋವಿಡ್ ತಡೆಗೆ ಕಠಿಣವಾದ ಶಿಷ್ಟಾಚಾರ ಪಾಲನೆ ಮತ್ತು ಸುರಕ್ಷಾ ನಿಯಮಗಳು ಇರುತ್ತವೆ. ಆ ಸವಾಲುಗಳನ್ನು ಎದುರಿಸಲು ನಾವು ಸಿದ್ಧರಾಗಿದ್ದೇವೆ. ನಮ್ಮ ತಂಡವು ಗಾಬಾದಲ್ಲಿ ಆಡುವುದನ್ನು ಯಾವಾಗಲೂ ಪ್ರೀತಿಸುತ್ತದೆ‘ ಎಂದು ವೇಡ್ ಅಭಿಪ್ರಾಯಪಟ್ಟಿದ್ದಾರೆ.</p>.<p>ಗಾಬಾ ಕ್ರೀಡಾಂಗಣದಲ್ಲಿ ಭಾರತವು ಇದುವರೆಗೆ ಟೆಸ್ಟ್ ಗೆದ್ದಿಲ್ಲ.</p>.<p>‘ನಿಯಮ ಪಾಲಿಸದಿದ್ದರೆ ಬರುವುದೇ ಬೇಡ‘</p>.<p>ನಿಯಮ ಪಾಲಿಸಿ ಇಲ್ಲದಿದ್ದರೆ ಬ್ರಿಸ್ಟೆನ್ಗೆ ಪ್ರಯಾಣಿಸುವ ಅಗತ್ಯವಿಲ್ಲವೆಂದು ಕ್ವಿನ್ಸ್ಲ್ಯಾಂಡ್ ರಾಜ್ಯದ ಸಚಿವೆ ರೋಸ್ ಬೇಟ್ಸ್ ಅವರು ಭಾರತ ತಂಡಕ್ಕೆ ಕಟುವಾದ ಎಚ್ಚರಿಕೆ ಕೊಟ್ಟಿದ್ದಾರೆ.</p>.<p>ಅವರು ಈ ಹೇಳಿಕೆ ನೀಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.</p>.<p>ಇದಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿರುವ ಭಾರತದ ಮಾಜಿ ಕ್ರಿಕೆಟಿಗ ವಾಸೀಂ ಜಾಫರ್, ’ಭಾರತ ತಂಡದ ಬ್ಯಾಗ್ನಲ್ಲಿ ಬಾರ್ಡರ್–ಗಾವಸ್ಕರ್ ಟ್ರೋಫಿ ಇದೆ‘ ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ ಇಂಗ್ಲೆಂಡ್ ಆಟಗಾರ ಜೋಫ್ರಾ ಆರ್ಚರ್ ಅವರು ಬ್ಯಾಗ್ ಅನ್ನು ಬೆನ್ನಿಗೇರಿಸಿಕೊಂಡು ಮುಗುಳ್ನಗುತ್ತಿರುವ ಚಿತ್ರವನ್ನೂ ಹಾಕಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>