<p>ನವದೆಹಲಿ: ಭಾರತ ಕ್ರಿಕೆಟ್ ತಂಡದ ಎರಡು ಪ್ರಮುಖ ಪ್ರಾಯೋಜಕತ್ವ ಕಂಪನಿಗಳಾದ ಬೈಜುಸ್ ಮತ್ತು ಎಂಪಿಎಲ್ ಸ್ಪೋರ್ಟ್ಸ್, ಬಿಸಿಸಿಐನೊಂದಿಗಿನ ಒಪ್ಪಂದದಿಂದ ಹೊರಗುಳಿಯಲು ಬಯಸಿವೆ.</p>.<p>ತಂಡಕ್ಕೆ ಪೋಷಾಕು ಪ್ರಾಯೋಜಕತ್ವ ನೀಡುತ್ತಿರುವ ಆನ್ಲೈನ್ ಕಲಿಕಾ ವೇದಿಕೆ ಬೈಜುಸ್, ಜೂನ್ನಲ್ಲಿ ತನ್ನ ಒಪ್ಪಂದವನ್ನು ₹ 293 ಕೋಟಿ ಮೊತ್ತಕ್ಕೆ 2023ರ ನವೆಂಬರ್ವರೆಗೆ ವಿಸ್ತರಿಸಿಕೊಂಡಿತ್ತು. ಈಗ ಅದು ಒಪ್ಪಂದ ಕಡಿತಗೊಳಿಸಲು ಬಯಸಿದೆ. ಆದರೆ ಕನಿಷ್ಠ 2023ರ ಮಾರ್ಚ್ವರೆಗೆ ಮುಂದುವರಿಯುವಂತೆ ಕಂಪನಿಗೆ ಬಿಸಿಸಿಐ ಕೇಳಿಕೊಂಡಿದೆ.</p>.<p>‘ಒಪ್ಪಂದದ ಹೊರಗುಳಿಯಲು ಬೈಜುಸ್ ಈ ವರ್ಷ ನವೆಂಬರ್ 4ರಂದು ಪತ್ರ ಬರೆದಿದೆ. ಒಪ್ಪಂದದ ಅನ್ವಯ ಪ್ರಾಯೋಜಕತ್ವ ಮುಂದುವರಿಸುವಂತೆ ನಾವು ಕೇಳಿಕೊಂಡಿದ್ದೇವೆ‘ ಎಂದು ಬಿಸಿಸಿಐ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.</p>.<p>ಬುಧವಾರ ನಡೆದ ಬಿಸಿಸಿಐನ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಿತು.</p>.<p>ಕೆಕೆಸಿಎಲ್ಗೆ ಹಕ್ಕುಗಳನ್ನು ವರ್ಗಾಯಿಸಲು ಎಂಪಿಎಲ್ ಮನವಿ: ಬಿಸಿಸಿಐನೊಂದಿಗೆ ತಾನು ಹೊಂದಿರುವ ಕಿಟ್ ಪ್ರಾಯೋಜಕತ್ವದ ಸಂಪೂರ್ಣ ಹಕ್ಕುಗಳನ್ನು ಕೇವಲ್ ಕಿರಣ್ ಕ್ಲಾಥಿಂಗ್ ಲಿಮಿಟ್ (ಕೆಕೆಸಿಎಲ್) ಸಂಸ್ಥೆಗೆ ನಿಯೋಜಿಸುವಂತೆ ಎಂಪಿಎಲ್ ಮನವಿ ಮಾಡಿದೆ. ಈ ಕುರಿತು ಡಿಸೆಂಬರ್ 2ರಂದು ಕಂಪನಿ ಬಿಸಿಸಿಐಗೆ ಪತ್ರ ಬರೆದಿದೆ. ಎಂಪಿಎಲ್ ಕಂಪೆನಿಗೂ ಮಾರ್ಚ್ 31ರವರೆಗೆ ಒಪ್ಪಂದದಲ್ಲಿ ಮುಂದುವರಿಯುವಂತೆ ಬಿಸಿಸಿಐ ಮನವಿ ಮಾಡಿದೆ.</p>.<p>ಆಯ್ಕೆ ಸಮಿತಿ ರಚನೆಯ ಬಳಿಕ ಕೇಂದ್ರೀಯ ಗುತ್ತಿಗೆ ತೀರ್ಮಾನ: ಆಟಗಾರರ ಕೇಂದ್ರೀಯ ಗುತ್ತಿಗೆಯನ್ನು ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಹೊಸ ಆಯ್ಕೆ ಸಮಿತಿಯ ರಚನೆಯ ಬಳಿಕ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಟೂರ್ನಿಯ ಬಳಿಕ ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯನ್ನು ವಜಾ ಮಾಡಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ: ಭಾರತ ಕ್ರಿಕೆಟ್ ತಂಡದ ಎರಡು ಪ್ರಮುಖ ಪ್ರಾಯೋಜಕತ್ವ ಕಂಪನಿಗಳಾದ ಬೈಜುಸ್ ಮತ್ತು ಎಂಪಿಎಲ್ ಸ್ಪೋರ್ಟ್ಸ್, ಬಿಸಿಸಿಐನೊಂದಿಗಿನ ಒಪ್ಪಂದದಿಂದ ಹೊರಗುಳಿಯಲು ಬಯಸಿವೆ.</p>.<p>ತಂಡಕ್ಕೆ ಪೋಷಾಕು ಪ್ರಾಯೋಜಕತ್ವ ನೀಡುತ್ತಿರುವ ಆನ್ಲೈನ್ ಕಲಿಕಾ ವೇದಿಕೆ ಬೈಜುಸ್, ಜೂನ್ನಲ್ಲಿ ತನ್ನ ಒಪ್ಪಂದವನ್ನು ₹ 293 ಕೋಟಿ ಮೊತ್ತಕ್ಕೆ 2023ರ ನವೆಂಬರ್ವರೆಗೆ ವಿಸ್ತರಿಸಿಕೊಂಡಿತ್ತು. ಈಗ ಅದು ಒಪ್ಪಂದ ಕಡಿತಗೊಳಿಸಲು ಬಯಸಿದೆ. ಆದರೆ ಕನಿಷ್ಠ 2023ರ ಮಾರ್ಚ್ವರೆಗೆ ಮುಂದುವರಿಯುವಂತೆ ಕಂಪನಿಗೆ ಬಿಸಿಸಿಐ ಕೇಳಿಕೊಂಡಿದೆ.</p>.<p>‘ಒಪ್ಪಂದದ ಹೊರಗುಳಿಯಲು ಬೈಜುಸ್ ಈ ವರ್ಷ ನವೆಂಬರ್ 4ರಂದು ಪತ್ರ ಬರೆದಿದೆ. ಒಪ್ಪಂದದ ಅನ್ವಯ ಪ್ರಾಯೋಜಕತ್ವ ಮುಂದುವರಿಸುವಂತೆ ನಾವು ಕೇಳಿಕೊಂಡಿದ್ದೇವೆ‘ ಎಂದು ಬಿಸಿಸಿಐ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.</p>.<p>ಬುಧವಾರ ನಡೆದ ಬಿಸಿಸಿಐನ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಿತು.</p>.<p>ಕೆಕೆಸಿಎಲ್ಗೆ ಹಕ್ಕುಗಳನ್ನು ವರ್ಗಾಯಿಸಲು ಎಂಪಿಎಲ್ ಮನವಿ: ಬಿಸಿಸಿಐನೊಂದಿಗೆ ತಾನು ಹೊಂದಿರುವ ಕಿಟ್ ಪ್ರಾಯೋಜಕತ್ವದ ಸಂಪೂರ್ಣ ಹಕ್ಕುಗಳನ್ನು ಕೇವಲ್ ಕಿರಣ್ ಕ್ಲಾಥಿಂಗ್ ಲಿಮಿಟ್ (ಕೆಕೆಸಿಎಲ್) ಸಂಸ್ಥೆಗೆ ನಿಯೋಜಿಸುವಂತೆ ಎಂಪಿಎಲ್ ಮನವಿ ಮಾಡಿದೆ. ಈ ಕುರಿತು ಡಿಸೆಂಬರ್ 2ರಂದು ಕಂಪನಿ ಬಿಸಿಸಿಐಗೆ ಪತ್ರ ಬರೆದಿದೆ. ಎಂಪಿಎಲ್ ಕಂಪೆನಿಗೂ ಮಾರ್ಚ್ 31ರವರೆಗೆ ಒಪ್ಪಂದದಲ್ಲಿ ಮುಂದುವರಿಯುವಂತೆ ಬಿಸಿಸಿಐ ಮನವಿ ಮಾಡಿದೆ.</p>.<p>ಆಯ್ಕೆ ಸಮಿತಿ ರಚನೆಯ ಬಳಿಕ ಕೇಂದ್ರೀಯ ಗುತ್ತಿಗೆ ತೀರ್ಮಾನ: ಆಟಗಾರರ ಕೇಂದ್ರೀಯ ಗುತ್ತಿಗೆಯನ್ನು ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಹೊಸ ಆಯ್ಕೆ ಸಮಿತಿಯ ರಚನೆಯ ಬಳಿಕ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಟೂರ್ನಿಯ ಬಳಿಕ ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯನ್ನು ವಜಾ ಮಾಡಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>