<p><strong>ಮೈಸೂರು:</strong> ಕರ್ನಾಟಕ ತಂಡದವರು, ಕೇರಳ ವಿರುದ್ಧದ ಕೂಚ್ ಬಿಹಾರ್ ಟ್ರೋಫಿ (19 ವರ್ಷ ವಯಸ್ಸಿನೊಳ ಗಿನವರ) ಕ್ರಿಕೆಟ್ ಟೂರ್ನಿಯಲ್ಲಿ ಸೋಲಿನ ಸುಳಿಗೆ ಸಿಲುಕಿದ್ದಾರೆ.</p>.<p>ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣ ದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಸೋಮವಾರ 273 ರನ್ಗಳ ಗುರಿ ಬೆನ್ನಟ್ಟಿರುವ ಆತಿಥೇಯರು ದ್ವಿತೀಯ ಇನಿಂಗ್ಸ್ನಲ್ಲಿ 47.1 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 109 ರನ್ ಗಳಿಸಿ ಸಂಕಷ್ಟದಲ್ಲಿದ್ದಾರೆ. ಪಂದ್ಯದ ಕೊನೆಯ ದಿನವಾದ ಮಂಗಳವಾರ ಈ ತಂಡ ಗೆಲ್ಲಲು ಇನ್ನೂ 164 ರನ್ ಗಳಿಸಬೇಕಿದೆ. ಕೈಯಲ್ಲಿರುವ ವಿಕೆಟ್ಗಳು ಕೇವಲ ನಾಲ್ಕು.</p>.<p>ಆರಂಭಿಕ ಬ್ಯಾಟ್ಸ್ಮನ್ ಲೋಚನ್ ಎಸ್.ಗೌಡ 54 ರನ್ ಗಳಿಸಿ ಪ್ರತಿರೋಧವೊಡ್ಡಿದರು. ಆದರೆ, ಕೇರಳ ತಂಡದ ಮೋಹಿತ್ ಶಿಬು ಹಾಗೂ ಕಿರಣ್ ಸಾಗರ್ ಪರಿಣಾಮಕಾರಿ ಬೌಲಿಂಗ್ ಮೂಲಕ ಉಳಿದವರನ್ನು ನಿಯಂತ್ರಿಸಿದರು.</p>.<p><strong>ಸಂಕ್ಷಿಪ್ತ ಸ್ಕೋರ್: ಕೇರಳ</strong>: ಮೊದಲ ಇನಿಂಗ್ಸ್ 194 ಹಾಗೂ 98 ಓವರ್ಗಳಲ್ಲಿ 199 (ನಿಖಿಲ್ ಜೋಸ್ 54, ಆದಿತ್ಯ ಕೃಷ್ಣನ್ 42; ತಹಾ ಖಾನ್ 52ಕ್ಕೆ6); <strong>ಕರ್ನಾಟಕ:</strong> ಮೊದಲ ಇನಿಂಗ್ಸ್ 121 ಹಾಗೂ 47.1 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 109 (ಲೋಚನ್ ಎಸ್.ಗೌಡ 54, ಎನ್.ಎ.ಚಿನ್ಮಯ್ ಬ್ಯಾಟಿಂಗ್ 10; ಮೋಹಿತ್ ಶಿಬು 25ಕ್ಕೆ2, ಕಿರಣ್ ಸಾಗರ್ 34ಕ್ಕೆ4).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಕರ್ನಾಟಕ ತಂಡದವರು, ಕೇರಳ ವಿರುದ್ಧದ ಕೂಚ್ ಬಿಹಾರ್ ಟ್ರೋಫಿ (19 ವರ್ಷ ವಯಸ್ಸಿನೊಳ ಗಿನವರ) ಕ್ರಿಕೆಟ್ ಟೂರ್ನಿಯಲ್ಲಿ ಸೋಲಿನ ಸುಳಿಗೆ ಸಿಲುಕಿದ್ದಾರೆ.</p>.<p>ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣ ದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಸೋಮವಾರ 273 ರನ್ಗಳ ಗುರಿ ಬೆನ್ನಟ್ಟಿರುವ ಆತಿಥೇಯರು ದ್ವಿತೀಯ ಇನಿಂಗ್ಸ್ನಲ್ಲಿ 47.1 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 109 ರನ್ ಗಳಿಸಿ ಸಂಕಷ್ಟದಲ್ಲಿದ್ದಾರೆ. ಪಂದ್ಯದ ಕೊನೆಯ ದಿನವಾದ ಮಂಗಳವಾರ ಈ ತಂಡ ಗೆಲ್ಲಲು ಇನ್ನೂ 164 ರನ್ ಗಳಿಸಬೇಕಿದೆ. ಕೈಯಲ್ಲಿರುವ ವಿಕೆಟ್ಗಳು ಕೇವಲ ನಾಲ್ಕು.</p>.<p>ಆರಂಭಿಕ ಬ್ಯಾಟ್ಸ್ಮನ್ ಲೋಚನ್ ಎಸ್.ಗೌಡ 54 ರನ್ ಗಳಿಸಿ ಪ್ರತಿರೋಧವೊಡ್ಡಿದರು. ಆದರೆ, ಕೇರಳ ತಂಡದ ಮೋಹಿತ್ ಶಿಬು ಹಾಗೂ ಕಿರಣ್ ಸಾಗರ್ ಪರಿಣಾಮಕಾರಿ ಬೌಲಿಂಗ್ ಮೂಲಕ ಉಳಿದವರನ್ನು ನಿಯಂತ್ರಿಸಿದರು.</p>.<p><strong>ಸಂಕ್ಷಿಪ್ತ ಸ್ಕೋರ್: ಕೇರಳ</strong>: ಮೊದಲ ಇನಿಂಗ್ಸ್ 194 ಹಾಗೂ 98 ಓವರ್ಗಳಲ್ಲಿ 199 (ನಿಖಿಲ್ ಜೋಸ್ 54, ಆದಿತ್ಯ ಕೃಷ್ಣನ್ 42; ತಹಾ ಖಾನ್ 52ಕ್ಕೆ6); <strong>ಕರ್ನಾಟಕ:</strong> ಮೊದಲ ಇನಿಂಗ್ಸ್ 121 ಹಾಗೂ 47.1 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 109 (ಲೋಚನ್ ಎಸ್.ಗೌಡ 54, ಎನ್.ಎ.ಚಿನ್ಮಯ್ ಬ್ಯಾಟಿಂಗ್ 10; ಮೋಹಿತ್ ಶಿಬು 25ಕ್ಕೆ2, ಕಿರಣ್ ಸಾಗರ್ 34ಕ್ಕೆ4).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>