ಮ್ಯಾಂಚೆಸ್ಟರ್: ಮಳೆರಾಯ ಕೃಪೆ ತೋರಿರುವ ಕಾರಣಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ಬಾಕಿ ಆಟ ಇಂದು ಪುನಃ ಆರಂಭವಾಗುವ ನಿರೀಕ್ಷೆಯಿದೆ. ಬುಧವಾರ ಮುಂಜಾನೆ ಮ್ಯಾಂಚೆಸ್ಟರ್ನಲ್ಲಿ ಆಗಸ ಶುಭ್ರವಾಗಿದೆ, ಅಲ್ಲಲ್ಲಿ ಮೋಡಗಳು ತೇಲುತ್ತಿವೆ. ಅದರೆ ದಟ್ಟೈಸಿಲ್ಲ ಎಂದು ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.