<p><strong>ದುಬೈ:</strong> ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವೆ ಗುರುವಾರ ದುಬೈಯಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಕುತೂಹಲದಾಯಕ ಘಟನೆಯೊಂದು ನಡೆದಿತ್ತು.</p>.<p>ಪಾಕಿಸ್ತಾನ ಒಡ್ಡಿದ 177 ರನ್ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಐದು ವಿಕೆಟ್ ರೋಚಕ ಗೆಲುವು ದಾಖಲಿಸಿತ್ತು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ವಾರ್ನರ್ 49 ರನ್ ಗಳಿಸಿ ಆಸೀಸ್ಗೆ ಉತ್ತಮ ಆರಂಭವೊದಗಿಸಲು ನೆರವಾಗಿದ್ದರು.</p>.<p>ಇದನ್ನೂ ಓದಿ:<a href="https://www.prajavani.net/sports/cricket/t20-wc-hasan-ali-drops-catch-matthew-wade-hits-hat-trick-sixes-pakistan-dreams-over-883115.html" itemprop="url">T20 WC: ಕ್ಯಾಚ್ ಕೈಬಿಟ್ಟ ಹಸನ್ ಅಲಿ; ವಿಶ್ವಕಪ್ ಕೈಚೆಲ್ಲಿದ ಪಾಕಿಸ್ತಾನ </a></p>.<p>ಈ ನಡುವೆ ಮೊಹಮ್ಮದ್ ಹಫೀಜ್ ಎಸೆದ ಚೆಂಡು, ಪಿಚ್ನಲ್ಲಿ ಎರಡು ಬಾರಿ ಪುಟಿದೆದ್ದಿತ್ತು. ಇದರ ಸಂಪೂರ್ಣ ಲಾಭ ಪಡೆದ ವಾರ್ನರ್, ಚೆಂಡನ್ನು ಸಿಕ್ಸರ್ಗೆ ಅಟ್ಟಿದ್ದರು.</p>.<p>ಹಫೀಜ್ ಅವರ ಕೈಯಿಂದ ಚೆಂಡು ಜಾರಿತ್ತು ಎಂದು ಹೇಳಲಾಗುತ್ತಿದೆ. ವಾರ್ನರ್ ಕ್ರೀಡಾಸ್ಫೂರ್ತಿ ಮೆರೆದಿದ್ದರೆ 'ಡೆಡ್ ಬಾಲ್' ಎಂದು ಘೋಷಿಸಬಹುದಿತ್ತು. ಆದರೆ ಪಿಚ್ನಲ್ಲಿ ಚೆಂಡು ಎರಡು ಬಾರಿ ಪುಟಿದೆದ್ದ ಕಾರಣ ಅಂಪೈರ್, ಐಸಿಸಿ ನಿಮಯಗಳಿಗೆ ಅನುಸಾರವಾಗಿ 'ನೊ ಬಾಲ್' ಎಂದು ಘೋಷಿಸಿದ್ದರು.</p>.<p>ಪ್ರಸ್ತುತ ಘಟನೆಯು ಕ್ರೀಡಾ ವಲಯದಲ್ಲಿ ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ. ಪ್ರಮುಖವಾಗಿಯೂ ವಾರ್ನರ್ ಕ್ರೀಡಾಸ್ಫೂರ್ತಿ ಬಗ್ಗೆ ಪ್ರಶ್ನೆ ಎತ್ತಲಾಗುತ್ತಿದೆ.</p>.<p>ಈ ಕುರಿತು ಟ್ವೀಟ್ ಮಾಡಿರುವ ಗೌತಮ್ ಗಂಭೀರ್, ಡೇವಿಡ್ ವಾರ್ನರ್ ಅವರ ಕ್ರೀಡಾಸ್ಫೂರ್ತಿಯನ್ನು ಪ್ರಶ್ನಿಸಿದ್ದಾರೆ. ಅಲ್ಲದೆ ಎಂತಹ ನಾಚಿಕೆಗೇಡಿನ ಸಂಗತಿ ಎಂದು ಟೀಕೆ ಮಾಡಿದ್ದಾರೆ.</p>.<p>ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಿಗೂ ಗಂಭೀರ್ ಟ್ಯಾಗ್ ಮಾಡಿದ್ದಾರೆ. ಹಿಂದೆ 'ಮಂಕಡಿಂಗ್' ವಿವಾದದಲ್ಲಿ ಅಶ್ವಿನ್ ಕ್ರೀಡಾಸ್ಫೂರ್ತಿಯನ್ನು ಪ್ರಶ್ನಿಸಲಾಗಿತ್ತು.</p>.<p>ಇದಕ್ಕೆ ಉತ್ತರಿಸಿರುವ ಅಶ್ವಿನ್, 'ಅದು (ಮಂಕಡಿಂಗ್) ಸರಿಯಾಗಿದ್ದರೆ ಇದು ಸರಿ (ವಾರ್ನರ್ ಸಿಕ್ಸರ್) ಎಂಬುದು ಗಂಭೀರ್ ಅವರ ಅಭಿಪ್ರಾಯ. ಅದು ತಪ್ಪಾಗಿದ್ದಾರೆ ಇದು ಕೂಡ ತಪ್ಪು. ಉತ್ತಮ ಮೌಲ್ಯಮಾಪನವಲ್ಲವೇ?' ಎಂದು ಹೇಳಿದ್ದಾರೆ.</p>.<p>ಏತನ್ಮಧ್ಯೆ ಔಟ್ ಆಗದಿದ್ದರೂ ಡೇವಿಡ್ ವಾರ್ನರ್ ಹೊರ ನಡೆದಿದ್ದರು. ಶದಾಬ್ ಖಾನ್ ದಾಳಿಯಲ್ಲಿ ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಕೈಗೆ ಚೆಂಡು ಭದ್ರವಾಗಿ ಸೇರಿತ್ತು. ಫೀಲ್ಡರ್ ಮನವಿಯನ್ನು ಪುರಸ್ಕರಿಸಿದ ಅಂಪೈರ್ ಔಟ್ ತೀರ್ಪು ನೀಡಿದ್ದರು. ಈ ವೇಳೆ ಡಿಆರ್ಎಸ್ ಮೊರೆ ಹೋಗದ ವಾರ್ನರ್ ಪೆವಿಲಿಯನ್ನತ್ತ ಹೆಜ್ಜೆ ಹಾಕಿದರು. ಬಳಿಕ ರಿಪ್ಲೇ ಪರಿಶೀಲಿಸಿದಾಗ ಚೆಂಡು ಬ್ಯಾಟ್ಗೆ ತಗುಲಿರಲಿಲ್ಲ. ಇದರಿಂದಾಗಿ ಅರ್ಧಶತಕ ಗಳಿಸುವ ಅವಕಾಶದಿಂದ ವಂಚಿತರಾಗಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದುಬೈ:</strong> ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವೆ ಗುರುವಾರ ದುಬೈಯಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಕುತೂಹಲದಾಯಕ ಘಟನೆಯೊಂದು ನಡೆದಿತ್ತು.</p>.<p>ಪಾಕಿಸ್ತಾನ ಒಡ್ಡಿದ 177 ರನ್ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಐದು ವಿಕೆಟ್ ರೋಚಕ ಗೆಲುವು ದಾಖಲಿಸಿತ್ತು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ವಾರ್ನರ್ 49 ರನ್ ಗಳಿಸಿ ಆಸೀಸ್ಗೆ ಉತ್ತಮ ಆರಂಭವೊದಗಿಸಲು ನೆರವಾಗಿದ್ದರು.</p>.<p>ಇದನ್ನೂ ಓದಿ:<a href="https://www.prajavani.net/sports/cricket/t20-wc-hasan-ali-drops-catch-matthew-wade-hits-hat-trick-sixes-pakistan-dreams-over-883115.html" itemprop="url">T20 WC: ಕ್ಯಾಚ್ ಕೈಬಿಟ್ಟ ಹಸನ್ ಅಲಿ; ವಿಶ್ವಕಪ್ ಕೈಚೆಲ್ಲಿದ ಪಾಕಿಸ್ತಾನ </a></p>.<p>ಈ ನಡುವೆ ಮೊಹಮ್ಮದ್ ಹಫೀಜ್ ಎಸೆದ ಚೆಂಡು, ಪಿಚ್ನಲ್ಲಿ ಎರಡು ಬಾರಿ ಪುಟಿದೆದ್ದಿತ್ತು. ಇದರ ಸಂಪೂರ್ಣ ಲಾಭ ಪಡೆದ ವಾರ್ನರ್, ಚೆಂಡನ್ನು ಸಿಕ್ಸರ್ಗೆ ಅಟ್ಟಿದ್ದರು.</p>.<p>ಹಫೀಜ್ ಅವರ ಕೈಯಿಂದ ಚೆಂಡು ಜಾರಿತ್ತು ಎಂದು ಹೇಳಲಾಗುತ್ತಿದೆ. ವಾರ್ನರ್ ಕ್ರೀಡಾಸ್ಫೂರ್ತಿ ಮೆರೆದಿದ್ದರೆ 'ಡೆಡ್ ಬಾಲ್' ಎಂದು ಘೋಷಿಸಬಹುದಿತ್ತು. ಆದರೆ ಪಿಚ್ನಲ್ಲಿ ಚೆಂಡು ಎರಡು ಬಾರಿ ಪುಟಿದೆದ್ದ ಕಾರಣ ಅಂಪೈರ್, ಐಸಿಸಿ ನಿಮಯಗಳಿಗೆ ಅನುಸಾರವಾಗಿ 'ನೊ ಬಾಲ್' ಎಂದು ಘೋಷಿಸಿದ್ದರು.</p>.<p>ಪ್ರಸ್ತುತ ಘಟನೆಯು ಕ್ರೀಡಾ ವಲಯದಲ್ಲಿ ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ. ಪ್ರಮುಖವಾಗಿಯೂ ವಾರ್ನರ್ ಕ್ರೀಡಾಸ್ಫೂರ್ತಿ ಬಗ್ಗೆ ಪ್ರಶ್ನೆ ಎತ್ತಲಾಗುತ್ತಿದೆ.</p>.<p>ಈ ಕುರಿತು ಟ್ವೀಟ್ ಮಾಡಿರುವ ಗೌತಮ್ ಗಂಭೀರ್, ಡೇವಿಡ್ ವಾರ್ನರ್ ಅವರ ಕ್ರೀಡಾಸ್ಫೂರ್ತಿಯನ್ನು ಪ್ರಶ್ನಿಸಿದ್ದಾರೆ. ಅಲ್ಲದೆ ಎಂತಹ ನಾಚಿಕೆಗೇಡಿನ ಸಂಗತಿ ಎಂದು ಟೀಕೆ ಮಾಡಿದ್ದಾರೆ.</p>.<p>ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಿಗೂ ಗಂಭೀರ್ ಟ್ಯಾಗ್ ಮಾಡಿದ್ದಾರೆ. ಹಿಂದೆ 'ಮಂಕಡಿಂಗ್' ವಿವಾದದಲ್ಲಿ ಅಶ್ವಿನ್ ಕ್ರೀಡಾಸ್ಫೂರ್ತಿಯನ್ನು ಪ್ರಶ್ನಿಸಲಾಗಿತ್ತು.</p>.<p>ಇದಕ್ಕೆ ಉತ್ತರಿಸಿರುವ ಅಶ್ವಿನ್, 'ಅದು (ಮಂಕಡಿಂಗ್) ಸರಿಯಾಗಿದ್ದರೆ ಇದು ಸರಿ (ವಾರ್ನರ್ ಸಿಕ್ಸರ್) ಎಂಬುದು ಗಂಭೀರ್ ಅವರ ಅಭಿಪ್ರಾಯ. ಅದು ತಪ್ಪಾಗಿದ್ದಾರೆ ಇದು ಕೂಡ ತಪ್ಪು. ಉತ್ತಮ ಮೌಲ್ಯಮಾಪನವಲ್ಲವೇ?' ಎಂದು ಹೇಳಿದ್ದಾರೆ.</p>.<p>ಏತನ್ಮಧ್ಯೆ ಔಟ್ ಆಗದಿದ್ದರೂ ಡೇವಿಡ್ ವಾರ್ನರ್ ಹೊರ ನಡೆದಿದ್ದರು. ಶದಾಬ್ ಖಾನ್ ದಾಳಿಯಲ್ಲಿ ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಕೈಗೆ ಚೆಂಡು ಭದ್ರವಾಗಿ ಸೇರಿತ್ತು. ಫೀಲ್ಡರ್ ಮನವಿಯನ್ನು ಪುರಸ್ಕರಿಸಿದ ಅಂಪೈರ್ ಔಟ್ ತೀರ್ಪು ನೀಡಿದ್ದರು. ಈ ವೇಳೆ ಡಿಆರ್ಎಸ್ ಮೊರೆ ಹೋಗದ ವಾರ್ನರ್ ಪೆವಿಲಿಯನ್ನತ್ತ ಹೆಜ್ಜೆ ಹಾಕಿದರು. ಬಳಿಕ ರಿಪ್ಲೇ ಪರಿಶೀಲಿಸಿದಾಗ ಚೆಂಡು ಬ್ಯಾಟ್ಗೆ ತಗುಲಿರಲಿಲ್ಲ. ಇದರಿಂದಾಗಿ ಅರ್ಧಶತಕ ಗಳಿಸುವ ಅವಕಾಶದಿಂದ ವಂಚಿತರಾಗಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>