<p><strong>ನವದೆಹಲಿ:</strong> ಭಾರತವು 2011ರಲ್ಲಿ ಸಾಧಿಸಿದ್ದ ವಿಶ್ವಕಪ್ ವಿಜಯವು ಸಾಧ್ಯವಾಗಿದ್ದು ತಂಡದ ಎಲ್ಲ ಆಟಗಾರರು, ನೆರವು ಸಿಬ್ಬಂದಿಯಿಂದ. ಜಯದ ಕುರಿತು ಇರುವ ಭ್ರಮೆಯನ್ನು ಸಿಕ್ಸರ್ಗೆ ಎತ್ತುವ ಸಮಯ ಇದು ಎಂದು ಹಿರಿಯ ಆಟಗಾರ ಮತ್ತು ಸಂಸದ ಗೌತಮ್ ಗಂಭೀರ್ ಟ್ವೀಟ್ ಮಾಡಿದ್ದಾರೆ.</p>.<p>ಒಂಬತ್ತು ವರ್ಷಗಳ ಹಿಂದೆ ಏಪ್ರಿಲ್ 2ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ವಿಶ್ವಕಪ್ ಫೈನಲ್ನಲ್ಲಿ ಭಾರತವು ಗೆದ್ದಿತ್ತು. ತಂಡದ ನಾಯಕ ಮಹೇಂದ್ರಸಿಂಗ್ ಧೋನಿ ಅವರು ವಿಜಯದ ಸಿಕ್ಸರ್ ಹೊಡೆದಿದ್ದು. ಆ ಐತಿಹಾಸಿಕ ಕ್ಷಣದ ವಿಡಿಯೊ ತುಣುಕನ್ನು ಕೆಲವು ವೆಬ್ಸೈಟ್ಗಳು ಗುರುವಾರ ಪ್ರಕಟಿಸಿವೆ. ಆ ಸಿಕ್ಸರ್ ಭಾರತದ ಕನಸನ್ನು ನನಸು ಮಾಡಿತು ಎಂದು ಬರೆದಿದ್ದವು.</p>.<p>ಆ ವೆಬ್ಸೈಟ್ಗಳ ತುಣುಕುಗಳನ್ನು ಕೂಡ ಗಂಭೀರ್ ತಮ್ಮ ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಆ ಫೈನಲ್ನಲ್ಲಿ ಗಂಭೀರ್ 97 ರನ್ ಬಾರಿಸಿದ್ದರು. ಅಜೇಯ 91 ರನ್ ಗಳಿಸಿದ್ದ ಧೋನಿ ಪಂದ್ಯಶ್ರೇಷ್ಠ ಗೌರವ ಗಳಿಸಿದ್ದರು<strong>.</strong></p>.<p><strong>ಇದನ್ನೂ ಓದಿ:</strong><a href="https://www.prajavani.net/sports/cricket/on-this-day-of-2011-ms-dhoni-finishes-off-in-style-and-india-win-2nd-icc-world-cup-717003.html" target="_blank">ಭಾರತಕ್ಕೆ 2ನೇ ಸಲ ವಿಶ್ವಕಪ್ ಗೆದ್ದುಕೊಟ್ಟಿದ್ಯಾರು? ಇದು ಬಿಸಿಸಿಐಗೆ ಗೊತ್ತಿಲ್ಲ!</a></p>.<p><strong>ಗೌತಮ್ ದೇಣಿಗೆ:</strong> ಗೌತಮ್ ಗಂಭೀರ್ ಅವರು ಕೋವಿಡ್ನಿಂದ ಬಳಲುತ್ತಿರುವವರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. ದೆಹಲಿ ಪೂರ್ವ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದರಾಗಿರುವ ಅವರು, ತಮ್ಮ ಎರಡು ವರ್ಷದ ವೇತನವನ್ನು ದೇಣಿಗೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಭಾರತವು 2011ರಲ್ಲಿ ಸಾಧಿಸಿದ್ದ ವಿಶ್ವಕಪ್ ವಿಜಯವು ಸಾಧ್ಯವಾಗಿದ್ದು ತಂಡದ ಎಲ್ಲ ಆಟಗಾರರು, ನೆರವು ಸಿಬ್ಬಂದಿಯಿಂದ. ಜಯದ ಕುರಿತು ಇರುವ ಭ್ರಮೆಯನ್ನು ಸಿಕ್ಸರ್ಗೆ ಎತ್ತುವ ಸಮಯ ಇದು ಎಂದು ಹಿರಿಯ ಆಟಗಾರ ಮತ್ತು ಸಂಸದ ಗೌತಮ್ ಗಂಭೀರ್ ಟ್ವೀಟ್ ಮಾಡಿದ್ದಾರೆ.</p>.<p>ಒಂಬತ್ತು ವರ್ಷಗಳ ಹಿಂದೆ ಏಪ್ರಿಲ್ 2ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ವಿಶ್ವಕಪ್ ಫೈನಲ್ನಲ್ಲಿ ಭಾರತವು ಗೆದ್ದಿತ್ತು. ತಂಡದ ನಾಯಕ ಮಹೇಂದ್ರಸಿಂಗ್ ಧೋನಿ ಅವರು ವಿಜಯದ ಸಿಕ್ಸರ್ ಹೊಡೆದಿದ್ದು. ಆ ಐತಿಹಾಸಿಕ ಕ್ಷಣದ ವಿಡಿಯೊ ತುಣುಕನ್ನು ಕೆಲವು ವೆಬ್ಸೈಟ್ಗಳು ಗುರುವಾರ ಪ್ರಕಟಿಸಿವೆ. ಆ ಸಿಕ್ಸರ್ ಭಾರತದ ಕನಸನ್ನು ನನಸು ಮಾಡಿತು ಎಂದು ಬರೆದಿದ್ದವು.</p>.<p>ಆ ವೆಬ್ಸೈಟ್ಗಳ ತುಣುಕುಗಳನ್ನು ಕೂಡ ಗಂಭೀರ್ ತಮ್ಮ ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಆ ಫೈನಲ್ನಲ್ಲಿ ಗಂಭೀರ್ 97 ರನ್ ಬಾರಿಸಿದ್ದರು. ಅಜೇಯ 91 ರನ್ ಗಳಿಸಿದ್ದ ಧೋನಿ ಪಂದ್ಯಶ್ರೇಷ್ಠ ಗೌರವ ಗಳಿಸಿದ್ದರು<strong>.</strong></p>.<p><strong>ಇದನ್ನೂ ಓದಿ:</strong><a href="https://www.prajavani.net/sports/cricket/on-this-day-of-2011-ms-dhoni-finishes-off-in-style-and-india-win-2nd-icc-world-cup-717003.html" target="_blank">ಭಾರತಕ್ಕೆ 2ನೇ ಸಲ ವಿಶ್ವಕಪ್ ಗೆದ್ದುಕೊಟ್ಟಿದ್ಯಾರು? ಇದು ಬಿಸಿಸಿಐಗೆ ಗೊತ್ತಿಲ್ಲ!</a></p>.<p><strong>ಗೌತಮ್ ದೇಣಿಗೆ:</strong> ಗೌತಮ್ ಗಂಭೀರ್ ಅವರು ಕೋವಿಡ್ನಿಂದ ಬಳಲುತ್ತಿರುವವರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. ದೆಹಲಿ ಪೂರ್ವ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದರಾಗಿರುವ ಅವರು, ತಮ್ಮ ಎರಡು ವರ್ಷದ ವೇತನವನ್ನು ದೇಣಿಗೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>