ಅಹಮದಾಬಾದ್: ‘ಆರ್ಸಿಬಿಗೆ ಯಾವುದೇ ಭಯೋತ್ಪಾದಕರ ಬೆದರಿಕೆ ಬಂದಿಲ್ಲ. ಬದಲಿಗೆ ನಗರದಲ್ಲಿ ಬೀಸುತ್ತಿರುವ ಬಿಸಿ ಗಾಳಿಯಿಂದಾಗಿ ತಂಡ ಅಭ್ಯಾಸ ನಡೆಸಲಿಲ್ಲ’ ಎಂದು ಗುಜರಾತ್ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿ ಅನಿಲ್ ಪಟೇಲ್ ತಿಳಿಸಿರುವುದಾಗಿ ವರದಿಯಾಗಿದೆ.
ಐಪಿಎಲ್ 2024ರ 2ನೇ ಎಲಿಮಿನೇಷನ್ ಪಂದ್ಯದಲ್ಲಿ ಇಂದು ರಾಜಸ್ಥಾನ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೆಣಸುತ್ತಿವೆ. ಆದರೆ ಅಭ್ಯಾಸ ನಡೆಸದ ಆರ್ಸಿಬಿ ತಂಡದ ಕುರಿತು ಭಯೋತ್ಪಾದಕರ ಕರಿನೆರಳು ಹಾಗೂ ವಿರಾಟ್ ಕೊಹ್ಲಿಗೆ ಬೆದರಿಕೆ ಕುರಿತು ಸುದ್ದಿಯಾಗಿತ್ತು. ಈ ಸಂಬಂಧ ನಾಲ್ವರನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ಹೇಳಿದ್ದರು.
ಇದೀಗ ಗುಜರಾತ್ ಕ್ರಿಕೆಟ್ ಮಂಡಳಿಯು ಅದನ್ನು ತಳ್ಳಿ ಹಾಕಿದ್ದು, ನಗರದಲ್ಲಿ ಬೀಸುತ್ತಿರುವ ಬಿಸಿ ಗಾಳಿಯೇ ಅಭ್ಯಾಸದಿಂದ ಆರ್ಸಿಬಿ ಹೊರಗುಳಿಯಲು ಕಾರಣ ಎಂದಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.