<p><strong>ಮುಂಬೈ</strong>: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಿಂದ ವಜಾ ಆಗಿರುವ ಕೊಚ್ಚಿ ಟಸ್ಕರ್ಸ್ ತಂಡಕ್ಕೆ ₹ 538 ಕೋಟಿ ಪರಿಹಾರ ನೀಡಬೇಕು ಎಂದು ಮುಂಬೈ ಹೈಕೋರ್ಟ್ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಸೂಚಿಸಿದೆ. </p>.<p>ಇದೇ ಪ್ರಕರಣದ ಕುರಿತು ನ್ಯಾಯಾಲಯ ಈ ಹಿಂದೆ ನೀಡಿದ್ದ ತೀರ್ಪನ್ನು ಪ್ರಶ್ನಿಸಿದ್ದ ಬಿಸಿಸಿಐ ಮೇಲ್ಮನವಿ ಮೇಲ್ಮನವಿ ಸಲ್ಲಿಸಿತ್ತು. ಮಂಗಳವಾರ ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ಚಾಗ್ಲಾ ತೀರ್ಪು ಪ್ರಕಟಿಸಿದರು. </p>.<p>2011ರ ಐಪಿಎಲ್ನಲ್ಲಿ ಕೊಚ್ಚಿ ಟಸ್ಕರ್ಸ್ ತಂಡವು ಆಡಿತ್ತು. ಈ ತಂಡವು ಕೇರಳ ಮೂಲದ ಫ್ರ್ಯಾಂಚೈಸಿಯಾಗಿತ್ತು. ರೆಂಡ್ಜೆವಿಒಸ್ ಸ್ಪೋರ್ಟ್ಸ್ ವರ್ಲ್ಡ್ (ಆರ್ಎಸ್ಡಬ್ಲ್ಯು) ಮತ್ತು ನಂತರ ಕೊಚ್ಚಿ ಕ್ರಿಕೆಟ್ ಪ್ರೈವೆಟ್ ಲಿಮಿಟೆಡ್ (ಕೆಸಿಪಿಎಲ್) ಮಾಲೀಕತ್ವ ವಹಿಸಿದ್ದವು.</p>.<p>ಫ್ರ್ಯಾಂಚೈಸಿಯು ನೀಡಿರುವ ಬ್ಯಾಂಕ್ ಗ್ಯಾರಂಟಿಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದ ಬಿಸಿಸಿಐ 2012ರಲ್ಲಿ ತಂಡವನ್ನು ಟೂರ್ನಿಯಿಂದ ವಜಾಗೊಳಿಸಿತ್ತು. ಫ್ರ್ಯಾಂಚೈಸಿಯು ಕೋರ್ಟ್ ಮೆಟ್ಟಿಲೇರಿತ್ತು. </p>.<p>ಕೆಲವು ವರ್ಷಗಳ ನಂತರ ಕೆಸಿಪಿಎಲ್ಗೆ ₹384.83 ಕೋಟಿ ಮತ್ತು ಈ ಮೊತ್ತಕ್ಕೆ ಶೇ 18ರಷ್ಟು ಬಡ್ಡಿಯನ್ನು 2011ರಿಂದ ಲೆಕ್ಕಹಾಕಿ ನೀಡಬೇಕು ಎಂದು ಬಿಸಿಸಿಐಗೆ ತಿಳಿಸಲಾಗಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಿಂದ ವಜಾ ಆಗಿರುವ ಕೊಚ್ಚಿ ಟಸ್ಕರ್ಸ್ ತಂಡಕ್ಕೆ ₹ 538 ಕೋಟಿ ಪರಿಹಾರ ನೀಡಬೇಕು ಎಂದು ಮುಂಬೈ ಹೈಕೋರ್ಟ್ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಸೂಚಿಸಿದೆ. </p>.<p>ಇದೇ ಪ್ರಕರಣದ ಕುರಿತು ನ್ಯಾಯಾಲಯ ಈ ಹಿಂದೆ ನೀಡಿದ್ದ ತೀರ್ಪನ್ನು ಪ್ರಶ್ನಿಸಿದ್ದ ಬಿಸಿಸಿಐ ಮೇಲ್ಮನವಿ ಮೇಲ್ಮನವಿ ಸಲ್ಲಿಸಿತ್ತು. ಮಂಗಳವಾರ ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ಚಾಗ್ಲಾ ತೀರ್ಪು ಪ್ರಕಟಿಸಿದರು. </p>.<p>2011ರ ಐಪಿಎಲ್ನಲ್ಲಿ ಕೊಚ್ಚಿ ಟಸ್ಕರ್ಸ್ ತಂಡವು ಆಡಿತ್ತು. ಈ ತಂಡವು ಕೇರಳ ಮೂಲದ ಫ್ರ್ಯಾಂಚೈಸಿಯಾಗಿತ್ತು. ರೆಂಡ್ಜೆವಿಒಸ್ ಸ್ಪೋರ್ಟ್ಸ್ ವರ್ಲ್ಡ್ (ಆರ್ಎಸ್ಡಬ್ಲ್ಯು) ಮತ್ತು ನಂತರ ಕೊಚ್ಚಿ ಕ್ರಿಕೆಟ್ ಪ್ರೈವೆಟ್ ಲಿಮಿಟೆಡ್ (ಕೆಸಿಪಿಎಲ್) ಮಾಲೀಕತ್ವ ವಹಿಸಿದ್ದವು.</p>.<p>ಫ್ರ್ಯಾಂಚೈಸಿಯು ನೀಡಿರುವ ಬ್ಯಾಂಕ್ ಗ್ಯಾರಂಟಿಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದ ಬಿಸಿಸಿಐ 2012ರಲ್ಲಿ ತಂಡವನ್ನು ಟೂರ್ನಿಯಿಂದ ವಜಾಗೊಳಿಸಿತ್ತು. ಫ್ರ್ಯಾಂಚೈಸಿಯು ಕೋರ್ಟ್ ಮೆಟ್ಟಿಲೇರಿತ್ತು. </p>.<p>ಕೆಲವು ವರ್ಷಗಳ ನಂತರ ಕೆಸಿಪಿಎಲ್ಗೆ ₹384.83 ಕೋಟಿ ಮತ್ತು ಈ ಮೊತ್ತಕ್ಕೆ ಶೇ 18ರಷ್ಟು ಬಡ್ಡಿಯನ್ನು 2011ರಿಂದ ಲೆಕ್ಕಹಾಕಿ ನೀಡಬೇಕು ಎಂದು ಬಿಸಿಸಿಐಗೆ ತಿಳಿಸಲಾಗಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>