<p><strong>ಮವದೆಹಲಿ</strong>: ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವಣ ದ್ವಿಪಕ್ಷೀಯ ಸರಣಿಗಳನ್ನು ಆಯೋಜಿಸುವುದಿಲ್ಲ. ತಟಸ್ಥ ಸ್ಥಳಗಳಲ್ಲಿಯೂ ಆಡಿಸುವುದಿಲ್ಲ. ಆದರೆ ಬಹುತಂಡಗಳ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ, ಪಾಕ್ ಮುಖಾಮುಖಿಯನ್ನು ತಡೆಯುವುದು ಸಾಧ್ಯವಿಲ್ಲ ಎಂದು ಕೇಂದ್ರ ಕ್ರೀಡಾ ಸಚಿವಾಲಯ ಸ್ಪಷ್ಟಪಡಿಸಿದೆ.</p><p>ಭಾರತದ ಅಂತರರಾಷ್ಟ್ರೀಯ ಸರಣಿಗಳಿಗೆ ಸಂಬಂಧಿಸಿದಂತೆ ಪಾಕಿಸ್ತಾನವನ್ನು ದೃಷ್ಟಿಯಲ್ಲಿಟ್ಟುಕೊಂಡು ಹೊಸ ನೀತಿಯನ್ನು ಸಚಿವಾಲಯ ಬಿಡುಗಡೆ ಮಾಡಿದೆ. ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ತಿಳಿಸಿದೆ.</p><p>‘ಪಾಕಿಸ್ತಾನ ತಂಡ ಇರುವ ಕ್ರೀಡಾಕೂಟಗಳಲ್ಲಿ ಭಾರತದ ಭಾಗವಹಿಸುವಿಕೆಯ ಕುರಿತ ನೀತಿಯು ಸ್ಪಷ್ಟವಾಗಿದೆ. ಭಾರತ ತಂಡಗಳು ಪಾಕಿಸ್ತಾನದಲ್ಲಿ ನಡೆಯುವ ಟೂರ್ನಿಗಳಲ್ಲಿ ಭಾಗವಹಿಸುವುದಿಲ್ಲ. ಅಲ್ಲದೇ ಪಾಕ್ ತಂಡಗಳು ಭಾರತಕ್ಕೆ ಬಂದು ಆಡಲು ಅನುಮತಿಯನ್ನೂ ನೀಡುವುದಿಲ್ಲ’ ಎಂದು ಹೇಳಿದ್ದಾರೆ. </p> <p>ಆದರೂ, ಬಹುತಂಡಗಳ ಸರಣಿಗಳ ಮೇಲೆ ಈ ನೀತಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸಚಿವಾಲಯ ಹೇಳಿದೆ.</p><p>‘ಬಹುಪಕ್ಷೀಯ ಸರಣಿಯಾಗಿರುವ ಏಷ್ಯಾ ಕಪ್ನಲ್ಲಿ ಭಾರತೀಯ ಕ್ರಿಕೆಟ್ ತಂಡವು ಆಡುವುದನ್ನು ನಾವು ತಡೆಯುವುದಿಲ್ಲ’ ಎಂದು ಸಚಿವಾಲಯ ಹೇಳಿದೆ.</p><p>‘ದ್ವಿಪಕ್ಷೀಯ ಕ್ರೀಡಾಕೂಟಗಳಲ್ಲಿ ಭಾರತದ ನೆಲದಲ್ಲಿ ಆಡಲು ಪಾಕಿಸ್ತಾನಕ್ಕೆ ಅನುಮತಿಸಲಾಗುವುದಿಲ್ಲ. ಆದರೆ, ನಾವು ಒಲಿಂಪಿಕ್ ಚಾರ್ಟರ್ಗೆ ಬದ್ಧರಾಗಿರುವುದರಿಂದ ಬಹುಪಕ್ಷೀಯ ಸರಣಿಗಳಲ್ಲಿ ಭಾಗವಹಿಸದಂತೆ ತಂಡವನ್ನು ತಡೆಯುವುದಿಲ್ಲ’ಎಂದು ಅದು ಹೇಳಿದೆ.</p><p>ಯಾವುದೇ ಬಹುಪಕ್ಷೀಯ ಸರಣಿಗಳಿಗಾಗಿ ಭಾರತ ತಂಡಗಳು ಪಾಕಿಸ್ತಾನಕ್ಕೆ ಪ್ರಯಾಣಿಸಲು ಅನುಮತಿಸಲಾಗುತ್ತದೆಯೇ ಎಂದು ಕೇಳಿದಾಗ, ಆ ಸನ್ನಿವೇಶದಲ್ಲಿ, ಏನನ್ನಾದರೂ ನಿರ್ಧರಿಸುವ ಮೊದಲು ನಾವು ಪರಿಸ್ಥಿತಿಯನ್ನು ಪರಿಶೀಲಿಸುತ್ತೇವೆ ಎಂದು ಸಚಿವಾಲಯ ಹೇಳಿರುವುದಾಗಿ ಮೂಲಗಳು ತಿಳಿಸಿವೆ.</p><p>‘ಬಹುತಂಡಗಳ ಟೂರ್ನಿಗಳಲ್ಲಿಯೂ ನಮ್ಮ ಅಥ್ಲೀಟ್ಗಳನ್ನು ತೊಂದರೆಗೆ ಸಿಲುಕಿಸುವುದಿಲ್ಲ. ಎಷ್ಟೇ ಆದರೂ ಪಾಕಿಸ್ತಾನವು ಕೊಂಪೆಯೆಂದು ಘೋಷಿಸಲು ಹಿಂಜರಿಕೆ ಏನಿಲ್ಲ ಮತ್ತು ಅದು ಫಳಫಳ ಹೊಳೆಯುವ ಮರ್ಸಿಡೀಸ್ ಕಾರಿನಂತಿರುವ ಭಾರತಕ್ಕೆ ಕೊಳೆ ಅಂಟಿಸಬಹುದು’ ಎಂದು ಅಧಿಕಾರಿ ಹೇಳಿದರು. </p><p>ಸಚಿವಾಲಯದ ಅಧಿಕೃತ ವೆಬ್ಸೈಟ್ನಲ್ಲಿ ವಿವರವಾದ ಕ್ರೀಡಾ ಪಾಲಿಸಿಯನ್ನು ಪ್ರಕಟಿಸಲಾಗಿದೆ. ಅದರಲ್ಲಿ; ‘ಈಚೆಗೆ ಪೆಹಲ್ಗಾಮ್ನಲ್ಲಿ ನಡೆದಿದ್ದ ಭಯೋತ್ಪಾದನಾ ದಾಳಿಯಲ್ಲಿ 26 ಜನರು ಹತರಾಗಿದ್ದರು. ಆ ದಾಳಿಯು ಪಾಕ್ ಪ್ರಚೋದಿತವಾಗಿದೆ. ಆದ್ದರಿಂದ ನೆರೆಯ ದೇಶವು ಅಪರಾಧಿಯಾಗಿದೆ. ಆ ದಾಳಿಗೆ ಪ್ರತಿಕಾರವಾಗಿ ಭಾರತವು ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ನಡೆಸಿತ್ತು‘ ಎಂದು ಉಲ್ಲೇಖಿಸಿದೆ.</p><p>‘ಅಮೆರಿಕದಲ್ಲಿ ಆಯೋಜನೆಗೊಂಡರೂ ಭಾರತ ಮತ್ತು ಪಾಕ್ ನಡುವಣ ದ್ವಿಪಕ್ಷೀಯ ಸರಣಿ ನಡೆಸುವುದಿಲ್ಲ’ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. </p><p>ಭಾರತವು 2030ರಲ್ಲಿ ಕಾಮನ್ವೆಲ್ತ್ ಗೇಮ್ಸ್ ಮತ್ತು 2036ರಲ್ಲಿ ಒಲಿಂಪಿಕ್ ಕೂಟಕ್ಕೆ ಆತಿಥ್ಯ ವಹಿಸುವ ಅವಕಾಶಕ್ಕಾಗಿ ಬಿಡ್ ಮಾಡಿದೆ. ವಿಶ್ವಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸುವ ದೇಶಗಳು ಎಲ್ಲರನ್ನೂ ಒಳಗೊಳ್ಳಬೇಕಿರುವುದು ಒಲಿಂಪಿಕ್ ಆಂದೋಲನದ ಧ್ಯೇಯವಾಗಿದೆ.</p><p>ಅದಕ್ಕಾಗಿಯೇ ಮುಂದಿನ ತಿಂಗಳು ಬಿಹಾರದಲ್ಲಿ ನಡೆಯಲಿರುವ ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಆಡಲು ಪಾಕಿಸ್ತಾನದ ಆಟಗಾರರಿಗೆ ಕೇಂದ್ರ ಸರ್ಕಾರವು ವೀಸಾ ನೀಡಲು ಸಮ್ಮತಿಸಿದೆ. </p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮವದೆಹಲಿ</strong>: ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವಣ ದ್ವಿಪಕ್ಷೀಯ ಸರಣಿಗಳನ್ನು ಆಯೋಜಿಸುವುದಿಲ್ಲ. ತಟಸ್ಥ ಸ್ಥಳಗಳಲ್ಲಿಯೂ ಆಡಿಸುವುದಿಲ್ಲ. ಆದರೆ ಬಹುತಂಡಗಳ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ, ಪಾಕ್ ಮುಖಾಮುಖಿಯನ್ನು ತಡೆಯುವುದು ಸಾಧ್ಯವಿಲ್ಲ ಎಂದು ಕೇಂದ್ರ ಕ್ರೀಡಾ ಸಚಿವಾಲಯ ಸ್ಪಷ್ಟಪಡಿಸಿದೆ.</p><p>ಭಾರತದ ಅಂತರರಾಷ್ಟ್ರೀಯ ಸರಣಿಗಳಿಗೆ ಸಂಬಂಧಿಸಿದಂತೆ ಪಾಕಿಸ್ತಾನವನ್ನು ದೃಷ್ಟಿಯಲ್ಲಿಟ್ಟುಕೊಂಡು ಹೊಸ ನೀತಿಯನ್ನು ಸಚಿವಾಲಯ ಬಿಡುಗಡೆ ಮಾಡಿದೆ. ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ತಿಳಿಸಿದೆ.</p><p>‘ಪಾಕಿಸ್ತಾನ ತಂಡ ಇರುವ ಕ್ರೀಡಾಕೂಟಗಳಲ್ಲಿ ಭಾರತದ ಭಾಗವಹಿಸುವಿಕೆಯ ಕುರಿತ ನೀತಿಯು ಸ್ಪಷ್ಟವಾಗಿದೆ. ಭಾರತ ತಂಡಗಳು ಪಾಕಿಸ್ತಾನದಲ್ಲಿ ನಡೆಯುವ ಟೂರ್ನಿಗಳಲ್ಲಿ ಭಾಗವಹಿಸುವುದಿಲ್ಲ. ಅಲ್ಲದೇ ಪಾಕ್ ತಂಡಗಳು ಭಾರತಕ್ಕೆ ಬಂದು ಆಡಲು ಅನುಮತಿಯನ್ನೂ ನೀಡುವುದಿಲ್ಲ’ ಎಂದು ಹೇಳಿದ್ದಾರೆ. </p> <p>ಆದರೂ, ಬಹುತಂಡಗಳ ಸರಣಿಗಳ ಮೇಲೆ ಈ ನೀತಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸಚಿವಾಲಯ ಹೇಳಿದೆ.</p><p>‘ಬಹುಪಕ್ಷೀಯ ಸರಣಿಯಾಗಿರುವ ಏಷ್ಯಾ ಕಪ್ನಲ್ಲಿ ಭಾರತೀಯ ಕ್ರಿಕೆಟ್ ತಂಡವು ಆಡುವುದನ್ನು ನಾವು ತಡೆಯುವುದಿಲ್ಲ’ ಎಂದು ಸಚಿವಾಲಯ ಹೇಳಿದೆ.</p><p>‘ದ್ವಿಪಕ್ಷೀಯ ಕ್ರೀಡಾಕೂಟಗಳಲ್ಲಿ ಭಾರತದ ನೆಲದಲ್ಲಿ ಆಡಲು ಪಾಕಿಸ್ತಾನಕ್ಕೆ ಅನುಮತಿಸಲಾಗುವುದಿಲ್ಲ. ಆದರೆ, ನಾವು ಒಲಿಂಪಿಕ್ ಚಾರ್ಟರ್ಗೆ ಬದ್ಧರಾಗಿರುವುದರಿಂದ ಬಹುಪಕ್ಷೀಯ ಸರಣಿಗಳಲ್ಲಿ ಭಾಗವಹಿಸದಂತೆ ತಂಡವನ್ನು ತಡೆಯುವುದಿಲ್ಲ’ಎಂದು ಅದು ಹೇಳಿದೆ.</p><p>ಯಾವುದೇ ಬಹುಪಕ್ಷೀಯ ಸರಣಿಗಳಿಗಾಗಿ ಭಾರತ ತಂಡಗಳು ಪಾಕಿಸ್ತಾನಕ್ಕೆ ಪ್ರಯಾಣಿಸಲು ಅನುಮತಿಸಲಾಗುತ್ತದೆಯೇ ಎಂದು ಕೇಳಿದಾಗ, ಆ ಸನ್ನಿವೇಶದಲ್ಲಿ, ಏನನ್ನಾದರೂ ನಿರ್ಧರಿಸುವ ಮೊದಲು ನಾವು ಪರಿಸ್ಥಿತಿಯನ್ನು ಪರಿಶೀಲಿಸುತ್ತೇವೆ ಎಂದು ಸಚಿವಾಲಯ ಹೇಳಿರುವುದಾಗಿ ಮೂಲಗಳು ತಿಳಿಸಿವೆ.</p><p>‘ಬಹುತಂಡಗಳ ಟೂರ್ನಿಗಳಲ್ಲಿಯೂ ನಮ್ಮ ಅಥ್ಲೀಟ್ಗಳನ್ನು ತೊಂದರೆಗೆ ಸಿಲುಕಿಸುವುದಿಲ್ಲ. ಎಷ್ಟೇ ಆದರೂ ಪಾಕಿಸ್ತಾನವು ಕೊಂಪೆಯೆಂದು ಘೋಷಿಸಲು ಹಿಂಜರಿಕೆ ಏನಿಲ್ಲ ಮತ್ತು ಅದು ಫಳಫಳ ಹೊಳೆಯುವ ಮರ್ಸಿಡೀಸ್ ಕಾರಿನಂತಿರುವ ಭಾರತಕ್ಕೆ ಕೊಳೆ ಅಂಟಿಸಬಹುದು’ ಎಂದು ಅಧಿಕಾರಿ ಹೇಳಿದರು. </p><p>ಸಚಿವಾಲಯದ ಅಧಿಕೃತ ವೆಬ್ಸೈಟ್ನಲ್ಲಿ ವಿವರವಾದ ಕ್ರೀಡಾ ಪಾಲಿಸಿಯನ್ನು ಪ್ರಕಟಿಸಲಾಗಿದೆ. ಅದರಲ್ಲಿ; ‘ಈಚೆಗೆ ಪೆಹಲ್ಗಾಮ್ನಲ್ಲಿ ನಡೆದಿದ್ದ ಭಯೋತ್ಪಾದನಾ ದಾಳಿಯಲ್ಲಿ 26 ಜನರು ಹತರಾಗಿದ್ದರು. ಆ ದಾಳಿಯು ಪಾಕ್ ಪ್ರಚೋದಿತವಾಗಿದೆ. ಆದ್ದರಿಂದ ನೆರೆಯ ದೇಶವು ಅಪರಾಧಿಯಾಗಿದೆ. ಆ ದಾಳಿಗೆ ಪ್ರತಿಕಾರವಾಗಿ ಭಾರತವು ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ನಡೆಸಿತ್ತು‘ ಎಂದು ಉಲ್ಲೇಖಿಸಿದೆ.</p><p>‘ಅಮೆರಿಕದಲ್ಲಿ ಆಯೋಜನೆಗೊಂಡರೂ ಭಾರತ ಮತ್ತು ಪಾಕ್ ನಡುವಣ ದ್ವಿಪಕ್ಷೀಯ ಸರಣಿ ನಡೆಸುವುದಿಲ್ಲ’ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. </p><p>ಭಾರತವು 2030ರಲ್ಲಿ ಕಾಮನ್ವೆಲ್ತ್ ಗೇಮ್ಸ್ ಮತ್ತು 2036ರಲ್ಲಿ ಒಲಿಂಪಿಕ್ ಕೂಟಕ್ಕೆ ಆತಿಥ್ಯ ವಹಿಸುವ ಅವಕಾಶಕ್ಕಾಗಿ ಬಿಡ್ ಮಾಡಿದೆ. ವಿಶ್ವಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸುವ ದೇಶಗಳು ಎಲ್ಲರನ್ನೂ ಒಳಗೊಳ್ಳಬೇಕಿರುವುದು ಒಲಿಂಪಿಕ್ ಆಂದೋಲನದ ಧ್ಯೇಯವಾಗಿದೆ.</p><p>ಅದಕ್ಕಾಗಿಯೇ ಮುಂದಿನ ತಿಂಗಳು ಬಿಹಾರದಲ್ಲಿ ನಡೆಯಲಿರುವ ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಆಡಲು ಪಾಕಿಸ್ತಾನದ ಆಟಗಾರರಿಗೆ ಕೇಂದ್ರ ಸರ್ಕಾರವು ವೀಸಾ ನೀಡಲು ಸಮ್ಮತಿಸಿದೆ. </p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>