<p><strong>ನವದೆಹಲಿ: </strong>‘ಅತ್ಯಂತ ವಿಶೇಷ’ ಎನಿಸಿರುವ ಭಾರತ ವಿರುದ್ಧದ ಸರಣಿಗಾಗಿ ಕಾತರದಿಂದ ಕಾಯುತ್ತಿರುವುದಾಗಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರ ಸ್ಟೀವ್ ಸ್ಮಿತ್ ಹೇಳಿದ್ದಾರೆ.</p>.<p>ಈ ವರ್ಷದ ಅಕ್ಟೋಬರ್ನಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡ, ಮೂರು ಏಕದಿನ, ನಾಲ್ಕು ಟೆಸ್ಟ್ ಹಾಗೂ ಮೂರು ಟ್ವೆಂಟಿ–20 ಪಂದ್ಯಗಳನ್ನು ಆಡಲಿದೆ.</p>.<p>‘ಭಾರತ ಒಂದು ಅದ್ಭುತ ತಂಡ. ಆ ತಂಡವನ್ನು ಎದುರುಗೊಳ್ಳಲು ಕಾತರನಾಗಿದ್ದು, ಇದೊಂದು ಅತ್ಯಂತ ವಿಶೇಷ ಸರಣಿಯಾಗಿರಲಿದೆ’ ಎಂದು ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ ‘ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಸ್ಮಿತ್ ಹೇಳಿದ್ದಾರೆ.</p>.<p>ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರೊಂದಿಗಿನ ತಮ್ಮ ಒಡನಾಟದ ಬಗ್ಗೆ ಮಾತನಾಡಿದ ಸ್ಮಿತ್ ಅವರೊಬ್ಬ ‘ಮಹಾನ್ ವ್ಯಕ್ತಿ’ ಎಂದು ಬಣ್ಣಿಸಿದರು.</p>.<p>‘ಕ್ರೀಡಾಂಗಣದ ಹೊರಗೆ ಅವರೊಂದಿಗೆ (ಕೊಹ್ಲಿ) ಹಲವು ಬಾರಿ ಮಾತನಾಡಿದ್ದೇನೆ. ಭಾರತದಲ್ಲಿನ ಸ್ಥಿತಿಯ ಕುರಿತು ಚರ್ಚೆ ನಡೆಸಿದ್ದೇವೆ. ಅವರೊಬ್ಬ ಮಹಾ ವ್ಯಕ್ತಿ. ಕ್ರೀಡಾಂಗಣದಲ್ಲಿ ನಾವಿಬ್ಬರೂ ಕಠಿಣವಾಗಿ ವರ್ತಿಸಿದ್ದೇವೆ. ಪಂದ್ಯಗಳಲ್ಲಿಇದು ಸಾಮಾನ್ಯ’ ಎಂದು ಸ್ಮಿತ್ ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>‘ಅತ್ಯಂತ ವಿಶೇಷ’ ಎನಿಸಿರುವ ಭಾರತ ವಿರುದ್ಧದ ಸರಣಿಗಾಗಿ ಕಾತರದಿಂದ ಕಾಯುತ್ತಿರುವುದಾಗಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರ ಸ್ಟೀವ್ ಸ್ಮಿತ್ ಹೇಳಿದ್ದಾರೆ.</p>.<p>ಈ ವರ್ಷದ ಅಕ್ಟೋಬರ್ನಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡ, ಮೂರು ಏಕದಿನ, ನಾಲ್ಕು ಟೆಸ್ಟ್ ಹಾಗೂ ಮೂರು ಟ್ವೆಂಟಿ–20 ಪಂದ್ಯಗಳನ್ನು ಆಡಲಿದೆ.</p>.<p>‘ಭಾರತ ಒಂದು ಅದ್ಭುತ ತಂಡ. ಆ ತಂಡವನ್ನು ಎದುರುಗೊಳ್ಳಲು ಕಾತರನಾಗಿದ್ದು, ಇದೊಂದು ಅತ್ಯಂತ ವಿಶೇಷ ಸರಣಿಯಾಗಿರಲಿದೆ’ ಎಂದು ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ ‘ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಸ್ಮಿತ್ ಹೇಳಿದ್ದಾರೆ.</p>.<p>ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರೊಂದಿಗಿನ ತಮ್ಮ ಒಡನಾಟದ ಬಗ್ಗೆ ಮಾತನಾಡಿದ ಸ್ಮಿತ್ ಅವರೊಬ್ಬ ‘ಮಹಾನ್ ವ್ಯಕ್ತಿ’ ಎಂದು ಬಣ್ಣಿಸಿದರು.</p>.<p>‘ಕ್ರೀಡಾಂಗಣದ ಹೊರಗೆ ಅವರೊಂದಿಗೆ (ಕೊಹ್ಲಿ) ಹಲವು ಬಾರಿ ಮಾತನಾಡಿದ್ದೇನೆ. ಭಾರತದಲ್ಲಿನ ಸ್ಥಿತಿಯ ಕುರಿತು ಚರ್ಚೆ ನಡೆಸಿದ್ದೇವೆ. ಅವರೊಬ್ಬ ಮಹಾ ವ್ಯಕ್ತಿ. ಕ್ರೀಡಾಂಗಣದಲ್ಲಿ ನಾವಿಬ್ಬರೂ ಕಠಿಣವಾಗಿ ವರ್ತಿಸಿದ್ದೇವೆ. ಪಂದ್ಯಗಳಲ್ಲಿಇದು ಸಾಮಾನ್ಯ’ ಎಂದು ಸ್ಮಿತ್ ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>