ಅದಕ್ಕೆ ಕಾರಣ ಕೈಬಿಟ್ಟ ಕ್ಯಾಚ್ಗಳು ಮತ್ತು ಬೌಲರ್ಗಳ ಸತ್ವರಹಿತ ಬೌಲಿಂಗ್ ಕೂಡ ಕಾರಣವಾಗಿತ್ತು. ಆದರೆ, ಆ ಪಂದ್ಯದಲ್ಲಿ ಪ್ರಮುಖವಾಗಿ ಅಗ್ರ ಶ್ರೇಣಿಯ ಬ್ಯಾಟರ್ಗಳಾದ ನಾಯಕ ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾಗಿದ್ದರು. ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ಕೆ.ಎಲ್. ರಾಹುಲ್ ಒಬ್ಬರೇ ಅರ್ಧಶತಕ ಗಳಿಸಿದ್ದರು. ರಾಹುಲ್ ಕೀಪಿಂಗ್ನಲ್ಲಿ ಮಾಡಿದ ಕೆಲವು ಲೋಪಗಳು ದುಬಾರಿಯಾಗಿದ್ದವು.ಈ ಎಲ್ಲ ತಪ್ಪುಗಳನ್ನು ತಿದ್ದಿಕೊಳ್ಳದಿದ್ದರೆ ಸರಣಿಯನ್ನು ಕೈಚೆಲ್ಲುವ ಆತಂಕ ಭಾರತ ತಂಡಕ್ಕೆ ಇದೆ. ಮೂರು ಪಂದ್ಯಗಳ ಸರಣಿಯ 2ನೇ ಪಂದ್ಯ ಭಾರತ ಜಯಿಸಿದರೆ ಮಾತ್ರ ಸರಣಿ ಜಯದ ಆಸೆ ಜೀವಂತವಾಗುಳಿಯಲಿದೆ.2015ರಲ್ಲಿ ಮಹೇಂದ್ರಸಿಂಗ್ ಧೋನಿ ಬಳಗವು 1–2ರಿಂದ ಏಕದಿನ ಸರಣಿಯನ್ನು ಬಾಂಗ್ಲಾದಲ್ಲಿ ಸೋತಿತ್ತು. ಆತಿಥೇಯ ತಂಡದ ಆಲ್ರೌಂಡರ್ ಶಕೀಬ್ ಅಲ್ ಹಸನ್, ಮಿರಾಜ್, ಲಿಟನ್ ದಾಸ್ ಮತ್ತು ಬೌಲಿಂಗ್ನಲ್ಲಿ ಮುಸ್ತಫಿಜುರ್ ರೆಹಮಾನ್ ಉತ್ತಮ ಲಯದಲ್ಲಿದ್ದಾರೆ.