’ಪಂದ್ಯ ನೋಡಲು ಕ್ರೀಡಾಂಗಣ ಪ್ರವೇಶಿಸುವಾಗ ಭದ್ರತಾ ಸಿಬ್ಬಂದಿಯೊಬ್ಬರು ನನ್ನನ್ನು ತಡೆದರು. ನನ್ನ ಕೈಯಲ್ಲಿದ್ದ ಬ್ಯಾನರ್ವೊಂದನ್ನು ತೆಗೆದುಕೊಂಡು ಹೋಗಲು ಬಿಡಲಿಲ್ಲ. ನಿಗದಿತ ಅಳತೆಗಿಂತ ದೊಡ್ಡದಿದೆ ಎಂದು ಹೇಳಿದರು. ಅದಕ್ಕೆ ನಾನು ಭದ್ರತಾ ಮೇಲ್ವಿಚಾರಕರೊಂದಿಗೆ ಮಾತನಾಡುತ್ತೇನೆ. ಅವಕಾಶ ಕೊಡುವಂತೆ ವಿನಂತಿಸಿದೆ. ಆಗ ಆ ವ್ಯಕ್ತಿಯು ಈ ವಿಷಯ ಬಗೆಹರಿಯಬೇಕಾದರೆ, ನೀನು ಬಂದಿರುವ ಜಾಗಕ್ಕೆ ಹೋಗು ಎಂದು ವ್ಯಂಗ್ಯ ಮಾಡಿದ್ದೂ ಅಲ್ಲದೇ ತನ್ನ ಸಹೋದ್ಯೋಗಿಗಳ ಬಳಿ ನನ್ನ ಬಗ್ಗೆ ಆಕ್ಷೇಪಾರ್ಹ ಪದಗಳನ್ನು ಬಳಸಿ ಮಾತನಾಡಿದ‘ ಎಂದು ಕೃಷ್ಣಕುಮಾರ್ ದೂರು ನೀಡಿದ್ದಾರೆ.