<p><strong>ಅಬುಧಾಬಿ:</strong> ಸೋಮವಾರ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ತಂಡವು ಸ್ವಲ್ಪ ಎಚ್ಚರ ತಪ್ಪಿದ್ದರೂ ಪ್ಲೇ ಆಫ್ ಹಾದಿ ದುರ್ಗಮವಾಗುವ ಎಲ್ಲ ಸಾಧ್ಯತೆಗಳೂ ಇದ್ದವು. ಆದರೆ, ಪಂದ್ಯದಲ್ಲಿ 11ನೇ ಓವರ್ನಲ್ಲಿ ತಿಳಿದ ಲೆಕ್ಕಾಚಾರದಿಂದ ಆ ಅಪಾಯ ತಪ್ಪಿತು ಎಂದು ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.</p>.<p>ಪಂದ್ಯದ ನಂತರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ’ ನಮ್ಮ ತಂಡವು ಗುರಿ ನೀಡಿತ್ತು. ಆದರೆ, 17.3ನೇ ಓವರ್ಗಳ ಒಳಗೇ ಸೋತಿದ್ದರೆ, ನೆಟ್ ರನ್ರೇಟ್ ಕುಸಿತವಾಗುತ್ತಿತ್ತು. ಈ ವಿಷಯ ನನಗೆ ತಿಳಿದಿದ್ದು 11ನೇ ಓವರ್ ನಡೆಯುವಾಗ. ಆದರೆ ನಮ್ಮ ಚಿತ್ತ ಗೆಲುವಿನತ್ತ ಇದ್ದ ಕಾರಣ ಡೆಲ್ಲಿಗೆ ಜಯ ಸುಲಭವಾಗಲಿಲ್ಲ. ನಾವೂ ಸೋತರೂ ಸುರಕ್ಷಿತವಾದೆವು‘ ಎಂದಿದ್ದಾರೆ.</p>.<p>ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ಸಿಬಿ 20 ಓವರ್ಗಳಲ್ಲಿ 7 ವಿಕೆಟ್ಗಳನ್ನು ಕಳೆದುಕೊಂಡು 152 ರನ್ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಡೆಲ್ಲಿ ಅನುಭವಿ ಶಿಖರ್ ಧವನ್ (54) ಮತ್ತು ಅಜಿಂಕ್ಯ ರಹಾನೆ (60) ಗಳಿಸಿದ ಅರ್ಧಶತಕಗಳ ನೆರವಿನಿಂದ ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ಗೆದ್ದು ಬೀಗಿತ್ತು. ಈ ಪಂದ್ಯವು 19 ಓವರ್ಗಳವರೆಗೆ ಸಾಗಿದ ಕಾರಣ, ಕೊಹ್ಲಿ ಪಡೆ ಸೋಲು ಕಂಡರೂರನ್ರೇಟ್ ಆಧಾರದಲ್ಲಿ ಪ್ಲೇ ಆಫ್ಗೆ ಅರ್ಹತೆ ಪಡೆದುಕೊಂಡಿದೆ.</p>.<p>’11ನೇ ಓವರ್ ವೇಳೆ ತಂಡದ ಆಡಳಿತವು ವಿಷಯ ತಿಳಿಸಿತು. ಅದಾಗಲೇ ಪಂದ್ಯ ನಮ್ಮ ಕೈಯಿಂದ ಜಾರಿದರೂ, ನಂತರದ ಹಂತದಲ್ಲಿ ಹೋರಾಟ ಮಾಡಿ ನಿಯಂತ್ರಣ ಸಾಧಿಸುವ ಪ್ತಯತ್ನ ಮಾಡಿದೆವು. ಪ್ಲೇ ಆಫ್ಗೆ ಅರ್ಹತೆ ಪಡೆದಿರುವುದರಿಂದ ನಮಗೆ ಸಂತಸವಾಗಿದೆ‘ ಎಂದಿದ್ದಾರೆ.</p>.<p>ಮುಂಬೈ ಇಂಡಿಯನ್ಸ್ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, 16 ಅಂಕಗಳನ್ನು ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಆಡಲಿದೆ. ಈ ಪಂದ್ಯವು ಇದೇ 5 ರಂದು ದುಬೈನಲ್ಲಿ ನಡೆಯಲಿದೆ.ಆರ್ಸಿಬಿ 14 ಅಂಕಗಳೊಂದಿಗೆ 3ನೇ<br />ಸ್ಥಾನದಲ್ಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಬುಧಾಬಿ:</strong> ಸೋಮವಾರ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ತಂಡವು ಸ್ವಲ್ಪ ಎಚ್ಚರ ತಪ್ಪಿದ್ದರೂ ಪ್ಲೇ ಆಫ್ ಹಾದಿ ದುರ್ಗಮವಾಗುವ ಎಲ್ಲ ಸಾಧ್ಯತೆಗಳೂ ಇದ್ದವು. ಆದರೆ, ಪಂದ್ಯದಲ್ಲಿ 11ನೇ ಓವರ್ನಲ್ಲಿ ತಿಳಿದ ಲೆಕ್ಕಾಚಾರದಿಂದ ಆ ಅಪಾಯ ತಪ್ಪಿತು ಎಂದು ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.</p>.<p>ಪಂದ್ಯದ ನಂತರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ’ ನಮ್ಮ ತಂಡವು ಗುರಿ ನೀಡಿತ್ತು. ಆದರೆ, 17.3ನೇ ಓವರ್ಗಳ ಒಳಗೇ ಸೋತಿದ್ದರೆ, ನೆಟ್ ರನ್ರೇಟ್ ಕುಸಿತವಾಗುತ್ತಿತ್ತು. ಈ ವಿಷಯ ನನಗೆ ತಿಳಿದಿದ್ದು 11ನೇ ಓವರ್ ನಡೆಯುವಾಗ. ಆದರೆ ನಮ್ಮ ಚಿತ್ತ ಗೆಲುವಿನತ್ತ ಇದ್ದ ಕಾರಣ ಡೆಲ್ಲಿಗೆ ಜಯ ಸುಲಭವಾಗಲಿಲ್ಲ. ನಾವೂ ಸೋತರೂ ಸುರಕ್ಷಿತವಾದೆವು‘ ಎಂದಿದ್ದಾರೆ.</p>.<p>ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ಸಿಬಿ 20 ಓವರ್ಗಳಲ್ಲಿ 7 ವಿಕೆಟ್ಗಳನ್ನು ಕಳೆದುಕೊಂಡು 152 ರನ್ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಡೆಲ್ಲಿ ಅನುಭವಿ ಶಿಖರ್ ಧವನ್ (54) ಮತ್ತು ಅಜಿಂಕ್ಯ ರಹಾನೆ (60) ಗಳಿಸಿದ ಅರ್ಧಶತಕಗಳ ನೆರವಿನಿಂದ ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ಗೆದ್ದು ಬೀಗಿತ್ತು. ಈ ಪಂದ್ಯವು 19 ಓವರ್ಗಳವರೆಗೆ ಸಾಗಿದ ಕಾರಣ, ಕೊಹ್ಲಿ ಪಡೆ ಸೋಲು ಕಂಡರೂರನ್ರೇಟ್ ಆಧಾರದಲ್ಲಿ ಪ್ಲೇ ಆಫ್ಗೆ ಅರ್ಹತೆ ಪಡೆದುಕೊಂಡಿದೆ.</p>.<p>’11ನೇ ಓವರ್ ವೇಳೆ ತಂಡದ ಆಡಳಿತವು ವಿಷಯ ತಿಳಿಸಿತು. ಅದಾಗಲೇ ಪಂದ್ಯ ನಮ್ಮ ಕೈಯಿಂದ ಜಾರಿದರೂ, ನಂತರದ ಹಂತದಲ್ಲಿ ಹೋರಾಟ ಮಾಡಿ ನಿಯಂತ್ರಣ ಸಾಧಿಸುವ ಪ್ತಯತ್ನ ಮಾಡಿದೆವು. ಪ್ಲೇ ಆಫ್ಗೆ ಅರ್ಹತೆ ಪಡೆದಿರುವುದರಿಂದ ನಮಗೆ ಸಂತಸವಾಗಿದೆ‘ ಎಂದಿದ್ದಾರೆ.</p>.<p>ಮುಂಬೈ ಇಂಡಿಯನ್ಸ್ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, 16 ಅಂಕಗಳನ್ನು ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಆಡಲಿದೆ. ಈ ಪಂದ್ಯವು ಇದೇ 5 ರಂದು ದುಬೈನಲ್ಲಿ ನಡೆಯಲಿದೆ.ಆರ್ಸಿಬಿ 14 ಅಂಕಗಳೊಂದಿಗೆ 3ನೇ<br />ಸ್ಥಾನದಲ್ಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>