ರಾಯಲ್ಸ್ ತಂಡವು ಟೂರ್ನಿಯ ಮೊದಲ ಎರಡು ಪಂದ್ಯಗಳಲ್ಲಿ ಗೆದ್ದು ನಂತರದ ನಾಲ್ಕರಲ್ಲಿ ಸೋತಿದೆ. ಆದರೆ ತನ್ನ ಆರಂಭದ ಪಂದ್ಯಗಳಲ್ಲಿ ಸೋತಿದ್ದ ಡೇವಿಡ್ ವಾರ್ನರ್ ನಾಯಕತ್ವದ ಸನ್ರೈಸರ್ಸ್, ನಂತರ ಗೆಲುವಿನ ರುಚಿ ನೋಡಿದೆ. ಆರು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು ಮೂರರಲ್ಲಿ ಸೋತಿದೆ. ತಂಡದ ಬ್ಯಾಟಿಂಗ್ ಪಡೆ ಚೆನ್ನಾಗಿದೆ. ಆದರೆ ಭುವನೇಶ್ವರ್ ಕುಮಾರ್ ಇಲ್ಲದೇ ಬೌಲಿಂಗ್ ಪಡೆಯು ಸೊರಗಿದೆ.ರಾಜಸ್ಥಾನ ತಂಡದಲ್ಲಿರುವ ಬ್ಯಾಟ್ಸ್ಮನ್ಗಳುಗರ್ಜಿಸುವುದನ್ನು ಮರೆತಿದ್ದಾರೆ. ಈ ಪಂದ್ಯದಲ್ಲಿಯೂ ಅವರು ತಮ್ಮ ಲಯಕ್ಕೆ ಮರಳದಿದ್ದರೆ ಮುಂದಿನ ಹಂತದಲ್ಲಿ ಒತ್ತಡ ಎದುರಿಸುವುದು ಖಚಿತ.