ಲಖನೌ ತಂಡಕ್ಕೆ ಎಡಗೈ ಮಧ್ಯಮವೇಗಿ ಜೈದೇವ್ ಉನದ್ಕತ್ ಅವರು ಕೂಡ ಅಲಭ್ಯರಾಗಿದ್ದಾರೆ. ತಂಡವು ಆಡಿದ್ದ ಕಳೆದ ಪಂದ್ಯವು ಮಳೆಗೆ ರದ್ದಾಗಿತ್ತು. ಕೇವಲ ಒಂದು ಪಾಯಿಂಟ್ ಸಿಕ್ಕಿತ್ತು. ತಂಡವು ಆಲ್ರೌಂಡರ್ ಮಾರ್ಕಸ್ ಸ್ಟೊಯನಿಸ್, ದೀಪಕ್ ಹೂಡಾ, ಬ್ಯಾಟರ್ ಆಯುಷ್ ಬಡೋಣಿ, ಕೈಲ್ ಮೇಯರ್ಸ್, ವಿಕೆಟ್ಕೀಪರ್ ನಿಕೊಲಸ್ ಪೂರನ್, ಸ್ಪಿನ್ನರ್ ರವಿ ಬಿಷ್ಣೋಯಿ, ಅಮಿತ್ ಮಿಶ್ರಾ ಅವರ ಆಟದ ಮೇಲೆ ಹೆಚ್ಚು ಭರವಸೆ ಇಟ್ಟಿದೆ.