<p><strong>ಜೈಪುರ</strong>: ಉದಯೋನ್ಮುಖ ತಾರೆ ವೈಭವ್ ಸೂರ್ಯವಂಶಿ ಈ ಹಿಂದಿನ ಪಂದ್ಯದಲ್ಲಿ ತೋರಿದ ಬ್ಯಾಟಿಂಗ್ ಪರಾಕ್ರಮವು ರಾಜಸ್ಥಾನ ರಾಯಲ್ಸ್ ತಂಡದಲ್ಲಿ ನವೋಲ್ಲಾಸ ಮೂಡಿಸಿದೆ. ಗುರುವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಈ ತಂಡಕ್ಕೆ, ಪ್ರಬಲವಾಗಿ ಪುಟಿದೆದ್ದಿರುವ ಮುಂಬೈ ಇಂಡಿಯನ್ಸ್ ತಂಡವನ್ನು ತಡೆದುನಿಲ್ಲಿಸುವ ಸವಾಲು ಇದೆ.</p>.<p>ರಾಯಲ್ಸ್ ತಂಡದ ಲೀಗ್ ಆಸೆ ಕಮರಿಹೋಯಿತು ಎನ್ನುವಷ್ಟರಲ್ಲಿ 14 ವರ್ಷ ವಯಸ್ಸಿನ ವೈಭವ್ ಸೋಮವಾರ ಗುಜರಾತ್ ಟೈಟನ್ಸ್ನ ಪ್ರಬಲ ದಾಳಿಯನ್ನು ಪುಡಿಗಟ್ಟಿ ಅವಿಸ್ಮರಣೀಯ ಇನಿಂಗ್ಸ್ ಆಡಿದ್ದರು. ಆದರೂ ರಾಯಲ್ಸ್ಗೆ ಪ್ಲೇಆಫ್ ಸಾಧ್ಯತೆ ಕ್ಷೀಣವಾಗಿಯೇ ಇದೆ.</p>.<p>ಸಂಜು ಸ್ಯಾಮ್ಸನ್ ಪಕ್ಕೆಲುಬಿನ ಗಾಯದಿಂದ ಹಿಂದೆಸರಿದ ಪರಿಣಾಮ ಅವಕಾಶ ಪಡೆದ ಎಡಗೈ ಬ್ಯಾಟರ್ ವೈಭವ್ ಮೂರೇ ಇನಿಂಗ್ಸ್ ಬಳಿಕ ಮನೆಮಾತಾಗಿದ್ದಾರೆ. ಸ್ಯಾಮ್ಸನ್ ತಂಡಕ್ಕೆ ಮರಳುವ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ. ಅವರು ಏಪ್ರಿಲ್ 16ರಂದು ಕೊನೆಯ ಪಂದ್ಯ ಆಡಿದ್ದರು.</p>.<p>ಜೈಪುರದಲ್ಲಿ ಜೈಸ್ವಾಲ್ ಜೊತೆ ಇನಿಂಗ್ಸ್ ಆರಂಭಿಸಿದ್ದ ಸೂರ್ಯವಂಶಿ ಮೊದಲ ವಿಕೆಟ್ಗೆ 166 ರನ್ ಸೇರಿಸಿ ‘ಕನಸಿನ ಆರಂಭ’ ಒದಗಿಸಿದ್ದರು. ಹೀಗಾಗಿ 210 ರನ್ಗಳ ಗೆಲುವಿನ ಗುರಿಯನ್ನು ರಾಯಲ್ಸ್ ಲೀಲಾಜಾಲವಾಗಿ ತಲುಪಿತು.</p>.<p>ಅಂತರರಾಷ್ಟ್ರೀಯ ಬೌಲರ್ಗಳಿಗೆ ಬೆವರಿಳಿಸಿದ ಸೂರ್ಯವಂಶಿ ಅವರು ಅಗ್ರ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಅವರನ್ನು ಹೇಗೆ ನಿಭಾಯಿಸುವರು ಎನ್ನುವ ಕುತೂಹಲ ಮೂಡಿದೆ.</p>.<p>ರಾಯಲ್ಸ್ ಕೆಳಕ್ರಮಾಂಕದಲ್ಲಿ ಶಿಮ್ರೋನ್ ಹೆಟ್ಮೆಯರ್ ಅವರ ಮೇಲೆ ಒತ್ತಡವಿದೆ. ವೆಸ್ಟ್ ಇಂಡೀಸ್ನ ಈ ಆಟಗಾರ ಈ ಋತುವಿನಲ್ಲಿ ಅಪಾಯಕಾರಿ ಆಟಗಾರನಂತೆ ಕಂಡಿಲ್ಲ.</p>.<p>ಆದರೆ ರಾಯಲ್ಸ್ ಈ ಬಾರಿ ತೀವ್ರ ಪೈಪೋಟಿಯ ಪಂದ್ಯಗಳಲ್ಲಿ ಮೇಲುಗೈಯನ್ನು ಗೆಲುವಾಗಿ ಪರಿವರ್ತಿಸಲು ವಿಫಲವಾದ ಕಾರಣ ಅದು ಅಂಕಪಟ್ಟಿಯಲ್ಲಿ ಕೆಳಭಾಗಕ್ಕೆ ಸರಿದಿದೆ. ಜೋಫ್ರಾ ಆರ್ಚರ್ ವಿಕೆಟ್ಗಳನ್ನು ಪಡೆದರೂ 10ಕ್ಕಿಂತ ಹೆಚ್ಚು ರನ್ ಕೊಟ್ಟು ಧಾರಾಳಿ ಎನಿಸಿದ್ದಾರೆ. ಸಂದೀಪ್ ಶರ್ಮಾ ಕೂಡ ಮಿತವ್ಯಯಿಯಾಗಿಲ್ಲ.</p>.<p>ಆರಂಭದಲ್ಲಿ ಕೆಲವು ಪಂದ್ಯಗಳನ್ನು ಸೋತರೂ ಮುಂಬೈ ಕೊನೆಯ ಐದು ಪಂದ್ಯಗಳನ್ನು ಗೆದ್ದು ಪ್ಲೇ ಆಫ್ ಸಾಧ್ಯತೆ ಉಜ್ವಲಗೊಳಿಸಿದೆ. ಹಾರ್ದಿಕ್ ಪಾಂಡ್ಯ ಪಡೆ ಈಗ ರಣೋತ್ಸಾಹದಲ್ಲಿದೆ.</p>.<p>ಮುಂಬೈ ಪರ ಪದಾರ್ಪಣೆ ಮಾಡಿದ್ದ ಕಾರ್ಬಿನ್ ಬಾಷ್ 200ರ ಸ್ಟ್ರೈಕ್ರೇಟ್ನಲ್ಲಿ ರನ್ ಗಳಿಸಿರುವುದು ಆ ತಂಡಕ್ಕೆ ಸಕಾರಾತ್ಮಕ ಅಂಶ. ಸೂರ್ಯಕುಮಾರ್ ಯಾದವ್, ರೋಹಿತ್ ಶರ್ಮಾ ಅವರೂ ಸಕಾಲದಲ್ಲಿ ಲಯಕಂಡುಕೊಂಡಿದ್ದಾರೆ. ಎದುರಾಳಿಗಳಿಗೆ ಅಪಾಯದ ಸಂಕೇತ ರವಾನಿಸಿದ್ದಾರೆ.</p>.<p><strong>ಪಂದ್ಯ ಆರಂಭ: ರಾತ್ರಿ 7.30.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜೈಪುರ</strong>: ಉದಯೋನ್ಮುಖ ತಾರೆ ವೈಭವ್ ಸೂರ್ಯವಂಶಿ ಈ ಹಿಂದಿನ ಪಂದ್ಯದಲ್ಲಿ ತೋರಿದ ಬ್ಯಾಟಿಂಗ್ ಪರಾಕ್ರಮವು ರಾಜಸ್ಥಾನ ರಾಯಲ್ಸ್ ತಂಡದಲ್ಲಿ ನವೋಲ್ಲಾಸ ಮೂಡಿಸಿದೆ. ಗುರುವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಈ ತಂಡಕ್ಕೆ, ಪ್ರಬಲವಾಗಿ ಪುಟಿದೆದ್ದಿರುವ ಮುಂಬೈ ಇಂಡಿಯನ್ಸ್ ತಂಡವನ್ನು ತಡೆದುನಿಲ್ಲಿಸುವ ಸವಾಲು ಇದೆ.</p>.<p>ರಾಯಲ್ಸ್ ತಂಡದ ಲೀಗ್ ಆಸೆ ಕಮರಿಹೋಯಿತು ಎನ್ನುವಷ್ಟರಲ್ಲಿ 14 ವರ್ಷ ವಯಸ್ಸಿನ ವೈಭವ್ ಸೋಮವಾರ ಗುಜರಾತ್ ಟೈಟನ್ಸ್ನ ಪ್ರಬಲ ದಾಳಿಯನ್ನು ಪುಡಿಗಟ್ಟಿ ಅವಿಸ್ಮರಣೀಯ ಇನಿಂಗ್ಸ್ ಆಡಿದ್ದರು. ಆದರೂ ರಾಯಲ್ಸ್ಗೆ ಪ್ಲೇಆಫ್ ಸಾಧ್ಯತೆ ಕ್ಷೀಣವಾಗಿಯೇ ಇದೆ.</p>.<p>ಸಂಜು ಸ್ಯಾಮ್ಸನ್ ಪಕ್ಕೆಲುಬಿನ ಗಾಯದಿಂದ ಹಿಂದೆಸರಿದ ಪರಿಣಾಮ ಅವಕಾಶ ಪಡೆದ ಎಡಗೈ ಬ್ಯಾಟರ್ ವೈಭವ್ ಮೂರೇ ಇನಿಂಗ್ಸ್ ಬಳಿಕ ಮನೆಮಾತಾಗಿದ್ದಾರೆ. ಸ್ಯಾಮ್ಸನ್ ತಂಡಕ್ಕೆ ಮರಳುವ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ. ಅವರು ಏಪ್ರಿಲ್ 16ರಂದು ಕೊನೆಯ ಪಂದ್ಯ ಆಡಿದ್ದರು.</p>.<p>ಜೈಪುರದಲ್ಲಿ ಜೈಸ್ವಾಲ್ ಜೊತೆ ಇನಿಂಗ್ಸ್ ಆರಂಭಿಸಿದ್ದ ಸೂರ್ಯವಂಶಿ ಮೊದಲ ವಿಕೆಟ್ಗೆ 166 ರನ್ ಸೇರಿಸಿ ‘ಕನಸಿನ ಆರಂಭ’ ಒದಗಿಸಿದ್ದರು. ಹೀಗಾಗಿ 210 ರನ್ಗಳ ಗೆಲುವಿನ ಗುರಿಯನ್ನು ರಾಯಲ್ಸ್ ಲೀಲಾಜಾಲವಾಗಿ ತಲುಪಿತು.</p>.<p>ಅಂತರರಾಷ್ಟ್ರೀಯ ಬೌಲರ್ಗಳಿಗೆ ಬೆವರಿಳಿಸಿದ ಸೂರ್ಯವಂಶಿ ಅವರು ಅಗ್ರ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಅವರನ್ನು ಹೇಗೆ ನಿಭಾಯಿಸುವರು ಎನ್ನುವ ಕುತೂಹಲ ಮೂಡಿದೆ.</p>.<p>ರಾಯಲ್ಸ್ ಕೆಳಕ್ರಮಾಂಕದಲ್ಲಿ ಶಿಮ್ರೋನ್ ಹೆಟ್ಮೆಯರ್ ಅವರ ಮೇಲೆ ಒತ್ತಡವಿದೆ. ವೆಸ್ಟ್ ಇಂಡೀಸ್ನ ಈ ಆಟಗಾರ ಈ ಋತುವಿನಲ್ಲಿ ಅಪಾಯಕಾರಿ ಆಟಗಾರನಂತೆ ಕಂಡಿಲ್ಲ.</p>.<p>ಆದರೆ ರಾಯಲ್ಸ್ ಈ ಬಾರಿ ತೀವ್ರ ಪೈಪೋಟಿಯ ಪಂದ್ಯಗಳಲ್ಲಿ ಮೇಲುಗೈಯನ್ನು ಗೆಲುವಾಗಿ ಪರಿವರ್ತಿಸಲು ವಿಫಲವಾದ ಕಾರಣ ಅದು ಅಂಕಪಟ್ಟಿಯಲ್ಲಿ ಕೆಳಭಾಗಕ್ಕೆ ಸರಿದಿದೆ. ಜೋಫ್ರಾ ಆರ್ಚರ್ ವಿಕೆಟ್ಗಳನ್ನು ಪಡೆದರೂ 10ಕ್ಕಿಂತ ಹೆಚ್ಚು ರನ್ ಕೊಟ್ಟು ಧಾರಾಳಿ ಎನಿಸಿದ್ದಾರೆ. ಸಂದೀಪ್ ಶರ್ಮಾ ಕೂಡ ಮಿತವ್ಯಯಿಯಾಗಿಲ್ಲ.</p>.<p>ಆರಂಭದಲ್ಲಿ ಕೆಲವು ಪಂದ್ಯಗಳನ್ನು ಸೋತರೂ ಮುಂಬೈ ಕೊನೆಯ ಐದು ಪಂದ್ಯಗಳನ್ನು ಗೆದ್ದು ಪ್ಲೇ ಆಫ್ ಸಾಧ್ಯತೆ ಉಜ್ವಲಗೊಳಿಸಿದೆ. ಹಾರ್ದಿಕ್ ಪಾಂಡ್ಯ ಪಡೆ ಈಗ ರಣೋತ್ಸಾಹದಲ್ಲಿದೆ.</p>.<p>ಮುಂಬೈ ಪರ ಪದಾರ್ಪಣೆ ಮಾಡಿದ್ದ ಕಾರ್ಬಿನ್ ಬಾಷ್ 200ರ ಸ್ಟ್ರೈಕ್ರೇಟ್ನಲ್ಲಿ ರನ್ ಗಳಿಸಿರುವುದು ಆ ತಂಡಕ್ಕೆ ಸಕಾರಾತ್ಮಕ ಅಂಶ. ಸೂರ್ಯಕುಮಾರ್ ಯಾದವ್, ರೋಹಿತ್ ಶರ್ಮಾ ಅವರೂ ಸಕಾಲದಲ್ಲಿ ಲಯಕಂಡುಕೊಂಡಿದ್ದಾರೆ. ಎದುರಾಳಿಗಳಿಗೆ ಅಪಾಯದ ಸಂಕೇತ ರವಾನಿಸಿದ್ದಾರೆ.</p>.<p><strong>ಪಂದ್ಯ ಆರಂಭ: ರಾತ್ರಿ 7.30.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>