<p><strong>ಕೋಲ್ಕತ್ತ</strong>: ಈ ವರ್ಷದ ಐಪಿಎಲ್ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡಕ್ಕೆ ಕೃಣಾಲ್ ಪಾಂಡ್ಯ ಅವರ ಆಯ್ಕೆಯು ಸ್ಮಾರ್ಟ್ ಪಿಕ್ ಎಂದು ಆಸ್ಟ್ರೇಲಿಯಾದ ದಿಗ್ಗಜ ಮ್ಯಾಥ್ಯೂ ಹೇಡನ್ ಶ್ಲಾಘಿಸಿದ್ದಾರೆ. ಈ ವರ್ಷ ಈ ಆರ್ಸಿಬಿ ಘಟಕದಲ್ಲಿ ಏನೋ ವಿಶೇಷತೆ ಇದೆ ಎಂದು ಅವರು ಹೇಳಿದ್ದಾರೆ.</p><p>ಶನಿವಾರ ನಡೆದ ಐಪಿಎಲ್ ಆರಂಭಿಕ ಪಂದ್ಯದಲ್ಲಿ ಆರ್ಸಿಬಿ ಕೋಲ್ಕತ್ತ ನೈಟ್ ರೈಡರ್ಸ್ನ ತಂಡವನ್ನು ಕಟ್ಟಿಹಾಕಿ, ಆರ್ಸಿಬಿ ಗಮನಾರ್ಹ ಪುನರಾಗಮನದ ಮೂಲಕ ಏಳು ವಿಕೆಟ್ಗಳ ಜಯ ಸಾಧಿಸಿತು.</p><p>175 ರನ್ಗಳ ಗುರಿಯನ್ನು 22 ಎಸೆತಗಳು ಬಾಕಿ ಇರುವಂತೆ 3 ವಿಕೆಟ್ ಕಳೆದುಕೊಂಡು ಮುಟ್ಟಿತು..</p><p>ಈ ಪಂದ್ಯದಲ್ಲಿ 4 ಓವರ್ಗಳಲ್ಲಿ 29 ರನ್ ನೀಡಿ 3 ವಿಕೆಟ್ ಉರುಳಿಸಿದ ಕೃಣಾಲ್ ಪಾಂಡ್ಯ, ಕೋಲ್ಕತ್ತ ರನ್ ವೇಗಕ್ಕೆ ಕಡಿವಾಣ ಹಾಕುವ ಮೂಲಕ ತಂಡದ ಗೆಲುವಿಗೆ ನೆರವಾಗಿದ್ದರು.</p><p>ಫಿಲ್ ಸಾಲ್ಟ್ (56), ವಿರಾಟ್ ಕೊಹ್ಲಿ (59) ಮತ್ತು ರಜತ್ ಪಾಟಿದಾರ್ (34) ಉತ್ತಮ ಬ್ಯಾಟಿಂಗ್ ಮೂಲಕ ತಂಡಕ್ಕೆ ನೆರವಾದರು.</p><p>ನೂತನ ನಾಯಕ ರಜತ್ ಪಾಟಿದಾರ್ ಅವರಿಗೆ ಇದು ಒಂದು ದೃಢವಾದ ಮತ್ತು ಮಹತ್ವದ ಗೆಲುವು. ವಿರಾಟ್ ಕೊಹ್ಲಿ ಉತ್ತಮ ಫಾರ್ಮ್ನಲ್ಲಿರುವುದು ಖಂಡಿತವಾಗಿಯೂ ಸಹಾಯವಾಗುತ್ತದೆ ಎಂದು ಹೇಡನ್ ಹೇಳಿದ್ದಾರೆ.</p><p>'ಆರ್ಸಿಬಿ ತಂಡ ಉತ್ತಮವಾಗಿದ್ದು, ಕೃಣಾಲ್ ಪಾಂಡ್ಯ ಆರ್ಸಿಬಿಯ ಆಸ್ತಿಯಾಗಿದ್ದಾರೆ. ಜೋಶ್ ಹ್ಯಾಜಲ್ವುಡ್ ಅವರು ಅತ್ಯುತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಬಹಳ ಸಮಯದ ನಂತರ ಆರ್ಸಿಬಿಯ ಉತ್ತಮ ಬೌಲಿಂಗ್ ಪಡೆಯನ್ನು ನೋಡುತ್ತಿದ್ದೇನೆ. ಈ ವರ್ಷ ತಂಡದಲ್ಲಿ ಏನೋ ವಿಶೇಷತೆ ಇದೆ’ ಎಂದಿದ್ದಾರೆ.</p><p>ಎಡಗೈ ಸ್ಪಿನ್ನರ್ ಪಾಂಡ್ಯ ಅವರ ಚೆಂಡಿನ ವೇಗ ಬದಲಿಸುವ ಮತ್ತು ಸ್ಟಂಪ್ಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯ ಕೆಲಸ ಮಾಡಿದೆ ಎಂದು ಹೇಡನ್ ಹೇಳಿದ್ದಾರೆ.</p><p>ಒತ್ತಡದ ಸಂದರ್ಭಗಳಲ್ಲಿ ಅನುಭವ ಕೆಲಸಕ್ಕೆ ಬರುತ್ತದೆ. ಕೃಣಾಲ್ ಗಂಭೀರ ನಿರ್ವಹಣೆ ತೋರಿಸಿದರು. ಒಂದು ಹಂತದಲ್ಲಿ ಆರ್ಸಿಬಿ ತೀವ್ರ ತೊಂದರೆಯಲ್ಲಿದ್ದಂತೆ ತೋರುತ್ತಿತ್ತು, ಬಳಿಕ ಆರ್ಸಿಬಿ ಕಮ್ಬ್ಯಾಕ್ ಅದ್ಭುತವಾಗಿತ್ತು’ ಎಂದಿದ್ದಾರೆ.</p><p>ಐಪಿಎಲ್ ಇತಿಹಾಸದಲ್ಲಿ ಕೆಕೆಆರ್ ವಿರುದ್ಧ 1,000 ರನ್ ಗಡಿ ದಾಟಿದ ಕೊಹ್ಲಿ ಅರ್ಧಶತಕ(59) ಗಳಿಸುವ ಮೂಲಕ ತಂಡದ ಗೆಲುವಿಗೆ ನೆರವಾಗಿದ್ದರು. ಕೊಹ್ಲಿ ಆಟವನ್ನೂ ಹೇಡನ್ ಶ್ಲಾಘಿಸಿದ್ದಾರೆ.</p><p>ಇದು ವಿರಾಟ್ ಕೊಹ್ಲಿಗೆ ಚೇಸ್ ಮಾಡಲು ಉತ್ತಮ ಮೊತ್ತವಾಗಿತ್ತು. ಇಂತಹ ಪಿಚ್ಗಳಲ್ಲಿ ಸರಾಸರಿಗಿಂತ ಕಡಿಮೆ ರನ್ಗಳಿಗೆ ಕಟ್ಟಿಹಾಕಿದರೆ ಚೇಸಿಂಗ್ ಸುಲಭ ಎಂದಿದ್ದಾರೆ.</p> .IPL 2025: ಗಾಯಗೊಂಡ ಮೊಹ್ಸಿನ್ ಖಾನ್ ಬದಲಿಗೆ LSG ಸೇರಿದ ಶಾರ್ದೂಲ್ ಠಾಕೂರ್.IPL 2025 | ಕೋಲ್ಕತ್ತ ‘ಚಾಲೆಂಜ್’ ಗೆದ್ದ ಬೆಂಗಳೂರು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ</strong>: ಈ ವರ್ಷದ ಐಪಿಎಲ್ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡಕ್ಕೆ ಕೃಣಾಲ್ ಪಾಂಡ್ಯ ಅವರ ಆಯ್ಕೆಯು ಸ್ಮಾರ್ಟ್ ಪಿಕ್ ಎಂದು ಆಸ್ಟ್ರೇಲಿಯಾದ ದಿಗ್ಗಜ ಮ್ಯಾಥ್ಯೂ ಹೇಡನ್ ಶ್ಲಾಘಿಸಿದ್ದಾರೆ. ಈ ವರ್ಷ ಈ ಆರ್ಸಿಬಿ ಘಟಕದಲ್ಲಿ ಏನೋ ವಿಶೇಷತೆ ಇದೆ ಎಂದು ಅವರು ಹೇಳಿದ್ದಾರೆ.</p><p>ಶನಿವಾರ ನಡೆದ ಐಪಿಎಲ್ ಆರಂಭಿಕ ಪಂದ್ಯದಲ್ಲಿ ಆರ್ಸಿಬಿ ಕೋಲ್ಕತ್ತ ನೈಟ್ ರೈಡರ್ಸ್ನ ತಂಡವನ್ನು ಕಟ್ಟಿಹಾಕಿ, ಆರ್ಸಿಬಿ ಗಮನಾರ್ಹ ಪುನರಾಗಮನದ ಮೂಲಕ ಏಳು ವಿಕೆಟ್ಗಳ ಜಯ ಸಾಧಿಸಿತು.</p><p>175 ರನ್ಗಳ ಗುರಿಯನ್ನು 22 ಎಸೆತಗಳು ಬಾಕಿ ಇರುವಂತೆ 3 ವಿಕೆಟ್ ಕಳೆದುಕೊಂಡು ಮುಟ್ಟಿತು..</p><p>ಈ ಪಂದ್ಯದಲ್ಲಿ 4 ಓವರ್ಗಳಲ್ಲಿ 29 ರನ್ ನೀಡಿ 3 ವಿಕೆಟ್ ಉರುಳಿಸಿದ ಕೃಣಾಲ್ ಪಾಂಡ್ಯ, ಕೋಲ್ಕತ್ತ ರನ್ ವೇಗಕ್ಕೆ ಕಡಿವಾಣ ಹಾಕುವ ಮೂಲಕ ತಂಡದ ಗೆಲುವಿಗೆ ನೆರವಾಗಿದ್ದರು.</p><p>ಫಿಲ್ ಸಾಲ್ಟ್ (56), ವಿರಾಟ್ ಕೊಹ್ಲಿ (59) ಮತ್ತು ರಜತ್ ಪಾಟಿದಾರ್ (34) ಉತ್ತಮ ಬ್ಯಾಟಿಂಗ್ ಮೂಲಕ ತಂಡಕ್ಕೆ ನೆರವಾದರು.</p><p>ನೂತನ ನಾಯಕ ರಜತ್ ಪಾಟಿದಾರ್ ಅವರಿಗೆ ಇದು ಒಂದು ದೃಢವಾದ ಮತ್ತು ಮಹತ್ವದ ಗೆಲುವು. ವಿರಾಟ್ ಕೊಹ್ಲಿ ಉತ್ತಮ ಫಾರ್ಮ್ನಲ್ಲಿರುವುದು ಖಂಡಿತವಾಗಿಯೂ ಸಹಾಯವಾಗುತ್ತದೆ ಎಂದು ಹೇಡನ್ ಹೇಳಿದ್ದಾರೆ.</p><p>'ಆರ್ಸಿಬಿ ತಂಡ ಉತ್ತಮವಾಗಿದ್ದು, ಕೃಣಾಲ್ ಪಾಂಡ್ಯ ಆರ್ಸಿಬಿಯ ಆಸ್ತಿಯಾಗಿದ್ದಾರೆ. ಜೋಶ್ ಹ್ಯಾಜಲ್ವುಡ್ ಅವರು ಅತ್ಯುತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಬಹಳ ಸಮಯದ ನಂತರ ಆರ್ಸಿಬಿಯ ಉತ್ತಮ ಬೌಲಿಂಗ್ ಪಡೆಯನ್ನು ನೋಡುತ್ತಿದ್ದೇನೆ. ಈ ವರ್ಷ ತಂಡದಲ್ಲಿ ಏನೋ ವಿಶೇಷತೆ ಇದೆ’ ಎಂದಿದ್ದಾರೆ.</p><p>ಎಡಗೈ ಸ್ಪಿನ್ನರ್ ಪಾಂಡ್ಯ ಅವರ ಚೆಂಡಿನ ವೇಗ ಬದಲಿಸುವ ಮತ್ತು ಸ್ಟಂಪ್ಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯ ಕೆಲಸ ಮಾಡಿದೆ ಎಂದು ಹೇಡನ್ ಹೇಳಿದ್ದಾರೆ.</p><p>ಒತ್ತಡದ ಸಂದರ್ಭಗಳಲ್ಲಿ ಅನುಭವ ಕೆಲಸಕ್ಕೆ ಬರುತ್ತದೆ. ಕೃಣಾಲ್ ಗಂಭೀರ ನಿರ್ವಹಣೆ ತೋರಿಸಿದರು. ಒಂದು ಹಂತದಲ್ಲಿ ಆರ್ಸಿಬಿ ತೀವ್ರ ತೊಂದರೆಯಲ್ಲಿದ್ದಂತೆ ತೋರುತ್ತಿತ್ತು, ಬಳಿಕ ಆರ್ಸಿಬಿ ಕಮ್ಬ್ಯಾಕ್ ಅದ್ಭುತವಾಗಿತ್ತು’ ಎಂದಿದ್ದಾರೆ.</p><p>ಐಪಿಎಲ್ ಇತಿಹಾಸದಲ್ಲಿ ಕೆಕೆಆರ್ ವಿರುದ್ಧ 1,000 ರನ್ ಗಡಿ ದಾಟಿದ ಕೊಹ್ಲಿ ಅರ್ಧಶತಕ(59) ಗಳಿಸುವ ಮೂಲಕ ತಂಡದ ಗೆಲುವಿಗೆ ನೆರವಾಗಿದ್ದರು. ಕೊಹ್ಲಿ ಆಟವನ್ನೂ ಹೇಡನ್ ಶ್ಲಾಘಿಸಿದ್ದಾರೆ.</p><p>ಇದು ವಿರಾಟ್ ಕೊಹ್ಲಿಗೆ ಚೇಸ್ ಮಾಡಲು ಉತ್ತಮ ಮೊತ್ತವಾಗಿತ್ತು. ಇಂತಹ ಪಿಚ್ಗಳಲ್ಲಿ ಸರಾಸರಿಗಿಂತ ಕಡಿಮೆ ರನ್ಗಳಿಗೆ ಕಟ್ಟಿಹಾಕಿದರೆ ಚೇಸಿಂಗ್ ಸುಲಭ ಎಂದಿದ್ದಾರೆ.</p> .IPL 2025: ಗಾಯಗೊಂಡ ಮೊಹ್ಸಿನ್ ಖಾನ್ ಬದಲಿಗೆ LSG ಸೇರಿದ ಶಾರ್ದೂಲ್ ಠಾಕೂರ್.IPL 2025 | ಕೋಲ್ಕತ್ತ ‘ಚಾಲೆಂಜ್’ ಗೆದ್ದ ಬೆಂಗಳೂರು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>