<p><strong>ಚೆನ್ನೈ:</strong> ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡವು ಈ ಸಲದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ. ತಂಡದ ವೈಫಲ್ಯದ ಕುರಿತು ಮಾತನಾಡಿರುವ ನಾಯಕ ಎಂ.ಎಸ್.ಧೋನಿ, ನಾಲ್ಕೈದು ಆಟಗಾರರು ಒಂದೇ ಸಲ ಲಯ ಕಳೆದುಕೊಂಡರೆ ನಿರೀಕ್ಷಿತ ಫಲಿತಾಂಶ ಕಾಣುವುದು ಕಷ್ಟ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.</p><p>ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಶುಕ್ರವಾರ ನಡೆದ ಪಂದ್ಯದಲ್ಲಿ ಧೋನಿ ಪಡೆ 5 ವಿಕೆಟ್ ಅಂತರದ ಸೋಲು ಅನುಭವಿಸಿತು. ಇದು, ಟೂರ್ನಿಯಲ್ಲಿ ಆಡಿರುವ 9 ಪಂದ್ಯಗಳಲ್ಲಿ ಈ ತಂಡಕ್ಕೆ ಎದುರಾರ 7ನೇ ಸೋಲು. ತವರಿನಲ್ಲಿ ಸತತ ನಾಲ್ಕನೇ ಮುಖಭಂಗ.</p><p>ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್ಕೆ 19.5 ಓವರ್ಗಳಲ್ಲಿ 154 ರನ್ ಗಳಿಸಿ ಆಲೌಟ್ ಆಗಿತ್ತು. ಈ ಗುರಿ ಬೆನ್ನತ್ತಿದ ರೈಸರ್ಸ್ ಇನ್ನೂ 8 ಎಸೆತ ಬಾಕಿ ಇರುವಂತೆಯೇ 5 ವಿಕೆಟ್ಗೆ 155 ರನ್ ಗಳಿಸಿತು.</p>.<p>ಪಂದ್ಯದ ಬಳಿಕ ಮಾತನಾಡಿರುವ ಧೋನಿ, 'ಇಂತಹ ಟೂರ್ನಿಗಳಲ್ಲಿ ಒಂದು ಅಥವಾ ಎರಡು ವಿಭಾಗಗಳಲ್ಲಿ ದೋಷಗಳಿದ್ದರೆ ಸರಿಪಡಿಸಿಕೊಳ್ಳಬಹುದು. ಆದರೆ, ತಂಡದಲ್ಲಿರುವ ಬಹುತೇಕ ಆಟಗಾರರು ಸರಿಯಾಗಿ ಆಡದಿದ್ದರೆ, ತುಂಬಾ ಕಷ್ಟವಾಗುತ್ತದೆ' ಎಂದು ಹೇಳಿದ್ದಾರೆ.</p><p>ಸಾಮಾನ್ಯವಾಗಿ ಆಡುವ ಹನ್ನೊಂದರ ಬಳಗದಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡದ ಚೆನ್ನೈ, ಈ ಬಾರಿ ಆಡಿರುವ 9 ಪಂದ್ಯಗಳಲ್ಲಿ 19 ಆಟಗಾರರನ್ನು ಆಡಿಸಿದೆ. ಈ ಕುರಿತು, ಉತ್ತಮ ಸಂಯೋಜನೆ ಹುಡುಕಬೇಕಿತ್ತು. ಹಾಗಾಗಿ, ಬದಲಾವಣೆ ಮಾಡದೆ ಬೇರೆ ದಾರಿ ಇರಲಿಲ್ಲ ಎಂದಿದ್ದಾರೆ ಧೋನಿ.</p><p>'ಕೆಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಒಂದುವೇಳೆ, ಹೆಚ್ಚಿನವರು ಚೆನ್ನಾಗಿ ಆಡಿದರೆ, ಕೆಲವರಿಗೆ ಹೆಚ್ಚುವರಿ ಅವಕಾಶ ನೀಡಬಹುದು. ಅಂದುಕೊಂಡಂತೆ ಆಗದಿದ್ದರೆ, ಮತ್ತೊಬ್ಬ ಆಟಗಾರನತ್ತ ಮುಖ ಮಾಡಬೇಕಾಗುತ್ತದೆ. ಆದರೆ, ಒಂದೇ ಸಲ ನಾಲ್ಕೈದು ಆಟಗಾರರು ಸರಿಯಾಗಿ ಆಡದಿದ್ದರೆ ಬದಲಾವಣೆಗಳನ್ನು ಮಾಡಲೇಬೇಕಾಗುತ್ತದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.</p>.IPL 2025 | CSK vs SRH: ಹರ್ಷಲ್ ದಾಳಿ: ಸನ್ಗೆ ಜಯ.IPL | ಕೊಹ್ಲಿ vs ರಾಹುಲ್ ಸೆಣಸಾಟಕ್ಕೆ ದೆಹಲಿ ಸಜ್ಜು: ಮತ್ತಷ್ಟು ಮಾಹಿತಿ ಇಲ್ಲಿದೆ.<p>ಈ ಬಾರಿ ಉತ್ತಮ ಪ್ರದರ್ಶನ ನೀಡಲು ವಿಫಲರಾಗುತ್ತಿರುವ ಸಿಎಸ್ಕೆ ಬ್ಯಾಟರ್ಗಳು, ಪವರ್ಪ್ಲೇ ಅವಧಿಯಲ್ಲೂ ರನ್ ಗಳಿಸಲು ಪರದಾಡುತ್ತಿದ್ದಾರೆ.</p><p><strong>ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೇ ಸ್ಥಾನ<br></strong>ಆಡಿರುವ 9 ಪಂದ್ಯಗಳಲ್ಲಿ ಚೆನ್ನೈ ಗೆದ್ದಿರುವುದು ಕೇವಲ 2 ಪಂದ್ಯಗಳಲ್ಲಿ. ಹೀಗಾಗಿ, ಕೇವಲ 4 ಪಾಯಿಂಟ್ಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿದೆ. ಲೀಗ್ ಹಂತದಲ್ಲಿ ಉಳಿದಿರುವ ಐದೂ ಪಂದ್ಯಗಳಲ್ಲಿ ಜಯ ಸಾಧಿಸಿದರೂ, ಉಳಿದ ಪಂದ್ಯಗಳ ಫಲಿತಾಂಶಗಳು ಚೆನ್ನೈ ತಂಡದ ಪ್ಲೇ ಆಫ್ ಹಾದಿಯನ್ನು ನಿರ್ಧರಿಸಲಿವೆ. ಹೀಗಾಗಿ, ಐಪಿಎಲ್ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾದ ಸಿಎಸ್ಕೆ ಈ ಬಾರಿ, ಪ್ಲೇ ಆಫ್ ತಲುಪುವುದು ಅನುಮಾನ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ:</strong> ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡವು ಈ ಸಲದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ. ತಂಡದ ವೈಫಲ್ಯದ ಕುರಿತು ಮಾತನಾಡಿರುವ ನಾಯಕ ಎಂ.ಎಸ್.ಧೋನಿ, ನಾಲ್ಕೈದು ಆಟಗಾರರು ಒಂದೇ ಸಲ ಲಯ ಕಳೆದುಕೊಂಡರೆ ನಿರೀಕ್ಷಿತ ಫಲಿತಾಂಶ ಕಾಣುವುದು ಕಷ್ಟ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.</p><p>ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಶುಕ್ರವಾರ ನಡೆದ ಪಂದ್ಯದಲ್ಲಿ ಧೋನಿ ಪಡೆ 5 ವಿಕೆಟ್ ಅಂತರದ ಸೋಲು ಅನುಭವಿಸಿತು. ಇದು, ಟೂರ್ನಿಯಲ್ಲಿ ಆಡಿರುವ 9 ಪಂದ್ಯಗಳಲ್ಲಿ ಈ ತಂಡಕ್ಕೆ ಎದುರಾರ 7ನೇ ಸೋಲು. ತವರಿನಲ್ಲಿ ಸತತ ನಾಲ್ಕನೇ ಮುಖಭಂಗ.</p><p>ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್ಕೆ 19.5 ಓವರ್ಗಳಲ್ಲಿ 154 ರನ್ ಗಳಿಸಿ ಆಲೌಟ್ ಆಗಿತ್ತು. ಈ ಗುರಿ ಬೆನ್ನತ್ತಿದ ರೈಸರ್ಸ್ ಇನ್ನೂ 8 ಎಸೆತ ಬಾಕಿ ಇರುವಂತೆಯೇ 5 ವಿಕೆಟ್ಗೆ 155 ರನ್ ಗಳಿಸಿತು.</p>.<p>ಪಂದ್ಯದ ಬಳಿಕ ಮಾತನಾಡಿರುವ ಧೋನಿ, 'ಇಂತಹ ಟೂರ್ನಿಗಳಲ್ಲಿ ಒಂದು ಅಥವಾ ಎರಡು ವಿಭಾಗಗಳಲ್ಲಿ ದೋಷಗಳಿದ್ದರೆ ಸರಿಪಡಿಸಿಕೊಳ್ಳಬಹುದು. ಆದರೆ, ತಂಡದಲ್ಲಿರುವ ಬಹುತೇಕ ಆಟಗಾರರು ಸರಿಯಾಗಿ ಆಡದಿದ್ದರೆ, ತುಂಬಾ ಕಷ್ಟವಾಗುತ್ತದೆ' ಎಂದು ಹೇಳಿದ್ದಾರೆ.</p><p>ಸಾಮಾನ್ಯವಾಗಿ ಆಡುವ ಹನ್ನೊಂದರ ಬಳಗದಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡದ ಚೆನ್ನೈ, ಈ ಬಾರಿ ಆಡಿರುವ 9 ಪಂದ್ಯಗಳಲ್ಲಿ 19 ಆಟಗಾರರನ್ನು ಆಡಿಸಿದೆ. ಈ ಕುರಿತು, ಉತ್ತಮ ಸಂಯೋಜನೆ ಹುಡುಕಬೇಕಿತ್ತು. ಹಾಗಾಗಿ, ಬದಲಾವಣೆ ಮಾಡದೆ ಬೇರೆ ದಾರಿ ಇರಲಿಲ್ಲ ಎಂದಿದ್ದಾರೆ ಧೋನಿ.</p><p>'ಕೆಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಒಂದುವೇಳೆ, ಹೆಚ್ಚಿನವರು ಚೆನ್ನಾಗಿ ಆಡಿದರೆ, ಕೆಲವರಿಗೆ ಹೆಚ್ಚುವರಿ ಅವಕಾಶ ನೀಡಬಹುದು. ಅಂದುಕೊಂಡಂತೆ ಆಗದಿದ್ದರೆ, ಮತ್ತೊಬ್ಬ ಆಟಗಾರನತ್ತ ಮುಖ ಮಾಡಬೇಕಾಗುತ್ತದೆ. ಆದರೆ, ಒಂದೇ ಸಲ ನಾಲ್ಕೈದು ಆಟಗಾರರು ಸರಿಯಾಗಿ ಆಡದಿದ್ದರೆ ಬದಲಾವಣೆಗಳನ್ನು ಮಾಡಲೇಬೇಕಾಗುತ್ತದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.</p>.IPL 2025 | CSK vs SRH: ಹರ್ಷಲ್ ದಾಳಿ: ಸನ್ಗೆ ಜಯ.IPL | ಕೊಹ್ಲಿ vs ರಾಹುಲ್ ಸೆಣಸಾಟಕ್ಕೆ ದೆಹಲಿ ಸಜ್ಜು: ಮತ್ತಷ್ಟು ಮಾಹಿತಿ ಇಲ್ಲಿದೆ.<p>ಈ ಬಾರಿ ಉತ್ತಮ ಪ್ರದರ್ಶನ ನೀಡಲು ವಿಫಲರಾಗುತ್ತಿರುವ ಸಿಎಸ್ಕೆ ಬ್ಯಾಟರ್ಗಳು, ಪವರ್ಪ್ಲೇ ಅವಧಿಯಲ್ಲೂ ರನ್ ಗಳಿಸಲು ಪರದಾಡುತ್ತಿದ್ದಾರೆ.</p><p><strong>ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೇ ಸ್ಥಾನ<br></strong>ಆಡಿರುವ 9 ಪಂದ್ಯಗಳಲ್ಲಿ ಚೆನ್ನೈ ಗೆದ್ದಿರುವುದು ಕೇವಲ 2 ಪಂದ್ಯಗಳಲ್ಲಿ. ಹೀಗಾಗಿ, ಕೇವಲ 4 ಪಾಯಿಂಟ್ಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿದೆ. ಲೀಗ್ ಹಂತದಲ್ಲಿ ಉಳಿದಿರುವ ಐದೂ ಪಂದ್ಯಗಳಲ್ಲಿ ಜಯ ಸಾಧಿಸಿದರೂ, ಉಳಿದ ಪಂದ್ಯಗಳ ಫಲಿತಾಂಶಗಳು ಚೆನ್ನೈ ತಂಡದ ಪ್ಲೇ ಆಫ್ ಹಾದಿಯನ್ನು ನಿರ್ಧರಿಸಲಿವೆ. ಹೀಗಾಗಿ, ಐಪಿಎಲ್ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾದ ಸಿಎಸ್ಕೆ ಈ ಬಾರಿ, ಪ್ಲೇ ಆಫ್ ತಲುಪುವುದು ಅನುಮಾನ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>