‘ಹರಾಜು ಪ್ರಕ್ರಿಯೆಯಲ್ಲಿ ಉತ್ತಮ ತಂಡವನ್ನು ಕಟ್ಟುವ ಕೆಲಸ ಯಶಸ್ವಿಯಾಗಿ ನಡೆದಿದೆ. ಮುಂಬೈನ ವಾತಾವರಣದಲ್ಲಿ ಆಡಲು ಬೇಕಾದ ಮಹತ್ವದ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದೇವೆ. ಶಿಖರ್ ಅವರಂತಹ ಅನುಭವಿ ಮತ್ತು ಪ್ರತಿಭಾನ್ವಿತ ಬ್ಯಾಟರ್ ಇರುವುದು ತಂಡದ ಬಲ ಹೆಚ್ಚಿಸಿದೆ. ಅತ್ಯಂತ ಚುರುಕಿನ ಆಟಗಾರ, ಅಭಿಮಾನಿಗಳನ್ನು ತಮ್ಮ ಆಟದ ಮೂಲಕ ಮನರಂಜಿಸುವ ಆಟಗಾರ. ಅವರಿಂದಾಗಿ ತಂಡದಲ್ಲಿಯೂ ಲವಲವಿಕೆಯ ವಾತಾವರಣ ನೆಲೆ ಮಾಡಿದೆ’ ಎಂದು ಮಯಂಕ್ ಹೇಳಿದರು.