ಬೆಂಗಳೂರು: ರಾಧಾ ಯಾದವ್ (11ಕ್ಕೆ3) ಮತ್ತು ಶಾಲಿನಿ ರಾಕೇಶ್ ಶರ್ಮಾ (14ಕ್ಕೆ2) ಅವರ ದಾಳಿಯನ್ನು ಸಮರ್ಥವಾಗಿ ಎದುರಿಸಲು ವಿಫಲವಾದ ಕರ್ನಾಟಕ ತಂಡವು ಬಿಸಿಸಿಐ ಮಹಿಳಾ ಸೀನಿಯರ್ ಟ್ವೆಂಟಿ–20 ಟ್ರೋಫಿ ಕ್ರಿಕೆಟ್ ಟೂರ್ನಿಯ ಬರೋಡ ಎದುರಿನ ಪಂದ್ಯದಲ್ಲಿ 33ರನ್ಗಳಿಂದ ಸೋತಿದೆ.
ಮುಂಬೈನ ಸಚಿನ್ ತೆಂಡೂಲ್ಕರ್ ಜಿಮ್ಖಾನದಲ್ಲಿ ಮಂಗಳವಾರ ನಡೆದ ಪಂದ್ಯಕ್ಕೆ ಮಳೆ ಅಡ್ಡಿಯಾಯಿತು. ಹೀಗಾಗಿ ಓವರ್ಗಳನ್ನು 18ಕ್ಕೆ ಕಡಿತಗೊಳಿಸಲಾಗಿತ್ತು. ಮೊದಲು ಬ್ಯಾಟ್ ಮಾಡಿದ ಬರೋಡ 6 ವಿಕೆಟ್ ಕಳೆದುಕೊಂಡು 97ರನ್ ಸೇರಿಸಿತು.
ಸುಲಭ ಗುರಿ ಬೆನ್ನಟ್ಟಿದ ವೇದಾ ಕೃಷ್ಣಮೂರ್ತಿ ಸಾರಥ್ಯದ ಕರ್ನಾಟಕ ತಂಡವು 9 ವಿಕೆಟ್ಗೆ 64 ರನ್ ಕಲೆಹಾಕಲಷ್ಟೇ ಶಕ್ತವಾಯಿತು.