<p><strong>ಬೆಂಗಳೂರು:</strong> ಎಡಗೈ ಬ್ಯಾಟರ್ ಆರ್. ಸ್ಮರಣ್ ಅವರ ಅಬ್ಬರದ ಶತಕದಿಂದಾಗಿ ಗುಲ್ಬರ್ಗ ಮಿಸ್ಟಿಕ್ಸ್ ತಂಡವು ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ವಿರುದ್ಧ 3 ವಿಕೆಟ್ಗಳ ರೋಚಕ ಜಯ ಸಾಧಿಸಿತು.</p>.<p>ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಫಲಿತಾಂಶವು ಕೊನೆಯ ಎಸೆತದಲ್ಲಿ ನಿರ್ಧಾರವಾಯಿತು. 197 ರನ್ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಗುಲ್ಬರ್ಗ ತಂಡವು ಇನಿಂಗ್ಸ್ನ ಎರಡನೇ ಓವರ್ನಲ್ಲಿಯೇ 7 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಛಲದ ಬ್ಯಾಟಿಂಗ್ ಮಾಡಿದ ಸ್ಮರಣ್ (ಔಟಾಗದೆ 104; 60ಎ, 4X11, 6X4) ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ತಂಡವು 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 200 ರನ್ ಗಳಿಸಿತು. </p>.<p>ಸ್ಮರಣ್ ಅವರು ಕೆ.ವಿ. ಅನೀಶ್ (24; 17ಎ) ಅವರೊಂದಿಗೆ 3ನೇ ವಿಕೆಟ್ ಜೊತೆಯಾಟದಲ್ಲಿ 53 ರನ್ ಸೇರಿಸಿದರು. ಪ್ರವೀಣ ದುಬೆ (37; 21ಎ) ಅವರೊಂದಿಗೆ 6ನೇ ವಿಕೆಟ್ ಜೊತೆಯಾಟದಲ್ಲಿ 83 ರನ್ ಸೇರಿಸಿದ್ದು ಗೆಲುವಿನಲ್ಲಿ ಪ್ರಮುಖ ಘಟ್ಟವಾಯಿತು. ಆದರೆ 19ನೇ ಓವರ್ನಲ್ಲಿ ವಿದ್ಯಾಧರ್ ಪಾಟೀಲ ಹಾಕಿದ ಓವರ್ನಲ್ಲಿ ದುಬೆ ಔಟಾದರು. ಇದರಿಂದಾಗಿ ಆತಂಕ ಮೂಡಿತು. </p>.<p>ಕೊನೆಯ ಓವರ್ನಲ್ಲಿ ಗೆಲುವಿಗೆ 10 ರನ್ಗಳ ಅಗತ್ಯವಿತ್ತು. ಸ್ಮರಣ್ ಅವರೊಂದಿಗೆ ಜೊತೆಗೂಡಿದ ರಿತೇಶ್ ಭಟ್ಕಳ 4 ಎಸೆತಗಳಲ್ಲಿ 6 ರನ್ ಗಳಿಸಿದರು. ಆದರೆ ರಿತೇಶ್ ಐದನೇ ಎಸೆತದಲ್ಲಿ ರನ್ಔಟ್ ಆದರು. ಕೊನೆಯ ಎಸೆತದಲ್ಲಿ ಕ್ರೀಸ್ಗೆ ಬಂದ ಸ್ಮರಣ್ ಅವರು ಮನೋಜ್ ಭಾಂಡಗೆ ಎಸೆತವನ್ನು ಬೌಂಡರಿಗೆರೆ ದಾಟಿಸಿದರು. </p>.<p><strong>ಕರುಣ್–ದ್ರಾವಿಡ್ ಜೊತೆಯಾಟ</strong></p><p>ಟಾಸ್ ಗೆದ್ದ ಗುಲ್ಬರ್ಗ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೈಸೂರು ತಂಡವು ಆರಂಭದಲ್ಲಿಯೇ ಆಘಾತ ಅನುಭವಿಸಿತು. ಪೃಥ್ವಿರಾಜ್ ಶೇಖಾವತ್ ಹಾಕಿದ ನಾಲ್ಕನೇ ಓವರ್ನಲ್ಲಿ ಆರಂಭಿಕ ಜೋಡಿ ಎಸ್.ಯು. ಕಾರ್ತಿಕ್ ಮತ್ತು ಸಿ.ಎ. ಕಾರ್ತಿಕ್ ಅವರಿಬ್ಬರೂ ಔಟಾದರು. ನಾಯಕ ಕರುಣ್ ನಾಯರ್ (66; 35ಎ, 4X8, 6X3) ಮತ್ತು ಸಮಿತ್ ರಾಹುಲ್ ದ್ರಾವಿಡ್ (33; 24ಎ, 4X4, 6X1) ಮೂರನೇ ವಿಕೆಟ್ ಜೊತೆಯಾಟದಲ್ಲಿ 81 ರನ್ ಗಳಿಸಿದರು. </p>.<p>ಕೊನೆಯ ಹಂತದ ಓವರ್ಗಳಲ್ಲಿ ಜೆ. ಸುಚಿತ್ 13 ಎಸೆತಗಳಲ್ಲಿ 40 ರನ್ ಗಳಿಸಿದರು. ಇದರಿಂದಾಗಿ ತಂಡವು ದೊಡ್ಡ ಮೊತ್ತ ಗಳಿಸಿತು. ಸುಚಿತ್ 4 ಸಿಕ್ಸರ್, 2 ಬೌಂಡರಿ ಸಿಡಿಸಿದರು. </p>.<p>ಸಂಕ್ಷಿಪ್ತ ಸ್ಕೋರು: 20 ಓವರ್ಗಳಲ್ಲಿ 8 ವಿಕೆಟ್ಗಳಿಗೆ 196 (ಕರುಣ್ ನಾಯರ್ 66, ಸಮಿತ್ ದ್ರಾವಿಡ್ 33, ಜೆ. ಸುಚಿನ್ 40, ಮೊನಿಷ್ ರೆಡ್ಡಿ 25ಕ್ಕೆ2, ಪ್ಋಥ್ವಿರಾಜ್ ಶೇಖಾವತ್ 28ಕ್ಕೆ2, ಯಶೋವರ್ಧನ್ ಪರಂತಾಪ್ 31ಕ್ಕೆ2) ಗುಲ್ಬರ್ಗ ಮಿಸ್ಟಿಕ್ಸ್: 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 200 (ಕೆ.ವಿ. ಅನೀಶ್ 24, ಆರ್.ಸ್ಮರಣ್ ಔಟಾಗದೆ 104, ಪ್ರವೀಣ ದುಬೆ 37, ವಿದ್ಯಾಧರ ಪಾಟೀಲ 42ಕ್ಕೆ2, ಮನೋಜ್ ಭಾಂಡಗೆ 40ಕ್ಕೆ2) ಫಲಿತಾಂಶ: ಗುಲ್ಬರ್ಗ ಮಿಸ್ಟಿಕ್ಸ್ಗೆ 3 ವಿಕೆಟ್ ಜಯ. ಪಂದ್ಯದ ಆಟಗಾರ: ಆರ್. ಸ್ಮರಣ್.</p>.<p><strong>ಇಂದಿನ ಪಂದ್ಯಗಳು</strong></p><p>ಬೆಂಗಳೂರು ಬ್ಲಾಸ್ಟರ್ಸ್–ಹುಬ್ಬಳ್ಳಿ ಟೈಗರ್ಸ್ (ಮಧ್ಯಾಹ್ನ 3ರಿಂದ)</p><p>ಮೈಸೂರು ವಾರಿಯರ್ಸ್–ಮಂಗಳೂರು ಡ್ರ್ಯಾಗನ್ಸ್ (ರಾತ್ರಿ 7ರಿಂದ)</p><p>ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಎಡಗೈ ಬ್ಯಾಟರ್ ಆರ್. ಸ್ಮರಣ್ ಅವರ ಅಬ್ಬರದ ಶತಕದಿಂದಾಗಿ ಗುಲ್ಬರ್ಗ ಮಿಸ್ಟಿಕ್ಸ್ ತಂಡವು ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ವಿರುದ್ಧ 3 ವಿಕೆಟ್ಗಳ ರೋಚಕ ಜಯ ಸಾಧಿಸಿತು.</p>.<p>ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಫಲಿತಾಂಶವು ಕೊನೆಯ ಎಸೆತದಲ್ಲಿ ನಿರ್ಧಾರವಾಯಿತು. 197 ರನ್ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಗುಲ್ಬರ್ಗ ತಂಡವು ಇನಿಂಗ್ಸ್ನ ಎರಡನೇ ಓವರ್ನಲ್ಲಿಯೇ 7 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಛಲದ ಬ್ಯಾಟಿಂಗ್ ಮಾಡಿದ ಸ್ಮರಣ್ (ಔಟಾಗದೆ 104; 60ಎ, 4X11, 6X4) ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ತಂಡವು 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 200 ರನ್ ಗಳಿಸಿತು. </p>.<p>ಸ್ಮರಣ್ ಅವರು ಕೆ.ವಿ. ಅನೀಶ್ (24; 17ಎ) ಅವರೊಂದಿಗೆ 3ನೇ ವಿಕೆಟ್ ಜೊತೆಯಾಟದಲ್ಲಿ 53 ರನ್ ಸೇರಿಸಿದರು. ಪ್ರವೀಣ ದುಬೆ (37; 21ಎ) ಅವರೊಂದಿಗೆ 6ನೇ ವಿಕೆಟ್ ಜೊತೆಯಾಟದಲ್ಲಿ 83 ರನ್ ಸೇರಿಸಿದ್ದು ಗೆಲುವಿನಲ್ಲಿ ಪ್ರಮುಖ ಘಟ್ಟವಾಯಿತು. ಆದರೆ 19ನೇ ಓವರ್ನಲ್ಲಿ ವಿದ್ಯಾಧರ್ ಪಾಟೀಲ ಹಾಕಿದ ಓವರ್ನಲ್ಲಿ ದುಬೆ ಔಟಾದರು. ಇದರಿಂದಾಗಿ ಆತಂಕ ಮೂಡಿತು. </p>.<p>ಕೊನೆಯ ಓವರ್ನಲ್ಲಿ ಗೆಲುವಿಗೆ 10 ರನ್ಗಳ ಅಗತ್ಯವಿತ್ತು. ಸ್ಮರಣ್ ಅವರೊಂದಿಗೆ ಜೊತೆಗೂಡಿದ ರಿತೇಶ್ ಭಟ್ಕಳ 4 ಎಸೆತಗಳಲ್ಲಿ 6 ರನ್ ಗಳಿಸಿದರು. ಆದರೆ ರಿತೇಶ್ ಐದನೇ ಎಸೆತದಲ್ಲಿ ರನ್ಔಟ್ ಆದರು. ಕೊನೆಯ ಎಸೆತದಲ್ಲಿ ಕ್ರೀಸ್ಗೆ ಬಂದ ಸ್ಮರಣ್ ಅವರು ಮನೋಜ್ ಭಾಂಡಗೆ ಎಸೆತವನ್ನು ಬೌಂಡರಿಗೆರೆ ದಾಟಿಸಿದರು. </p>.<p><strong>ಕರುಣ್–ದ್ರಾವಿಡ್ ಜೊತೆಯಾಟ</strong></p><p>ಟಾಸ್ ಗೆದ್ದ ಗುಲ್ಬರ್ಗ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೈಸೂರು ತಂಡವು ಆರಂಭದಲ್ಲಿಯೇ ಆಘಾತ ಅನುಭವಿಸಿತು. ಪೃಥ್ವಿರಾಜ್ ಶೇಖಾವತ್ ಹಾಕಿದ ನಾಲ್ಕನೇ ಓವರ್ನಲ್ಲಿ ಆರಂಭಿಕ ಜೋಡಿ ಎಸ್.ಯು. ಕಾರ್ತಿಕ್ ಮತ್ತು ಸಿ.ಎ. ಕಾರ್ತಿಕ್ ಅವರಿಬ್ಬರೂ ಔಟಾದರು. ನಾಯಕ ಕರುಣ್ ನಾಯರ್ (66; 35ಎ, 4X8, 6X3) ಮತ್ತು ಸಮಿತ್ ರಾಹುಲ್ ದ್ರಾವಿಡ್ (33; 24ಎ, 4X4, 6X1) ಮೂರನೇ ವಿಕೆಟ್ ಜೊತೆಯಾಟದಲ್ಲಿ 81 ರನ್ ಗಳಿಸಿದರು. </p>.<p>ಕೊನೆಯ ಹಂತದ ಓವರ್ಗಳಲ್ಲಿ ಜೆ. ಸುಚಿತ್ 13 ಎಸೆತಗಳಲ್ಲಿ 40 ರನ್ ಗಳಿಸಿದರು. ಇದರಿಂದಾಗಿ ತಂಡವು ದೊಡ್ಡ ಮೊತ್ತ ಗಳಿಸಿತು. ಸುಚಿತ್ 4 ಸಿಕ್ಸರ್, 2 ಬೌಂಡರಿ ಸಿಡಿಸಿದರು. </p>.<p>ಸಂಕ್ಷಿಪ್ತ ಸ್ಕೋರು: 20 ಓವರ್ಗಳಲ್ಲಿ 8 ವಿಕೆಟ್ಗಳಿಗೆ 196 (ಕರುಣ್ ನಾಯರ್ 66, ಸಮಿತ್ ದ್ರಾವಿಡ್ 33, ಜೆ. ಸುಚಿನ್ 40, ಮೊನಿಷ್ ರೆಡ್ಡಿ 25ಕ್ಕೆ2, ಪ್ಋಥ್ವಿರಾಜ್ ಶೇಖಾವತ್ 28ಕ್ಕೆ2, ಯಶೋವರ್ಧನ್ ಪರಂತಾಪ್ 31ಕ್ಕೆ2) ಗುಲ್ಬರ್ಗ ಮಿಸ್ಟಿಕ್ಸ್: 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 200 (ಕೆ.ವಿ. ಅನೀಶ್ 24, ಆರ್.ಸ್ಮರಣ್ ಔಟಾಗದೆ 104, ಪ್ರವೀಣ ದುಬೆ 37, ವಿದ್ಯಾಧರ ಪಾಟೀಲ 42ಕ್ಕೆ2, ಮನೋಜ್ ಭಾಂಡಗೆ 40ಕ್ಕೆ2) ಫಲಿತಾಂಶ: ಗುಲ್ಬರ್ಗ ಮಿಸ್ಟಿಕ್ಸ್ಗೆ 3 ವಿಕೆಟ್ ಜಯ. ಪಂದ್ಯದ ಆಟಗಾರ: ಆರ್. ಸ್ಮರಣ್.</p>.<p><strong>ಇಂದಿನ ಪಂದ್ಯಗಳು</strong></p><p>ಬೆಂಗಳೂರು ಬ್ಲಾಸ್ಟರ್ಸ್–ಹುಬ್ಬಳ್ಳಿ ಟೈಗರ್ಸ್ (ಮಧ್ಯಾಹ್ನ 3ರಿಂದ)</p><p>ಮೈಸೂರು ವಾರಿಯರ್ಸ್–ಮಂಗಳೂರು ಡ್ರ್ಯಾಗನ್ಸ್ (ರಾತ್ರಿ 7ರಿಂದ)</p><p>ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>