ಟಾಸ್ ಗೆದ್ದ ಕರುಣ್ ನಾಯರ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಹುಬ್ಬಳ್ಳಿ ತಂಡವು ಅರಂಭಿಕ ಬ್ಯಾಟರ್ ಲವನೀತ್ ಸಿಸೊಡಿಯಾ (38 ರನ್) ಹಾಗೂ ಎಂಟನೇ ಕ್ರಮಾಂಕದ ತುಷಾರ್ ಸಿಂಗ್ (36 ರನ್) ಅವರ ಬ್ಯಾಟಿಂಗ್ನಿಂದಾಗಿ 20 ಓವರ್ಗಳಲ್ಲಿ 6 ವಿಕೆಟ್ಗಳಿಗೆ 140 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಮೈಸೂರು ತಂಡವು 15.5 ಓವರ್ಗಳಲ್ಲಿ 141 ರನ್ ಗಳಿಸಿತು. ಆರಂಭಿಕ ಜೋಡಿ, ನಾಯಕ ಕರುಣ್ (ಅಜೇಯ 91; 52ಎ, 4X11, 6X3) ಹಾಗೂ ನಿಹಾಲ್ ಉಳ್ಳಾಲ್ (ಅಜೇಯ 48; 43ಎ, 4X2, 6X1) ಮುರಿಯದ ಮೊದಲ ವಿಕೆಟ್ ಜೊತೆಯಾಟದಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು.