‘ಆ ದಿನ ನಾನು ಎರಡು ಬೀಮರ್ ಹಾಕಿದಾಗ, ಜನರು ವ್ಯಂಗ್ಯವಾಡಿದ್ದರು. ಆಟೊ ಓಡಿಸಲು ಹೋಗಿಬಿಡು ಅಂದಿದ್ದರು. ಇನ್ನೂ ಬಹಳಷ್ಟು ನಿಂದಿಸಿದ್ದರು. ಆದರೆ ಈ ಹಂತದವರೆಗೂ ಬೆಳೆಯಲು ನಾನು ಪಟ್ಟ ಶ್ರಮವನ್ನು ಕಡೆಗಣಿಸಿದರೆಂಬ ಬೇಸರವಾಗಿತ್ತು. ಆದರೆ, ನಾನು ಆಯ್ಕೆಯಾದಾಗ ಮಹಿ ಭಾಯ್ (ಧೋನಿ) ಹೇಳಿದ್ದ ಮಾತನ್ನು ನೆನಪಿಸಿಕೊಂಡೆ. ಇವತ್ತು ನೀನು ಚೆನ್ನಾಗಿ ಆಡು ಜನರು ಹೊಗಳುತ್ತಾರೆ. ಅದೇ ಜನ ಕೆಟ್ಟದಾಗಿ ಆಡಿದಾಗ ಬೈಯ್ಯುತ್ತಾರೆ. ಅದೆಲ್ಲವನ್ನೂ ಗಂಭೀರವಾಗಿ ತೆಗೆದುಕೊಳ್ಳದೇ ಆಟದ ಮೇಲಷ್ಟೇ ಗಮನ ನೀಡು ಎಂದಿದ್ದರು. ಅವರ ಮಾತು ನಿಜ. ಯಾವ ಜನ ನಿಂದಿಸಿದ್ದರೋ ಅದೇ ಮಂದಿ ನಾನು ಚೆನ್ನಾಗಿ ಆಡಿದ್ದಾಗ ಹಾಡಿ ಹೊಗಳಿದ್ದರು’ ಎಂದು ಸಿರಾಜ್ ಹೇಳಿದರು.