ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ತದಾನ ಮಾಡಿದ ಮುಂಬೈ ಕ್ರಿಕೆಟಿಗರು

Last Updated 8 ಜೂನ್ 2020, 15:00 IST
ಅಕ್ಷರ ಗಾತ್ರ

ಮುಂಬೈ: ಮುಂಬೈ ರಣಜಿ ಆಟಗಾರರಾದ ವಿನಾಯಕ್‌ ಭೊಯಿರ್, ರಾಯ್‌ಸ್ಟನ್‌ ಡಯಾಸ್‌ ಸೇರಿದಂತೆ 90ಕ್ಕೂ ಹೆಚ್ಚು ಕ್ರಿಕೆಟಿಗರು ಸೋಮವಾರ ರಕ್ತದಾನ ಮಾಡಿದರು. ಜೆ.ಜೆ.ಆಸ್ಪತ್ರೆ ಹಮ್ಮಿಕೊಂಡಿದ್ದ ಈ ಅಭಿಯಾನಕ್ಕೆ ಆಟಗಾರರು ಓಗೊಟ್ಟರು.‌

ವಿರಾರ್‌ನಲ್ಲಿ ವಿಷ್ಣು ವಾಮನ್‌ ಥಾಕೂರ್‌ ಚಾರಿಟೆಬಲ್ ಟ್ರಸ್ಟ್‌, ವಿವಾ ಕಾಲೇಜು ಮತ್ತು ಮುಂಬೈ ಕ್ರಿಕೆಟ್‌ ಸಂಸ್ಥೆಯ ಅಧೀನದಲ್ಲಿರುವ ಶ್ರೀನಾಥ್‌ ಸ್ಪೋರ್ಟ್ಸ್‌ ಕ್ಲಬ್‌ ಸಹಯೋಗದಲ್ಲಿ ಆಸ್ಪತ್ರೆ ಈ ಅಭಿಯಾನ ಹಮ್ಮಿಕೊಂಡಿತ್ತು.

90ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದ್ದಾರೆ ಎಂದು ಮುಂಬೈ ಕ್ರಿಕೆಟ್‌ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಅಜಿಂಕ್ಯ ನಾಯಕ್‌ ತಿಳಿಸಿದ್ದಾರೆ. ಸ್ವತಃ ಅಜಿಂಕ್ಯ ಅಲ್ಲದೇ, ಶಾಸಕ ಕ್ಷಿತಿಜ್‌ ಠಾಕೂರ್‌ ಅವರೂ ರಕ್ತದಾನದಲ್ಲಿ ಭಾಗಿಯಾದರು.

‘ಈ ಆಟಗಾರರು ರಾಜ್ಯ ಹಾಗೂ ರಾಷ್ಟ್ರಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT