<p><strong>ರಾವಲ್ಪಿಂಡಿ</strong>: ದಶಕದ ಬಳಿಕ ಪಾಕಿಸ್ತಾನ ನೆಲದಲ್ಲಿ ಆರಂಭವಾಗಿರುವ ಐತಿಹಾಸಿಕ ಟೆಸ್ಟ್ನ ನಾಲ್ಕನೇ ದಿನದಾಟವನ್ನುಮಳೆಯಿಂದಾಗಿ ರದ್ದು ಮಾಡಲಾಗಿದೆ. ಎರಡು ಮತ್ತು ಮೂರನೇ ದಿನದಾಟಕ್ಕೂ ಮಳೆ ಅಡ್ಡಿಪಡಿಸಿದ್ದರಿಂದ ಬಹುತೇಕ ಪಂದ್ಯವೇ ಕೊಚ್ಚಿಹೋದಂತಾಗಿದೆ.</p>.<p>ಇಲ್ಲಿ ಬುಧವಾರ ಆರಂಭವಾದ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಪ್ರವಾಸಿ ಶ್ರೀಲಂಕಾ ತಂಡ ಮೊದಲ ದಿನ68.1 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ202 ರನ್ ಗಳಿಸಿತ್ತು. ಎರಡನೇ ದಿನದಿಂದಾಚೆಗೆ ಮಳೆಯ ಆಟ ಶುರುವಾಯಿತು. 2ನೇ ದಿನ ಕೇವಲ 18.2 ಓವರ್ ಆಟ ಮಾತ್ರವೇ ನಡೆಯಿತು. ಮೂರನೇ ದಿನ ಹವಾಮಾನ ವೈಪರೀತ್ಯದಿಂದಾಗಿ ಕೇವಲ 5.2 ಓವರ್ಗಳ ಆಟವಷ್ಟೇ ಸಾಧ್ಯವಾಗಿತ್ತು.</p>.<p>ಶುಕ್ರವಾರ ರಾತ್ರಿ ಭಾರೀ ಮಳೆ ಸುರಿದ ಪರಿಣಾಮ ಮೈದಾನದಲ್ಲಿ ನೀರು ನಿಂತಿದ್ದು, ನಾಲ್ಕನೇ ದಿನದಾಟವನ್ನು ರದ್ದುಪಡಿಸಲಾಗಿದೆ. ಹೀಗಾಗಿ ಕೇವಲ 91.5 ಓವರ್ಗಳ ಆಟವಷ್ಟೇ ನಡೆದಿದೆ.</p>.<p>2009ರಲ್ಲಿ ಶ್ರೀಲಂಕಾ ತಂಡದ ಆಟಗಾರರಿದ್ದ ಬಸ್ ಮೇಲೆ ಇಸ್ಲಾಮಾಬಾದ್ನಲ್ಲಿ ಉಗ್ರರು ದಾಳಿ ನಡೆಸಿದ್ದರು. ಆ ಬಳಿಕ ಪಾಕ್ ಪ್ರವಾಸ ಕೈಗೊಳ್ಳಲು ಬೇರೆ ದೇಶದ ಆಟಗಾರರು ಹಿಂದೇಟು ಹಾಕಿದ್ದರು. ಹೀಗಾಗಿ ಇಲ್ಲಿ ಯಾವುದೇ ಅಂತರರಾಷ್ಟ್ರೀಯ ಪಂದ್ಯಗಳು ಆಯೋಜನೆಯಾಗಿರಲಿಲ್ಲ. ಪಾಕಿಸ್ತಾನ ತಂಡವೂ ತಟಸ್ಥ ಸ್ಥಳಗಳಲ್ಲಿಯೇ ಪಂದ್ಯ ಆಡಬೇಕಾಗಿತ್ತು.</p>.<p>ಎರಡನೇ ಹಾಗೂ ಅಂತಿಮ ಪಂದ್ಯವು ಡಿ. 19–13ರವರೆಗೆಕರಾಚಿಯಲ್ಲಿ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾವಲ್ಪಿಂಡಿ</strong>: ದಶಕದ ಬಳಿಕ ಪಾಕಿಸ್ತಾನ ನೆಲದಲ್ಲಿ ಆರಂಭವಾಗಿರುವ ಐತಿಹಾಸಿಕ ಟೆಸ್ಟ್ನ ನಾಲ್ಕನೇ ದಿನದಾಟವನ್ನುಮಳೆಯಿಂದಾಗಿ ರದ್ದು ಮಾಡಲಾಗಿದೆ. ಎರಡು ಮತ್ತು ಮೂರನೇ ದಿನದಾಟಕ್ಕೂ ಮಳೆ ಅಡ್ಡಿಪಡಿಸಿದ್ದರಿಂದ ಬಹುತೇಕ ಪಂದ್ಯವೇ ಕೊಚ್ಚಿಹೋದಂತಾಗಿದೆ.</p>.<p>ಇಲ್ಲಿ ಬುಧವಾರ ಆರಂಭವಾದ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಪ್ರವಾಸಿ ಶ್ರೀಲಂಕಾ ತಂಡ ಮೊದಲ ದಿನ68.1 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ202 ರನ್ ಗಳಿಸಿತ್ತು. ಎರಡನೇ ದಿನದಿಂದಾಚೆಗೆ ಮಳೆಯ ಆಟ ಶುರುವಾಯಿತು. 2ನೇ ದಿನ ಕೇವಲ 18.2 ಓವರ್ ಆಟ ಮಾತ್ರವೇ ನಡೆಯಿತು. ಮೂರನೇ ದಿನ ಹವಾಮಾನ ವೈಪರೀತ್ಯದಿಂದಾಗಿ ಕೇವಲ 5.2 ಓವರ್ಗಳ ಆಟವಷ್ಟೇ ಸಾಧ್ಯವಾಗಿತ್ತು.</p>.<p>ಶುಕ್ರವಾರ ರಾತ್ರಿ ಭಾರೀ ಮಳೆ ಸುರಿದ ಪರಿಣಾಮ ಮೈದಾನದಲ್ಲಿ ನೀರು ನಿಂತಿದ್ದು, ನಾಲ್ಕನೇ ದಿನದಾಟವನ್ನು ರದ್ದುಪಡಿಸಲಾಗಿದೆ. ಹೀಗಾಗಿ ಕೇವಲ 91.5 ಓವರ್ಗಳ ಆಟವಷ್ಟೇ ನಡೆದಿದೆ.</p>.<p>2009ರಲ್ಲಿ ಶ್ರೀಲಂಕಾ ತಂಡದ ಆಟಗಾರರಿದ್ದ ಬಸ್ ಮೇಲೆ ಇಸ್ಲಾಮಾಬಾದ್ನಲ್ಲಿ ಉಗ್ರರು ದಾಳಿ ನಡೆಸಿದ್ದರು. ಆ ಬಳಿಕ ಪಾಕ್ ಪ್ರವಾಸ ಕೈಗೊಳ್ಳಲು ಬೇರೆ ದೇಶದ ಆಟಗಾರರು ಹಿಂದೇಟು ಹಾಕಿದ್ದರು. ಹೀಗಾಗಿ ಇಲ್ಲಿ ಯಾವುದೇ ಅಂತರರಾಷ್ಟ್ರೀಯ ಪಂದ್ಯಗಳು ಆಯೋಜನೆಯಾಗಿರಲಿಲ್ಲ. ಪಾಕಿಸ್ತಾನ ತಂಡವೂ ತಟಸ್ಥ ಸ್ಥಳಗಳಲ್ಲಿಯೇ ಪಂದ್ಯ ಆಡಬೇಕಾಗಿತ್ತು.</p>.<p>ಎರಡನೇ ಹಾಗೂ ಅಂತಿಮ ಪಂದ್ಯವು ಡಿ. 19–13ರವರೆಗೆಕರಾಚಿಯಲ್ಲಿ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>