ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್ | ಈ ಆಟಗಾರ ಆರ್‌ಸಿಬಿ ತಂಡದಲ್ಲಿರಬೇಕು ಎಂದು ಕೊಹ್ಲಿಗೆ ಹೇಳಿದ್ದ ಪಾರ್ಥಿವ್

Last Updated 22 ಮೇ 2020, 4:37 IST
ಅಕ್ಷರ ಗಾತ್ರ

ಮುಂಬೈ: ಕ್ರಿಕೆಟ್‌ನ ಮೂರೂ ಮಾದರಿಯಲ್ಲಿ ಟೀಂ ಇಂಡಿಯಾದ ಪ್ರಮುಖ ವೇಗಿ ಎನಿಸಿರುವ ಹಾಗೂ ಐಪಿಎಲ್‌ನಲ್ಲಿ ಯಶಸ್ವಿ ಬೌಲರ್‌ ಆಗಿರುವ ಜಸ್‌ಪ್ರೀತ್‌ ಬೂಮ್ರಾ ಅವರನ್ನುಆರ್‌ಸಿಬಿ ಖರೀದಿಸಬೇಕು ಎಂದು ನಾಯಕ ವಿರಾಟ್‌ ಕೊಹ್ಲಿಗೆ ಪಾರ್ಥಿವ್‌ ಪಟೇಲ್‌ ಹೇಳಿದ್ದರಂತೆ. ಈ ಬಗ್ಗೆ ಪಾರ್ಥಿವ್ಸಂದರ್ಶನವೊಂದರಲ್ಲಿಹೇಳಿಕೊಂಡಿದ್ದಾರೆ.

2013ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದಬೂಮ್ರಾ ಆಗಿನಿಂದಲೂ ಮುಂಬೈ ಇಂಡಿಯನ್ಸ್‌ ತಂಡದಲ್ಲೇ ಆಡುತ್ತಿದ್ದಾರೆ. ಇದುವರೆಗೆ ಒಟ್ಟು 77 ಪಂದ್ಯಗಳನ್ನು ಆಡಿರುವ ಅವರು 7.55ರ ಸರಾಸರಿಯಲ್ಲಿ 82 ವಿಕೆಟ್‌ ಉರುಳಿಸಿದ್ದಾರೆ.

fancode.comನ ‘ಲಾಕ್‌ಡೌನ್‌ ಬಟ್‌ ನಾಟ್‌ಔಟ್’ ಕಾರ್ಯಕ್ರಮದಲ್ಲಿ ಮಾತುಕತೆ ವೇಳೆ ಪಾರ್ಥಿವ್‌ ಅವರಿಗೆಬೂಮ್ರಾ ಬಗ್ಗೆ ಪ್ರಶ್ನಿಸಲಾಯಿತು. ಈ ವೇಳೆ ಪಾರ್ಥಿವ್‌, ‘ಆತ ಗುಜರಾತ್ ತಂಡದ ಪರ ವಿದರ್ಭ ವಿರುದ್ಧ ಪದಾರ್ಪಣೆ ಪಂದ್ಯವಾಡಿದ್ದು ನನಗೆ ಈಗಲೂ ನೆನಪಿದೆ. ಬೂಮ್ರಾ ಅವರನ್ನು ಮುಂಬೈ ಇಂಡಿಯನ್ಸ್‌ ಖರೀದಿಸುವ ಮೊದಲು, ವಿರಾಟ್ ಕೊಹ್ಲಿ ಜೊತೆ ಮಾತನಾಡಿದ್ದೆ. ನಾನಾಗ ಆರ್‌ಸಿಬಿಯಲ್ಲಿದ್ದೆ. ಆತನನ್ನು ಆರ್‌ಸಿಬಿ ಖರೀಸಿಸಬೇಕು ಎಂದು ಹೇಳಿದ್ದೆ’ ಎಂದಿದ್ದಾರೆ.

‘ಆದರೆ, ನಿಸ್ಸಂಶಯವಾಗಿ ಮುಂಬೈ ಇಂಡಿಯನ್ಸ್ ಆರ್‌ಸಿಬಿಯನ್ನು ಮೀರಿ ಬೂಮ್ರಾ ಅವರನ್ನು ಖರೀದಿಸಿತು. ಬೂಮ್ರಾ ಅವರಲ್ಲೇನೋ ವಿಶೇಷತೆ ಇದೆ ಎಂದು ಆಗ ಮುಂಬೈ ತಂಡದ ಕೋಚ್‌ ಆಗಿದ್ದ ಜಾನ್‌ ರೈಟ್‌ ಅವರಿಗೆ ಹೇಳಿದ್ದೆ’ ಎಂದು ನೆನಪಿಸಿಕೊಂಡಿದ್ದಾರೆ.

ಬೂಮ್ರಾ ಸದ್ಯ ಏಕದಿನ ಕ್ರಿಕೆಟ್‌ ಬೌಲರ್‌ಗಳ ರ‍್ಯಾಂಕಿಂಗ್‌‌ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.ಟೆಸ್ಟ್‌ ಕ್ರಿಕೆಟ್‌ನಲ್ಲಿ 7ನೇ ಸ್ಥಾನದಲ್ಲಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದುವರೆಗೆ 14 ಟೆಸ್ಟ್‌ ಪಂದ್ಯಗಳಲ್ಲಿ ಆಡಿರುವ ಬೂಮ್ರಾ, 68 ವಿಕೆಟ್‌ ಪಡೆದಿದ್ದಾರೆ. 64 ಏಕದಿನ ಪಂದ್ಯಗಳಿಂದ 104 ವಿಕೆಟ್‌ ಉರುಳಿಸಿದ್ದಾರೆ. 49 ಟಿ20 ಪಂದ್ಯಗಳಿಂದ 59 ವಿಕೆಟ್‌ ಉರುಳಿಸಿದ್ದಾರೆ.

ಬೂಮ್ರಾ ಆಡುತ್ತಿರುವ ಮುಂಬೈ ಇಂಡಿಯನ್ಸ್‌ ತಂಡ ಐಪಿಎಲ್‌ನಲ್ಲಿ ನಾಲ್ಕು ಸಲ ಚಾಂಪಿಯನ್‌ ಆಗಿದೆ.

2013–14ರ ರಣಜಿ ಟೂರ್ನಿಯಲ್ಲಿ ಬೂಮ್ರಾ ಗುಜರಾತ್‌ ಪರ ಪದಾರ್ಪಣೆ ಮಾಡಿದ್ದಾಗ, ಪಾರ್ಥಿವ್‌ ಆ ತಂಡದ ನಾಯಕರಾಗಿದ್ದರು. ಆ ಪಂದ್ಯದಲ್ಲಿ ಬೂಮ್ರಾ 7 ವಿಕೆಟ್‌ ಉರುಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT