ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯ ಫೈನಲ್ನಲ್ಲಿ ಬೆಂಗಳೂರು ಬುಲ್ಸ್ ತಂಡ ಪೀಪಲ್ಸ್ ಚಾಯ್ಸ್ತಂಡವನ್ನು 8 ರನ್ಗಳಿಂದ ಸೋಲಿಸಿತು. ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ನೈಟ್ ರೈಡರ್ಸ್ ತಂಡವು ಸೂಪರ್ ಸುನಾಮಿ ತಂಡವನ್ನು ಮಣಿಸಿತು.
ಟೂರ್ನಿಯಲ್ಲಿ ನಾಲ್ಕು ತಂಡಗಳು ಪಾಲ್ಗೊಂಡಿದ್ದವು.
ಲೀಗ್ ಹಂತದಲ್ಲಿರವೀಶ್ ನಾಯಕತ್ವದ ಬೆಂಗಳೂರು ಬುಲ್ಸ್ ತಂಡವು ಆನಂದ್ ಬೈದನಮನೆ ನೇತೃತ್ವದ ನೈಟ್ ರೈಡರ್ಸ್ ತಂಡವನ್ನು ಹಾಗೂಚಿದಾನಂದ ಪಟೇಲ್ ನಾಯಕತ್ವದ ಪೀಪಲ್ಸ್ ಚಾಯ್ಸ್ ತಂಡವು ನ. ವಿನಯ್ ಮುಂದಾಳತ್ವದ ಸೂಪರ್ ಸುನಾಮಿ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದವು.
ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥ ನಾರಾಯಣ ಟೂರ್ನಿಗೆ ಚಾಲನೆ ನೀಡಿದ್ದರು.