<p><strong>ಕೊಲಂಬೊ: </strong>ಭಾರತ ಮತ್ತು ಶ್ರೀಲಂಕಾ ನಡುವಣ ನಡೆಯಲಿರುವ ಸೀಮಿತ ಓವರ್ಗಳ ಸರಣಿಯ ಬಗ್ಗೆ ಮಾಜಿ ಕ್ರಿಕೆಟಿಗ ಅರ್ಜುನ್ ರಣತುಂಗಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.</p>.<p>‘ಭಾರತದ ಸೆಕೆಂಡ್ ಟೀಮ್ ಎದುರು ಸರಣಿ ಆಯೋಜಿಸಿರುವು ಸರಿಯಲ್ಲ. ಇದು ನಮ್ಮ ದೇಶಕ್ಕೆ ಅವಮಾನವೇ ಸರಿ‘ ಎಂದು ಶ್ರೀಲಂಕಾ ತಂಡದ ಮಾಜಿ ನಾಯಕ ರಣತುಂಗಾ ಕಿಡಿಕಾರಿದ್ದಾರೆ.</p>.<p>ಇದೇ 13ರಿಂದ ಶ್ರೀಲಂಕಾ ತಂಡವು ಶಿಖರ್ ಧವನ್ ನಾಯಕತ್ವದ ಭಾರತ ತಂಡದ ಎದುರು ಏಕದಿನ ಮತ್ತು ಟಿ20 ಸರಣಿಗಳಲ್ಲಿ ಆಡಲಿದೆ.</p>.<p>‘ಟಿ.ವಿ. ಪ್ರಸಾರ ಮತ್ತು ಪ್ರಾಯೋಜಕತ್ವದ ಮಾರುಕಟ್ಟೆಗಾಗಿ ಶ್ರೀಲಂಕಾ ಮಂಡಳಿಯು ಈ ಸರಣಿ ಆಯೋಜನೆ ಮಾಡುತ್ತಿದೆ. ನಮ್ಮ ದೇಶದ ಸೀನಿಯರ್ ತಂಡದ ವಿರುದ್ಧ ಭಾರತದ ಎರಡನೇ ಹಂತದ ತಂಡವು ಆಡುವುದು ನಮಗೆ ಅವಮಾನದ ವಿಷಯ. ಸದ್ಯದ ಮಂಡಳಿಯ ಆಡಳಿತದ ಅದಕ್ಷತೆ ಪ್ರತೀಕ ಇದು‘ ಎಂದು ಟೀಕಿಸಿದ್ದಾರೆ.</p>.<p>‘ತನ್ನ ಶ್ರೇಷ್ಠ ಆಟಗಾರರ ತಂಡವನ್ನು ಭಾರತವು ಇಂಗ್ಲೆಂಡ್ಗೆ ಆಡಲು ಕಳಿಸಿದೆ. ಆ ತಂಡದವರಿಗಿಂತ ದುರ್ಬಲ ಆಟಗಾರರು ಇರುವ ಇಲ್ಲಿಗೆ ಕಳಿಸುತ್ತಿದೆ. ಅಂತಹ ತಂಡವು ನಮ್ಮ ಎದುರು ಆಡುತ್ತಿದೆ‘ ಎಂದು ಅಸಮಾಧಾನ ಹೊರಹಾಕಿದ್ದಾರೆ. 1996ರಲ್ಲಿ ವಿಶ್ವಕಪ್ ವಿಜೇತ ಶ್ರೀಲಂಕಾ ತಂಡಕ್ಕೆ ರಣತುಂಗಾ ನಾಯಕರಾಗಿದ್ದರು.</p>.<p>ಇದಕ್ಕೆ ಪ್ರತಿಕ್ರಿಯಿಸಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿಯು, ‘ಸದ್ಯ ಇಲ್ಲಿ ಆಡಲು ಬಂದಿರುವ ಭಾರತ ತಂಡದಲ್ಲಿರುವ 20 ಆಟಗಾರರ ಪೈಕಿ 14 ಮಂದಿ ಅಂತರರಾಷ್ಟ್ರೀಯ ಮಟ್ಟದ ಎಲ್ಲ ಮೂರು ಮಾದರಿಗಳಲ್ಲಿ ಆಡಿದ್ದಾರೆ. ಇದು ದ್ವಿತೀಯ ದರ್ಜೆ ತಂಡವಲ್ಲ‘ ಎಂದಿದೆ.</p>.<p>ಭಾರತ ತಂಡದಲ್ಲಿ ಆರು ಮಂದಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡುವ ನಿರೀಕ್ಷೆಯಲ್ಲಿದ್ದಾರೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥರೂ ಆಗಿರುವ ರಾಹುಲ್ ದ್ರಾವಿಡ್ ಈ ತಂಡಕ್ಕೆ ಮುಖ್ಯ ಕೋಚ್ ಆಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಲಂಬೊ: </strong>ಭಾರತ ಮತ್ತು ಶ್ರೀಲಂಕಾ ನಡುವಣ ನಡೆಯಲಿರುವ ಸೀಮಿತ ಓವರ್ಗಳ ಸರಣಿಯ ಬಗ್ಗೆ ಮಾಜಿ ಕ್ರಿಕೆಟಿಗ ಅರ್ಜುನ್ ರಣತುಂಗಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.</p>.<p>‘ಭಾರತದ ಸೆಕೆಂಡ್ ಟೀಮ್ ಎದುರು ಸರಣಿ ಆಯೋಜಿಸಿರುವು ಸರಿಯಲ್ಲ. ಇದು ನಮ್ಮ ದೇಶಕ್ಕೆ ಅವಮಾನವೇ ಸರಿ‘ ಎಂದು ಶ್ರೀಲಂಕಾ ತಂಡದ ಮಾಜಿ ನಾಯಕ ರಣತುಂಗಾ ಕಿಡಿಕಾರಿದ್ದಾರೆ.</p>.<p>ಇದೇ 13ರಿಂದ ಶ್ರೀಲಂಕಾ ತಂಡವು ಶಿಖರ್ ಧವನ್ ನಾಯಕತ್ವದ ಭಾರತ ತಂಡದ ಎದುರು ಏಕದಿನ ಮತ್ತು ಟಿ20 ಸರಣಿಗಳಲ್ಲಿ ಆಡಲಿದೆ.</p>.<p>‘ಟಿ.ವಿ. ಪ್ರಸಾರ ಮತ್ತು ಪ್ರಾಯೋಜಕತ್ವದ ಮಾರುಕಟ್ಟೆಗಾಗಿ ಶ್ರೀಲಂಕಾ ಮಂಡಳಿಯು ಈ ಸರಣಿ ಆಯೋಜನೆ ಮಾಡುತ್ತಿದೆ. ನಮ್ಮ ದೇಶದ ಸೀನಿಯರ್ ತಂಡದ ವಿರುದ್ಧ ಭಾರತದ ಎರಡನೇ ಹಂತದ ತಂಡವು ಆಡುವುದು ನಮಗೆ ಅವಮಾನದ ವಿಷಯ. ಸದ್ಯದ ಮಂಡಳಿಯ ಆಡಳಿತದ ಅದಕ್ಷತೆ ಪ್ರತೀಕ ಇದು‘ ಎಂದು ಟೀಕಿಸಿದ್ದಾರೆ.</p>.<p>‘ತನ್ನ ಶ್ರೇಷ್ಠ ಆಟಗಾರರ ತಂಡವನ್ನು ಭಾರತವು ಇಂಗ್ಲೆಂಡ್ಗೆ ಆಡಲು ಕಳಿಸಿದೆ. ಆ ತಂಡದವರಿಗಿಂತ ದುರ್ಬಲ ಆಟಗಾರರು ಇರುವ ಇಲ್ಲಿಗೆ ಕಳಿಸುತ್ತಿದೆ. ಅಂತಹ ತಂಡವು ನಮ್ಮ ಎದುರು ಆಡುತ್ತಿದೆ‘ ಎಂದು ಅಸಮಾಧಾನ ಹೊರಹಾಕಿದ್ದಾರೆ. 1996ರಲ್ಲಿ ವಿಶ್ವಕಪ್ ವಿಜೇತ ಶ್ರೀಲಂಕಾ ತಂಡಕ್ಕೆ ರಣತುಂಗಾ ನಾಯಕರಾಗಿದ್ದರು.</p>.<p>ಇದಕ್ಕೆ ಪ್ರತಿಕ್ರಿಯಿಸಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿಯು, ‘ಸದ್ಯ ಇಲ್ಲಿ ಆಡಲು ಬಂದಿರುವ ಭಾರತ ತಂಡದಲ್ಲಿರುವ 20 ಆಟಗಾರರ ಪೈಕಿ 14 ಮಂದಿ ಅಂತರರಾಷ್ಟ್ರೀಯ ಮಟ್ಟದ ಎಲ್ಲ ಮೂರು ಮಾದರಿಗಳಲ್ಲಿ ಆಡಿದ್ದಾರೆ. ಇದು ದ್ವಿತೀಯ ದರ್ಜೆ ತಂಡವಲ್ಲ‘ ಎಂದಿದೆ.</p>.<p>ಭಾರತ ತಂಡದಲ್ಲಿ ಆರು ಮಂದಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡುವ ನಿರೀಕ್ಷೆಯಲ್ಲಿದ್ದಾರೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥರೂ ಆಗಿರುವ ರಾಹುಲ್ ದ್ರಾವಿಡ್ ಈ ತಂಡಕ್ಕೆ ಮುಖ್ಯ ಕೋಚ್ ಆಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>