<p><strong>ನಾಗ್ಪುರ:</strong> ಈ ಬಾರಿಯ ರಣಜಿ ಋತುವಿನಲ್ಲಿ ವಿದರ್ಭ ತಂಡದಲ್ಲಿ ಆಡುತ್ತಿರುವ ಬೆಂಗಳೂರಿನ ಕರುಣ್ ನಾಯರ್ ಶನಿವಾರ ಕರ್ನಾಟಕಕ್ಕೆ ಕಠಿಣ ಪೈಪೋಟಿಯೊಡ್ಡಿದರು.</p><p>ಇಲ್ಲಿ ನಡೆಯುತ್ತಿರುವ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಹತ್ತು ರನ್ಗಳ ಅಂತರದಿಂದ ಶತಕ ತಪ್ಪಿಸಿಕೊಂಡ ಕರುಣ್ (90;178ಎ, 4X16, 6X1) ವಿದರ್ಭ ತಂಡವು ಮೊದಲ ಇನಿಂಗ್ಸ್ನಲ್ಲಿ 460 ರನ್ಗಳ ದೊಡ್ಡ ಮೊತ್ತ ಗಳಿಸಲು ಮಹತ್ವದ ಕಾಣಿಕೆ ನೀಡಿದರು.</p><p>ಇದಕ್ಕುತ್ತರವಾಗಿ ಕರ್ನಾಟಕವು ಎರಡನೇ ದಿನದಾಟದ ಕೊನೆಗೆ 24 ಓವರ್ಗಳಲ್ಲಿ 2 ವಿಕೆಟ್ಗಳಿಗೆ 98 ರನ್ ಗಳಿಸಿದೆ. ಆರಂಭಿಕ ಬ್ಯಾಟರ್ ಆರ್. ಸಮರ್ಥ್ (ಬ್ಯಾಟಿಂಗ್ 43) ಹಾಗೂ ನಿಕಿನ್ ಜೋಸ್ (ಬ್ಯಾಟಿಂಗ್ 20) ಕ್ರೀಸ್ನಲ್ಲಿದ್ದಾರೆ.</p><p>ಸೆಮಿಫೈನಲ್ ಪ್ರವೇಶಿಸಲು ಕಠಿಣ ಹಾದಿ ಸವೆಸಬೇಕಿರುವ ಕರ್ನಾಟಕ ತಂಡವು ಈಗಾಗಲೇ ಮಯಂಕ್ ಅಗರವಾಲ್ ಮತ್ತು ಕೆ.ವಿ. ಅನೀಶ್ (34; 48ಎ, 4X6) ಅವರ ವಿಕೆಟ್ ಕಳೆದುಕೊಂಡಿದೆ. ಮಯಂಕ್ ಸೊನ್ನೆ ಸುತ್ತಿದರು.</p><p>ಒಂದೊಮ್ಮೆ ಪಂದ್ಯ ಡ್ರಾ ಆದರೂ ಮೊದಲ ಇನಿಂಗ್ಸ್ ಮುನ್ನಡೆ ಗಳಿಸುವ ತಂಡವು ನಾಲ್ಕರ ಘಟ್ಟ ಪ್ರವೇಶಿಸಲಿದೆ. ಆದ್ದರಿಂದ ಉಭಯ ತಂಡಗಳೂ ಇನಿಂಗ್ಸ್ ಮುನ್ನಡೆಗೆ ತುರುಸಿನ ಪೈಪೋಟಿ ನಡೆಸುವ ನಿರೀಕ್ಷೆ ಇದೆ. ಪಂದ್ಯದಲ್ಲಿ ಇನ್ನೂ ಮೂರು ದಿನಗಳ ಆಟ ಬಾಕಿಯಿದೆ.</p><p>ಮುನ್ನಡೆಗಾಗಿ ಕರ್ನಾಟಕ ತಂಡಕ್ಕೆ ಇನ್ನೂ 362 ರನ್ ಅಗತ್ಯವಿದೆ. ಇಡೀ ಋತುವಿನಲ್ಲಿ ಹೆಚ್ಚು ವೈಫಲ್ಯವನ್ನೇ ಕಂಡಿರುವ ಸಮರ್ಥ್ ಇಲ್ಲಿ 68 ಎಸೆತ ಎದುರಿಸಿದ್ದಾರೆ.</p><p>ಐದು ಬೌಂಡರಿ ಕೂಡ ಬಾರಿಸಿದ್ದಾರೆ. ನಿಕಿನ್ 26 ಎಸೆತಗಳನ್ನು ಆಡಿದ್ದಾರೆ. ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳಲು ಇಬ್ಬರಿಗೂ ಇದು ಒಳ್ಳೆಯ ಅವಕಾಶವಾಗಿದೆ. </p><p>ಕರುಣ್ ಬ್ಯಾಟಿಂಗ್: ಮೊದಲ ದಿನದಾಟದಲ್ಲಿ ಅಥರ್ವ ತೈಡೆ ಶತಕ ಮತ್ತು ಯಶ್ ರಾಥೋಡ್ ಅವರ(93 ರನ್) ಅವರ ಅಮೋಘ ಬ್ಯಾಟಿಂಗ್ನಿಂದ ವಿದರ್ಭ ತಂಡವು 86 ಓವರ್ಗಳಲ್ಲಿ 3 ವಿಕೆಟ್ಗಳಿಗೆ 261 ರನ್ ಗಳಿಸಿತ್ತು. ಕ್ರೀಸ್ನಲ್ಲಿದ್ದ ಕರುಣ್ ಶನಿವಾರ ಮಿಂಚಿದರು.</p><p>ತಮ್ಮ ತವರು ರಾಜ್ಯದ ‘ಸ್ನೇಹಿತ‘ರನ್ನು ಕಾಡಿದರು. ವಿದ್ವತ್ ಕಾವೇರಪ್ಪ (99ಕ್ಕೆ4) ಸೇರಿದಂತೆ ಮೂವರು ಮಧ್ಯಮವೇಗಿಗಳು ಪರಿಣಾಮಕಾರಿಯಾಗಿದ್ದರು. ಆದರೂ ಅವರ ಎಸೆತಗಳನ್ನು ಕರುಣ್ ಆತ್ಮವಿಶ್ವಾಸದಿಂದ ಎದುರಿಸಿದರು.</p><p>ಶತಕದತ್ತ ಹೆಜ್ಜೆ ಇಟ್ಟಿದ ಕರುಣ್ ಅವರ ವಿಕೆಟ್ ಕಬಳಿಸಿದ ವಿದ್ವತ್ ಸಂಭ್ರಮಿಸಿದರು. ಆದರೆ ಕೆಳಕ್ರಮಾಂಕದ ಬ್ಯಾಟರ್ಗಳೂ ಒಂದಷ್ಟು ರನ್ಗಳ ಕಾಣಿಕೆ ನೀಡಿದ್ದರಿಂದ ಆತಿಥೇಯ ತಂಡವು ದೊಡ್ಡ ಮೊತ್ತ ಗಳಿಸಲು ಸಾಧ್ಯವಾಯಿತು.</p><p>ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ವಿದರ್ಭ: 143.1 ಓವರ್ಗಳಲ್ಲಿ 460 (ಕರುಣ್ ನಾಯರ್ 90, ಆದಿತ್ಯ ಸರವಟೆ 26, ಹರ್ಷ ದುಬೆ 20, ಯಶ್ ಠಾಕೂರ್ 31, ಉಮೇಶ್ ಯಾದವ್ ಔಟಾಗದೆ 21, ವಿದ್ವತ್ ಕಾವೇರಪ್ಪ 99ಕ್ಕೆ4, ಹಾರ್ದಿಕ್ ರಾಜ್ 89ಕ್ಕೆ2) ಕರ್ನಾಟಕ: 24 ಓವರ್ಗಳಲ್ಲಿ 2 ವಿಕೆಟ್ಗಳಿಗೆ 98 (ಆರ್. ಸಮರ್ಥ್ ಬ್ಯಾಟಿಂಗ್ 43, ಕೆ.ವಿ. ಅನೀಶ್ 34, ನಿಕಿನ್ ಜೋಸ್ ಬ್ಯಾಟಿಂಗ್ 20, ಆದಿತ್ಯ ಠಾಕ್ರೆ 29ಕ್ಕೆ1, ಯಶ್ ಠಾಕೂರ್ 22ಕ್ಕೆ1)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಗ್ಪುರ:</strong> ಈ ಬಾರಿಯ ರಣಜಿ ಋತುವಿನಲ್ಲಿ ವಿದರ್ಭ ತಂಡದಲ್ಲಿ ಆಡುತ್ತಿರುವ ಬೆಂಗಳೂರಿನ ಕರುಣ್ ನಾಯರ್ ಶನಿವಾರ ಕರ್ನಾಟಕಕ್ಕೆ ಕಠಿಣ ಪೈಪೋಟಿಯೊಡ್ಡಿದರು.</p><p>ಇಲ್ಲಿ ನಡೆಯುತ್ತಿರುವ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಹತ್ತು ರನ್ಗಳ ಅಂತರದಿಂದ ಶತಕ ತಪ್ಪಿಸಿಕೊಂಡ ಕರುಣ್ (90;178ಎ, 4X16, 6X1) ವಿದರ್ಭ ತಂಡವು ಮೊದಲ ಇನಿಂಗ್ಸ್ನಲ್ಲಿ 460 ರನ್ಗಳ ದೊಡ್ಡ ಮೊತ್ತ ಗಳಿಸಲು ಮಹತ್ವದ ಕಾಣಿಕೆ ನೀಡಿದರು.</p><p>ಇದಕ್ಕುತ್ತರವಾಗಿ ಕರ್ನಾಟಕವು ಎರಡನೇ ದಿನದಾಟದ ಕೊನೆಗೆ 24 ಓವರ್ಗಳಲ್ಲಿ 2 ವಿಕೆಟ್ಗಳಿಗೆ 98 ರನ್ ಗಳಿಸಿದೆ. ಆರಂಭಿಕ ಬ್ಯಾಟರ್ ಆರ್. ಸಮರ್ಥ್ (ಬ್ಯಾಟಿಂಗ್ 43) ಹಾಗೂ ನಿಕಿನ್ ಜೋಸ್ (ಬ್ಯಾಟಿಂಗ್ 20) ಕ್ರೀಸ್ನಲ್ಲಿದ್ದಾರೆ.</p><p>ಸೆಮಿಫೈನಲ್ ಪ್ರವೇಶಿಸಲು ಕಠಿಣ ಹಾದಿ ಸವೆಸಬೇಕಿರುವ ಕರ್ನಾಟಕ ತಂಡವು ಈಗಾಗಲೇ ಮಯಂಕ್ ಅಗರವಾಲ್ ಮತ್ತು ಕೆ.ವಿ. ಅನೀಶ್ (34; 48ಎ, 4X6) ಅವರ ವಿಕೆಟ್ ಕಳೆದುಕೊಂಡಿದೆ. ಮಯಂಕ್ ಸೊನ್ನೆ ಸುತ್ತಿದರು.</p><p>ಒಂದೊಮ್ಮೆ ಪಂದ್ಯ ಡ್ರಾ ಆದರೂ ಮೊದಲ ಇನಿಂಗ್ಸ್ ಮುನ್ನಡೆ ಗಳಿಸುವ ತಂಡವು ನಾಲ್ಕರ ಘಟ್ಟ ಪ್ರವೇಶಿಸಲಿದೆ. ಆದ್ದರಿಂದ ಉಭಯ ತಂಡಗಳೂ ಇನಿಂಗ್ಸ್ ಮುನ್ನಡೆಗೆ ತುರುಸಿನ ಪೈಪೋಟಿ ನಡೆಸುವ ನಿರೀಕ್ಷೆ ಇದೆ. ಪಂದ್ಯದಲ್ಲಿ ಇನ್ನೂ ಮೂರು ದಿನಗಳ ಆಟ ಬಾಕಿಯಿದೆ.</p><p>ಮುನ್ನಡೆಗಾಗಿ ಕರ್ನಾಟಕ ತಂಡಕ್ಕೆ ಇನ್ನೂ 362 ರನ್ ಅಗತ್ಯವಿದೆ. ಇಡೀ ಋತುವಿನಲ್ಲಿ ಹೆಚ್ಚು ವೈಫಲ್ಯವನ್ನೇ ಕಂಡಿರುವ ಸಮರ್ಥ್ ಇಲ್ಲಿ 68 ಎಸೆತ ಎದುರಿಸಿದ್ದಾರೆ.</p><p>ಐದು ಬೌಂಡರಿ ಕೂಡ ಬಾರಿಸಿದ್ದಾರೆ. ನಿಕಿನ್ 26 ಎಸೆತಗಳನ್ನು ಆಡಿದ್ದಾರೆ. ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳಲು ಇಬ್ಬರಿಗೂ ಇದು ಒಳ್ಳೆಯ ಅವಕಾಶವಾಗಿದೆ. </p><p>ಕರುಣ್ ಬ್ಯಾಟಿಂಗ್: ಮೊದಲ ದಿನದಾಟದಲ್ಲಿ ಅಥರ್ವ ತೈಡೆ ಶತಕ ಮತ್ತು ಯಶ್ ರಾಥೋಡ್ ಅವರ(93 ರನ್) ಅವರ ಅಮೋಘ ಬ್ಯಾಟಿಂಗ್ನಿಂದ ವಿದರ್ಭ ತಂಡವು 86 ಓವರ್ಗಳಲ್ಲಿ 3 ವಿಕೆಟ್ಗಳಿಗೆ 261 ರನ್ ಗಳಿಸಿತ್ತು. ಕ್ರೀಸ್ನಲ್ಲಿದ್ದ ಕರುಣ್ ಶನಿವಾರ ಮಿಂಚಿದರು.</p><p>ತಮ್ಮ ತವರು ರಾಜ್ಯದ ‘ಸ್ನೇಹಿತ‘ರನ್ನು ಕಾಡಿದರು. ವಿದ್ವತ್ ಕಾವೇರಪ್ಪ (99ಕ್ಕೆ4) ಸೇರಿದಂತೆ ಮೂವರು ಮಧ್ಯಮವೇಗಿಗಳು ಪರಿಣಾಮಕಾರಿಯಾಗಿದ್ದರು. ಆದರೂ ಅವರ ಎಸೆತಗಳನ್ನು ಕರುಣ್ ಆತ್ಮವಿಶ್ವಾಸದಿಂದ ಎದುರಿಸಿದರು.</p><p>ಶತಕದತ್ತ ಹೆಜ್ಜೆ ಇಟ್ಟಿದ ಕರುಣ್ ಅವರ ವಿಕೆಟ್ ಕಬಳಿಸಿದ ವಿದ್ವತ್ ಸಂಭ್ರಮಿಸಿದರು. ಆದರೆ ಕೆಳಕ್ರಮಾಂಕದ ಬ್ಯಾಟರ್ಗಳೂ ಒಂದಷ್ಟು ರನ್ಗಳ ಕಾಣಿಕೆ ನೀಡಿದ್ದರಿಂದ ಆತಿಥೇಯ ತಂಡವು ದೊಡ್ಡ ಮೊತ್ತ ಗಳಿಸಲು ಸಾಧ್ಯವಾಯಿತು.</p><p>ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ವಿದರ್ಭ: 143.1 ಓವರ್ಗಳಲ್ಲಿ 460 (ಕರುಣ್ ನಾಯರ್ 90, ಆದಿತ್ಯ ಸರವಟೆ 26, ಹರ್ಷ ದುಬೆ 20, ಯಶ್ ಠಾಕೂರ್ 31, ಉಮೇಶ್ ಯಾದವ್ ಔಟಾಗದೆ 21, ವಿದ್ವತ್ ಕಾವೇರಪ್ಪ 99ಕ್ಕೆ4, ಹಾರ್ದಿಕ್ ರಾಜ್ 89ಕ್ಕೆ2) ಕರ್ನಾಟಕ: 24 ಓವರ್ಗಳಲ್ಲಿ 2 ವಿಕೆಟ್ಗಳಿಗೆ 98 (ಆರ್. ಸಮರ್ಥ್ ಬ್ಯಾಟಿಂಗ್ 43, ಕೆ.ವಿ. ಅನೀಶ್ 34, ನಿಕಿನ್ ಜೋಸ್ ಬ್ಯಾಟಿಂಗ್ 20, ಆದಿತ್ಯ ಠಾಕ್ರೆ 29ಕ್ಕೆ1, ಯಶ್ ಠಾಕೂರ್ 22ಕ್ಕೆ1)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>