<p><strong>ನವದೆಹಲಿ</strong>: ಭಾರತದ ಕ್ರಿಕೆಟ್ಗೆ ವಿರಾಟ್ ಕೊಹ್ಲಿಯೇ ‘ಬಾಸ್’ ಎಂದು ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.</p>.<p>‘ತಂಡಕ್ಕೆ ನಾಯಕನೇ ಮುಖ್ಯಸ್ಥವೆಂಬುದನ್ನು ನಾನು ಯಾವಾಗಲೂ ಒಪ್ಪುತ್ತೇನೆ. ಒಬ್ಬ ಕೋಚ್ ಆಗಿ, ಆಟಗಾರರು ತಮ್ಮ ಶ್ರೇಷ್ಠ ಸಾಮರ್ಥ್ಯವನ್ನು ಪಣಕ್ಕೊಡ್ಡುವಂತೆ ಸಿದ್ಧಗೊಳಿಸುವುದು ನನ್ನ ಕರ್ತವ್ಯ. ಆತ್ಮವಿಶ್ವಾಸ, ದಿಟ್ಟತನ ಮತ್ತು ನಿರ್ಭೀತವಾಗಿ ಆಡುವಂತೆ ಆತ್ಮಬಲ ಹೆಚ್ಚಿಸುವುದು ನನ್ನ ಕೆಲಸ’ ಎಂದಿದ್ದಾರೆ.</p>.<p>ಸ್ಕೈ ಪಾಡ್ಕಾಸ್ಟ್ ನಲ್ಲಿ ಇಂಗ್ಲೆಂಡ್ ತಂಡದ ಮಾಜಿ ನಾಯಕರಾದ ನಾಸೀರ್ ಹುಸೇನ್ ಮತ್ತು ಮೈಕೆಲ್ ಆಥರ್ಟನ್ ಅವರೊಂದಿಗಿನ ಸಂವಾದದಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದ್ದಾರೆ.</p>.<p>‘ನಾಯಕನು ತಂಡದ ಮುಂಚೂಣಿಯಲ್ಲಿದ್ದು ಹೋರಾಡುತ್ತಾನೆ. ತಂಡದ ಮೇಲೆ ಇರುವ ಒತ್ತಡವನ್ನು ನಾಯಕನೊಂದಿಗೆ ಹಂಚಿಕೊಳ್ಳಲು ನಾವಿರುತ್ತೇವೆ. ಪಂದ್ಯದ ಮಧ್ಯ ಬರುವ ಎಲ್ಲ ಪರಿಸ್ಥಿತಿಗಳಿಗೆ ಸ್ಪಂದಿಸಿ ಪರಿಹಾರ ಒದಗಿಸುವುದರಲ್ಲಿ ನಾಯಕನ ಪಾತ್ರವೇ ದೊಡ್ಡದು’ ಎಂದು ಶಾಸ್ತ್ರಿ ಹೇಳಿದ್ದಾರೆ.</p>.<p>‘ಕ್ರಿಕೆಟ್ನಲ್ಲಿ ಫಿಟ್ನೆಸ್ ಬಗ್ಗೆ ಮಾತನಾಡುವುದಾದರೆ ಅದರಲ್ಲಿ ವಿರಾಟ್ ಮೊದಲ ಸ್ಥಾನದಲ್ಲಿದ್ದಾರೆ. ಈ ವಿಷಯದಲ್ಲಿ ವಿರಾಟ್ ಯಾವತ್ತೂ ರಾಜೀ ಮಾಡಿಕೊಳ್ಳುವುದಿಲ್ಲ’ ಎಂದು ಹೇಳಿದರು</p>.<p>ಕೊರೊನಾ ವೈರಸ್ ಕಾರಣ ಹಾಕಲಾಗಿರುವ ಲಾಕ್ಡೌನ್ ನಿಂದ ಲಭಿಸಿರುವ ವಿಶ್ರಾಂತಿಯ ಕುರಿತು ಮಾತನಾಡಿದ ಅವರು, ‘ನ್ಯೂಜಿಲೆಂಡ್ ಪ್ರವಾಸದ ನಂತರ ಇಂತಹದೊಂದು ವಿರಾಮ ಬೇಕಿತ್ತು. ಇದನ್ನು ಸ್ವಾಗತಿಸುತ್ತೇನೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಭಾರತದ ಕ್ರಿಕೆಟ್ಗೆ ವಿರಾಟ್ ಕೊಹ್ಲಿಯೇ ‘ಬಾಸ್’ ಎಂದು ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.</p>.<p>‘ತಂಡಕ್ಕೆ ನಾಯಕನೇ ಮುಖ್ಯಸ್ಥವೆಂಬುದನ್ನು ನಾನು ಯಾವಾಗಲೂ ಒಪ್ಪುತ್ತೇನೆ. ಒಬ್ಬ ಕೋಚ್ ಆಗಿ, ಆಟಗಾರರು ತಮ್ಮ ಶ್ರೇಷ್ಠ ಸಾಮರ್ಥ್ಯವನ್ನು ಪಣಕ್ಕೊಡ್ಡುವಂತೆ ಸಿದ್ಧಗೊಳಿಸುವುದು ನನ್ನ ಕರ್ತವ್ಯ. ಆತ್ಮವಿಶ್ವಾಸ, ದಿಟ್ಟತನ ಮತ್ತು ನಿರ್ಭೀತವಾಗಿ ಆಡುವಂತೆ ಆತ್ಮಬಲ ಹೆಚ್ಚಿಸುವುದು ನನ್ನ ಕೆಲಸ’ ಎಂದಿದ್ದಾರೆ.</p>.<p>ಸ್ಕೈ ಪಾಡ್ಕಾಸ್ಟ್ ನಲ್ಲಿ ಇಂಗ್ಲೆಂಡ್ ತಂಡದ ಮಾಜಿ ನಾಯಕರಾದ ನಾಸೀರ್ ಹುಸೇನ್ ಮತ್ತು ಮೈಕೆಲ್ ಆಥರ್ಟನ್ ಅವರೊಂದಿಗಿನ ಸಂವಾದದಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದ್ದಾರೆ.</p>.<p>‘ನಾಯಕನು ತಂಡದ ಮುಂಚೂಣಿಯಲ್ಲಿದ್ದು ಹೋರಾಡುತ್ತಾನೆ. ತಂಡದ ಮೇಲೆ ಇರುವ ಒತ್ತಡವನ್ನು ನಾಯಕನೊಂದಿಗೆ ಹಂಚಿಕೊಳ್ಳಲು ನಾವಿರುತ್ತೇವೆ. ಪಂದ್ಯದ ಮಧ್ಯ ಬರುವ ಎಲ್ಲ ಪರಿಸ್ಥಿತಿಗಳಿಗೆ ಸ್ಪಂದಿಸಿ ಪರಿಹಾರ ಒದಗಿಸುವುದರಲ್ಲಿ ನಾಯಕನ ಪಾತ್ರವೇ ದೊಡ್ಡದು’ ಎಂದು ಶಾಸ್ತ್ರಿ ಹೇಳಿದ್ದಾರೆ.</p>.<p>‘ಕ್ರಿಕೆಟ್ನಲ್ಲಿ ಫಿಟ್ನೆಸ್ ಬಗ್ಗೆ ಮಾತನಾಡುವುದಾದರೆ ಅದರಲ್ಲಿ ವಿರಾಟ್ ಮೊದಲ ಸ್ಥಾನದಲ್ಲಿದ್ದಾರೆ. ಈ ವಿಷಯದಲ್ಲಿ ವಿರಾಟ್ ಯಾವತ್ತೂ ರಾಜೀ ಮಾಡಿಕೊಳ್ಳುವುದಿಲ್ಲ’ ಎಂದು ಹೇಳಿದರು</p>.<p>ಕೊರೊನಾ ವೈರಸ್ ಕಾರಣ ಹಾಕಲಾಗಿರುವ ಲಾಕ್ಡೌನ್ ನಿಂದ ಲಭಿಸಿರುವ ವಿಶ್ರಾಂತಿಯ ಕುರಿತು ಮಾತನಾಡಿದ ಅವರು, ‘ನ್ಯೂಜಿಲೆಂಡ್ ಪ್ರವಾಸದ ನಂತರ ಇಂತಹದೊಂದು ವಿರಾಮ ಬೇಕಿತ್ತು. ಇದನ್ನು ಸ್ವಾಗತಿಸುತ್ತೇನೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>