ಅಹಮದಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ಕೀಪರ್–ಬ್ಯಾಟರ್ ದಿನೇಶ್ ಕಾರ್ತಿಕ್ ಅವರು ಐಪಿಎಲ್ ನಿಯಮ ಉಲ್ಲಂಘನೆ ಮಾಡಿದ್ದರಿಂದ ಎಚ್ಚರಿಕೆನೀಡಲಾಗಿದೆ.
‘ಈಚೆಗೆ ನಡೆದಿದ್ದ ಎಲಿಮಿನೇಟರ್ ಪಂದ್ಯದಲ್ಲಿ ದಿನೇಶ್ ಅಶಿಸ್ತು ತೋರಿದ್ದಾರೆ.ಇದು ಲೆವೆಲ್ ಒನ್ ಅಪರಾಧವಾಗಿದೆ. ಪಂದ್ಯ ರೆಫರಿಯ ತೀರ್ಪು ಅಂತಿಮವಾಗಿದ್ದು,ದಿನೇಶ್ ಅವರನ್ನು ವಾಗ್ದಂಡನೆಗೊಳಪಡಿಸಲಾಗಿದೆ’ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಲಾಗಿದೆ.