<p><strong>ಮೆಲ್ಬರ್ನ್:</strong> ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಆರಂಭಿಕ ಸ್ಥಾನವನ್ನು ಕೆ.ಎಲ್. ರಾಹುಲ್ ಅವರಿಗೆ ಬಿಟ್ಟುಕೊಟ್ಟಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮಧ್ಯಮ ಕ್ರಮಾಂಕದಲ್ಲೂ ಯಶಸ್ಸು ಕಂಡಿಲ್ಲ. </p><p>ರೋಹಿತ್ ಶರ್ಮಾ ಪಿತೃತ್ವದ ರಜೆಯಿಂದಾಗಿ ಮೊದಲ ಪಂದ್ಯದಲ್ಲಿ ಆಡಿರಲಿಲ್ಲ. ಎರಡನೇ ಹಾಗೂ ಮೂರನೇ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದರು. ಕ್ರಮವಾಗಿ 10, 3, 6 ರನ್ ಗಳಿಸಿ ಔಟ್ ಆಗಿದ್ದರು. </p><p>ಇದರಿಂದ ತೀವ್ರ ಒತ್ತಡಕ್ಕೊಳಗಾಗಿರುವ ರೋಹಿತ್ ಅವರಿಗೆ ಭಾರತದ ಮಾಜಿ ಕೋಚ್ ರವಿ ಶಾಸ್ತ್ರಿ ಸಲಹೆಯನ್ನು ನೀಡಿದ್ದಾರೆ. </p><p>'ರೋಹಿತ್ ಸ್ಪಷ್ಟವಾದ ಮನಸ್ಥಿತಿಯೊಂದಿಗೆ ಕ್ರೀಸಿಗಿಳಿಯಬೇಕು. ತನ್ನ ರಣನೀತಿಯನ್ನು ಬದಲಾಯಿಸಬೇಕು. ಹೆಚ್ಚು ಆಕ್ರಮಣಕಾರಿಯಾಗಿ ಆಡಬೇಕು' ಎಂದು ರವಿ ಶಾಸ್ತ್ರಿ ಸಲಹೆ ಮಾಡಿದ್ದಾರೆ. </p><p>'ಆರನೇ ಕ್ರಮಾಂಕದಲ್ಲೂ ರೋಹಿತ್ ಅತ್ಯಂತ ಅಪಾಯಕಾರಿ ಬ್ಯಾಟರ್ ಆಗಬಲ್ಲರು. ಇತರೆ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ಬೌಲರ್ಗಳ ಮೇಲೆ ಆಕ್ರಮಣಕಾರಿಯಾಗಿ ಆಡುವ ಮನೋಬಲವನ್ನು ಹೊಂದಿರಬೇಕು' ಎಂದು ಹೇಳಿದ್ದಾರೆ. </p><p>'ಆಕ್ರಮಣಕಾರಿಯಾಗಿ ಅಥವಾ ರಕ್ಷಣಾತ್ಮಕವಾಗಿ ಆಡಬೇಕೇ ಎಂಬ ಗೊಂದಲ ಇರಬಾರದು. ರೋಹಿತ್ ತಮ್ಮ ಸಹಜ ಆಟವನ್ನು ಆಡಬೇಕು. ಎದುರಾಳಿ ತಂಡದ ಬೌಲರ್ಗಳನ್ನು ನಿರಂತಕವಾಗಿ ಎದುರಿಸಬೇಕು' ಎಂದು ತಿಳಿಸಿದ್ದಾರೆ. </p><p>'ಆ ಮೂಲಕ ರೋಹಿತ್ಗೆ ತಮ್ಮ ಎಂದಿನ ಬ್ಯಾಟಿಂಗ್ ಲಯಕ್ಕೆ ಮರಳಲು ಸಾಧ್ಯ. ಆರನೇ ಕ್ರಮಾಂಕದಲ್ಲಿ ವಿಶ್ವದ ಬಹುತೇಕ ಆಟಗಾರರು ಕೌಂಟರ್-ಅಟ್ಯಾಕ್ ತಂತ್ರಗಾರಿಕೆಯೊಂದಿಗೆ ಬ್ಯಾಟ್ ಬೀಸುತ್ತಾರೆ' ಎಂದು ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ. </p>.IND vs AUS: ರೋಹಿತ್ ಮೊಣಕಾಲಿಗೆ ಪೆಟ್ಟು, ಆಕಾಶ್ ದೀಪ್ಗೂ ಗಾಯ.Women's U19 T20 Asia Cup: ಫೈನಲ್ನಲ್ಲಿ ಬಾಂಗ್ಲಾ ಮಣಿಸಿದ ಭಾರತ ಚಾಂಪಿಯನ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೆಲ್ಬರ್ನ್:</strong> ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಆರಂಭಿಕ ಸ್ಥಾನವನ್ನು ಕೆ.ಎಲ್. ರಾಹುಲ್ ಅವರಿಗೆ ಬಿಟ್ಟುಕೊಟ್ಟಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮಧ್ಯಮ ಕ್ರಮಾಂಕದಲ್ಲೂ ಯಶಸ್ಸು ಕಂಡಿಲ್ಲ. </p><p>ರೋಹಿತ್ ಶರ್ಮಾ ಪಿತೃತ್ವದ ರಜೆಯಿಂದಾಗಿ ಮೊದಲ ಪಂದ್ಯದಲ್ಲಿ ಆಡಿರಲಿಲ್ಲ. ಎರಡನೇ ಹಾಗೂ ಮೂರನೇ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದರು. ಕ್ರಮವಾಗಿ 10, 3, 6 ರನ್ ಗಳಿಸಿ ಔಟ್ ಆಗಿದ್ದರು. </p><p>ಇದರಿಂದ ತೀವ್ರ ಒತ್ತಡಕ್ಕೊಳಗಾಗಿರುವ ರೋಹಿತ್ ಅವರಿಗೆ ಭಾರತದ ಮಾಜಿ ಕೋಚ್ ರವಿ ಶಾಸ್ತ್ರಿ ಸಲಹೆಯನ್ನು ನೀಡಿದ್ದಾರೆ. </p><p>'ರೋಹಿತ್ ಸ್ಪಷ್ಟವಾದ ಮನಸ್ಥಿತಿಯೊಂದಿಗೆ ಕ್ರೀಸಿಗಿಳಿಯಬೇಕು. ತನ್ನ ರಣನೀತಿಯನ್ನು ಬದಲಾಯಿಸಬೇಕು. ಹೆಚ್ಚು ಆಕ್ರಮಣಕಾರಿಯಾಗಿ ಆಡಬೇಕು' ಎಂದು ರವಿ ಶಾಸ್ತ್ರಿ ಸಲಹೆ ಮಾಡಿದ್ದಾರೆ. </p><p>'ಆರನೇ ಕ್ರಮಾಂಕದಲ್ಲೂ ರೋಹಿತ್ ಅತ್ಯಂತ ಅಪಾಯಕಾರಿ ಬ್ಯಾಟರ್ ಆಗಬಲ್ಲರು. ಇತರೆ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ಬೌಲರ್ಗಳ ಮೇಲೆ ಆಕ್ರಮಣಕಾರಿಯಾಗಿ ಆಡುವ ಮನೋಬಲವನ್ನು ಹೊಂದಿರಬೇಕು' ಎಂದು ಹೇಳಿದ್ದಾರೆ. </p><p>'ಆಕ್ರಮಣಕಾರಿಯಾಗಿ ಅಥವಾ ರಕ್ಷಣಾತ್ಮಕವಾಗಿ ಆಡಬೇಕೇ ಎಂಬ ಗೊಂದಲ ಇರಬಾರದು. ರೋಹಿತ್ ತಮ್ಮ ಸಹಜ ಆಟವನ್ನು ಆಡಬೇಕು. ಎದುರಾಳಿ ತಂಡದ ಬೌಲರ್ಗಳನ್ನು ನಿರಂತಕವಾಗಿ ಎದುರಿಸಬೇಕು' ಎಂದು ತಿಳಿಸಿದ್ದಾರೆ. </p><p>'ಆ ಮೂಲಕ ರೋಹಿತ್ಗೆ ತಮ್ಮ ಎಂದಿನ ಬ್ಯಾಟಿಂಗ್ ಲಯಕ್ಕೆ ಮರಳಲು ಸಾಧ್ಯ. ಆರನೇ ಕ್ರಮಾಂಕದಲ್ಲಿ ವಿಶ್ವದ ಬಹುತೇಕ ಆಟಗಾರರು ಕೌಂಟರ್-ಅಟ್ಯಾಕ್ ತಂತ್ರಗಾರಿಕೆಯೊಂದಿಗೆ ಬ್ಯಾಟ್ ಬೀಸುತ್ತಾರೆ' ಎಂದು ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ. </p>.IND vs AUS: ರೋಹಿತ್ ಮೊಣಕಾಲಿಗೆ ಪೆಟ್ಟು, ಆಕಾಶ್ ದೀಪ್ಗೂ ಗಾಯ.Women's U19 T20 Asia Cup: ಫೈನಲ್ನಲ್ಲಿ ಬಾಂಗ್ಲಾ ಮಣಿಸಿದ ಭಾರತ ಚಾಂಪಿಯನ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>