ಈ ಮೊತ್ತದೆದುರು ಇನಿಂಗ್ಸ್ ಆರಂಭಿಸಿದ ಕರ್ನಾಟಕಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಕೇವಲ ಒಂದು ರನ್ ಆಗಿದ್ದಾಗಲೇ ಭರವಸೆಯ ಆಟಗಾರ ದೇವದತ್ತ ಪಡಿಕಲ್ ಸೊನ್ನೆ ಸುತ್ತಿದರು. ಕೆ.ಸಿದ್ದಾರ್ಥ್ (0), ಪವನ್ ದೇಶಪಾಂಡೆ (8), ಶ್ರೇಯಸ್ ಗೋಪಾಲ್ (11), ಬಿ.ಆರ್. ಶರತ್ (2), ರೋಹನ್ ಕದಂ (29) ನಿರಾಸೆ ಮೂಡಿಸಿದರು.