<p><strong>ನವದೆಹಲಿ</strong>: ಭಾರತ ಕ್ರಿಕೆಟ್ ತಂಡದ ಆರಂಭಿಕಬ್ಯಾಟ್ಸ್ಮನ್ ಶಿಖರ್ ಧವನ್, ಈ ವರ್ಷವೇ ಐಪಿಎಲ್ ನಡೆಯುವ ವಿಶ್ವಾಸದಲ್ಲಿದ್ದಾರೆ. ಮಾತ್ರವಲ್ಲದೆ, ಚುಟುಕು ಕ್ರಿಕೆಟ್ ಟೂರ್ನಿ ನಡೆಯುವುದುಅವಶ್ಯಕ ಎಂದು ಅಭಿಪ್ರಾಯಪಟ್ಟಿದ್ದಾರೆ.</p>.<p>ಶ್ರೀಲಂಕಾದ ಆಲ್ರೌಂಡರ್ ಎಂಜಲೋ ಮ್ಯಾಥ್ಯೂಸ್ ಜೊತೆಗೆ ಇನ್ಸ್ಟಾಗ್ರಾಂ ಲೈವ್ನಲ್ಲಿ ಮಾತನಾಡಿರುವ ಧವನ್, ಕೋವಿಡ್–19 ಭಯದಲ್ಲಿರುವ ಜನರು, ಸೋಂಕಿನ ಗುಂಗಿನಿಂದ ಹೊರಬರಲು ಈ ಟೂರ್ನಿ ನಡೆಯಬೇಕು ಎಂದು ಹೇಳಿದ್ದಾರೆ. 2013 ರಿಂದ 2018ರ ವರೆಗೆ ಸನ್ರೈಸರ್ಸ್ ಹೈದರಾಬಾದ್ ತಂಡದ ಪರಆಡಿದ್ದ ಧವನ್, 2019ರಲ್ಲಿ ತವರು ತಂಡ ಡೆಲಿ ಕ್ಯಾಪಿಟಲ್ಸ್ಗೆ ಮರಳಿದ್ದಾರೆ.</p>.<p>‘ಐಪಿಎಲ್ ನಡೆಯುವ ವಿಶ್ವಾಸದಲ್ಲಿದ್ದೇನೆ. ನಾನು ಯಾವಾಗಲೂ ಧನಾತ್ಮಕವಾಗಿ ಚಿಂತಿಸುತ್ತೇನೆ. ಟೂರ್ನಿಯು ನಡೆದರೆ ಖಂಡಿತಾ ಒಳ್ಳೆಯದಾಗುತ್ತದೆ. ಪ್ರತಿಯೊಬ್ಬರೂ ಸುರಕ್ಷತಾ ಕ್ರಮ ವಹಿಸುವುದು ಅಗತ್ಯ. ಒಂದು ವೇಳೆ ಇದು (ಐಪಿಎಲ್) ಸಾಧ್ಯವಾದರೆ, ಇದು ಸಾಕಷ್ಟು ಸಕಾರಾತ್ಮಕತೆಯನ್ನು ತರಲಿದೆ’ ಎಂದು ಹೇಳಿದ್ದಾರೆ.</p>.<p>‘ಪರಿಸ್ಥಿತಿ ಮತ್ತು ಮನಸ್ಥಿತಿಯನ್ನು ಸುಧಾರಿಸಲು ಕೆಲವು ಕ್ರೀಡೆಗಳತ್ತ ಮುಖಮಾಡುವುದು ಬಹಳ ಮುಖ್ಯ. ಐಪಿಎಲ್ಗೆ ವಾಪಸ್ ಆದರೆ, ಅದರ ಪರಿಣಾಮ ದೊಡ್ಡದಾಗಿರುತ್ತದೆ’ ಎಂದಿದ್ದಾರೆ.</p>.<p>ಮುಂದುವರಿದು, ಐಪಿಎಲ್ ನಡೆಯುತ್ತದೆ ಎಂದರೆ ಅದು ಎಂದಿನಂತೆಯೇ ಆಗಿರಲಿದೆ ಎಂದೂ ಅಲ್ಲ ಎಂದಿದ್ದಾರೆ. ಕ್ರೀಡಾಂಗಣಗಳಲ್ಲಿ ಕುಳಿತು ಪಂದ್ಯ ವೀಕ್ಷಿಸಲುಪ್ರೇಕ್ಷಕರಿಗೆ ಅವಕಾಶ ನೀಡದೆಖಾಲಿ ಕ್ರೀಡಾಂಗಣಗಳಲ್ಲಿ ಐಪಿಎಲ್ ನಡೆಸುವ ಸಾಧ್ಯತೆ ಇದೆ. ಇದೇ ರೀತಿಯಲ್ಲಿ ದೇಶದಾದ್ಯಂತ ಸಾಕಷ್ಟು ಕ್ರೀಡಾಂಗಣಗಳನ್ನು ತೆರೆಯಲಾಗಿದೆ. ಈ ಅಂಶವು ಐಪಿಎಲ್ ನಡೆಯುವ ವಿಶ್ವಾಸ ಹೆಚ್ಚಿಸಿದೆ.</p>.<p>ಖಾಲಿ ಕ್ರೀಡಾಂಗಣದಲ್ಲಿ ಐಪಿಎಲ್ ನಡೆಸುವ ಯೋಜನೆ ಬಗ್ಗೆ ಈ ಹಿಂದೆ ಮಾತನಾಡಿದ್ದ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ‘ಪ್ರೇಕ್ಷಕರಿಲ್ಲದೆ ಪಂದ್ಯವಾಡಿದರೆ,ಆಟದ ಮೋಹಕತೆ ಕಳೆದುಕೊಂಡಂತಾಗುತ್ತದೆ’ಎಂದಿದ್ದರು. ಕೊಹ್ಲಿಯ ಆ ಮಾತನ್ನು ಒಪ್ಪಿರುವ ಧವನ್, ‘ಪಂದ್ಯಗಳು ಮುಚ್ಚಿದ ಬಾಗಿಲಿನಲ್ಲಿ ನಡೆದರೆ, ತಮ್ಮದೇ ಸೆಳೆತ, ಮೋಡಿ ಸೃಷ್ಟಿಸಬಲ್ಲಅಭಿಮಾನಿಗಳು ಮತ್ತು ಅಪಾರ ಜನರ ನಡುವೆ ಆಡುವ ಅವಕಾಶವನ್ನು ನಾವು ಖಂಡಿತವಾಗಿಯೂ ಮಿಸ್ ಮಾಡಿಕೊಳ್ಳಲಿದ್ದೇವೆ. ಆದರೆ, ಈ ಸಂದರ್ಭವು ಕಳೆದ 2 ತಿಂಗಳಿನಿಂದ ಮನೆಯಲ್ಲೇ ಉಳಿದಿದ್ದ ನಾವುಹೊರಬರುವ ಅವಕಾಶ ನೀಡಲಿದೆ’ ಎಂದು ಹೇಳಿದ್ದಾರೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/sports/cricket/no-spectacle-in-cricket-without-spectators-virat-726158.html" target="_blank">ಪ್ರೇಕ್ಷಕರಿಲ್ಲದ ಕ್ರಿಕೆಟ್ನಲ್ಲಿ ಮೋಹಕತೆ ಇಲ್ಲ: ವಿರಾಟ್ ಕೊಹ್ಲಿ</a></p>.<p>‘ಒಂದು ಬಾರಿ ಆಟಕ್ಕೆ ಮರಳಿದರೆ, ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡಲು ಹಾತೊರೆಯಲಿದ್ದೇವೆ. ಇದು ಮೋಜಿನ ಸಂಗತಿಯಾಗಿದೆ. ನಾವು ಆಟವನ್ನು ಮುಂದುವರಿಸುವುದರಿಂದ ಧನಾತ್ಮಕತೆಮೂಡಲಿದೆ’ ಎಂದು ಹೇಳಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಭಾರತ ಕ್ರಿಕೆಟ್ ತಂಡದ ಆರಂಭಿಕಬ್ಯಾಟ್ಸ್ಮನ್ ಶಿಖರ್ ಧವನ್, ಈ ವರ್ಷವೇ ಐಪಿಎಲ್ ನಡೆಯುವ ವಿಶ್ವಾಸದಲ್ಲಿದ್ದಾರೆ. ಮಾತ್ರವಲ್ಲದೆ, ಚುಟುಕು ಕ್ರಿಕೆಟ್ ಟೂರ್ನಿ ನಡೆಯುವುದುಅವಶ್ಯಕ ಎಂದು ಅಭಿಪ್ರಾಯಪಟ್ಟಿದ್ದಾರೆ.</p>.<p>ಶ್ರೀಲಂಕಾದ ಆಲ್ರೌಂಡರ್ ಎಂಜಲೋ ಮ್ಯಾಥ್ಯೂಸ್ ಜೊತೆಗೆ ಇನ್ಸ್ಟಾಗ್ರಾಂ ಲೈವ್ನಲ್ಲಿ ಮಾತನಾಡಿರುವ ಧವನ್, ಕೋವಿಡ್–19 ಭಯದಲ್ಲಿರುವ ಜನರು, ಸೋಂಕಿನ ಗುಂಗಿನಿಂದ ಹೊರಬರಲು ಈ ಟೂರ್ನಿ ನಡೆಯಬೇಕು ಎಂದು ಹೇಳಿದ್ದಾರೆ. 2013 ರಿಂದ 2018ರ ವರೆಗೆ ಸನ್ರೈಸರ್ಸ್ ಹೈದರಾಬಾದ್ ತಂಡದ ಪರಆಡಿದ್ದ ಧವನ್, 2019ರಲ್ಲಿ ತವರು ತಂಡ ಡೆಲಿ ಕ್ಯಾಪಿಟಲ್ಸ್ಗೆ ಮರಳಿದ್ದಾರೆ.</p>.<p>‘ಐಪಿಎಲ್ ನಡೆಯುವ ವಿಶ್ವಾಸದಲ್ಲಿದ್ದೇನೆ. ನಾನು ಯಾವಾಗಲೂ ಧನಾತ್ಮಕವಾಗಿ ಚಿಂತಿಸುತ್ತೇನೆ. ಟೂರ್ನಿಯು ನಡೆದರೆ ಖಂಡಿತಾ ಒಳ್ಳೆಯದಾಗುತ್ತದೆ. ಪ್ರತಿಯೊಬ್ಬರೂ ಸುರಕ್ಷತಾ ಕ್ರಮ ವಹಿಸುವುದು ಅಗತ್ಯ. ಒಂದು ವೇಳೆ ಇದು (ಐಪಿಎಲ್) ಸಾಧ್ಯವಾದರೆ, ಇದು ಸಾಕಷ್ಟು ಸಕಾರಾತ್ಮಕತೆಯನ್ನು ತರಲಿದೆ’ ಎಂದು ಹೇಳಿದ್ದಾರೆ.</p>.<p>‘ಪರಿಸ್ಥಿತಿ ಮತ್ತು ಮನಸ್ಥಿತಿಯನ್ನು ಸುಧಾರಿಸಲು ಕೆಲವು ಕ್ರೀಡೆಗಳತ್ತ ಮುಖಮಾಡುವುದು ಬಹಳ ಮುಖ್ಯ. ಐಪಿಎಲ್ಗೆ ವಾಪಸ್ ಆದರೆ, ಅದರ ಪರಿಣಾಮ ದೊಡ್ಡದಾಗಿರುತ್ತದೆ’ ಎಂದಿದ್ದಾರೆ.</p>.<p>ಮುಂದುವರಿದು, ಐಪಿಎಲ್ ನಡೆಯುತ್ತದೆ ಎಂದರೆ ಅದು ಎಂದಿನಂತೆಯೇ ಆಗಿರಲಿದೆ ಎಂದೂ ಅಲ್ಲ ಎಂದಿದ್ದಾರೆ. ಕ್ರೀಡಾಂಗಣಗಳಲ್ಲಿ ಕುಳಿತು ಪಂದ್ಯ ವೀಕ್ಷಿಸಲುಪ್ರೇಕ್ಷಕರಿಗೆ ಅವಕಾಶ ನೀಡದೆಖಾಲಿ ಕ್ರೀಡಾಂಗಣಗಳಲ್ಲಿ ಐಪಿಎಲ್ ನಡೆಸುವ ಸಾಧ್ಯತೆ ಇದೆ. ಇದೇ ರೀತಿಯಲ್ಲಿ ದೇಶದಾದ್ಯಂತ ಸಾಕಷ್ಟು ಕ್ರೀಡಾಂಗಣಗಳನ್ನು ತೆರೆಯಲಾಗಿದೆ. ಈ ಅಂಶವು ಐಪಿಎಲ್ ನಡೆಯುವ ವಿಶ್ವಾಸ ಹೆಚ್ಚಿಸಿದೆ.</p>.<p>ಖಾಲಿ ಕ್ರೀಡಾಂಗಣದಲ್ಲಿ ಐಪಿಎಲ್ ನಡೆಸುವ ಯೋಜನೆ ಬಗ್ಗೆ ಈ ಹಿಂದೆ ಮಾತನಾಡಿದ್ದ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ‘ಪ್ರೇಕ್ಷಕರಿಲ್ಲದೆ ಪಂದ್ಯವಾಡಿದರೆ,ಆಟದ ಮೋಹಕತೆ ಕಳೆದುಕೊಂಡಂತಾಗುತ್ತದೆ’ಎಂದಿದ್ದರು. ಕೊಹ್ಲಿಯ ಆ ಮಾತನ್ನು ಒಪ್ಪಿರುವ ಧವನ್, ‘ಪಂದ್ಯಗಳು ಮುಚ್ಚಿದ ಬಾಗಿಲಿನಲ್ಲಿ ನಡೆದರೆ, ತಮ್ಮದೇ ಸೆಳೆತ, ಮೋಡಿ ಸೃಷ್ಟಿಸಬಲ್ಲಅಭಿಮಾನಿಗಳು ಮತ್ತು ಅಪಾರ ಜನರ ನಡುವೆ ಆಡುವ ಅವಕಾಶವನ್ನು ನಾವು ಖಂಡಿತವಾಗಿಯೂ ಮಿಸ್ ಮಾಡಿಕೊಳ್ಳಲಿದ್ದೇವೆ. ಆದರೆ, ಈ ಸಂದರ್ಭವು ಕಳೆದ 2 ತಿಂಗಳಿನಿಂದ ಮನೆಯಲ್ಲೇ ಉಳಿದಿದ್ದ ನಾವುಹೊರಬರುವ ಅವಕಾಶ ನೀಡಲಿದೆ’ ಎಂದು ಹೇಳಿದ್ದಾರೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/sports/cricket/no-spectacle-in-cricket-without-spectators-virat-726158.html" target="_blank">ಪ್ರೇಕ್ಷಕರಿಲ್ಲದ ಕ್ರಿಕೆಟ್ನಲ್ಲಿ ಮೋಹಕತೆ ಇಲ್ಲ: ವಿರಾಟ್ ಕೊಹ್ಲಿ</a></p>.<p>‘ಒಂದು ಬಾರಿ ಆಟಕ್ಕೆ ಮರಳಿದರೆ, ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡಲು ಹಾತೊರೆಯಲಿದ್ದೇವೆ. ಇದು ಮೋಜಿನ ಸಂಗತಿಯಾಗಿದೆ. ನಾವು ಆಟವನ್ನು ಮುಂದುವರಿಸುವುದರಿಂದ ಧನಾತ್ಮಕತೆಮೂಡಲಿದೆ’ ಎಂದು ಹೇಳಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>