ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಸನ್ರೈಸರ್ಸ್ ಹೈದರಾಬಾದ್ ತಂಡವು ಕೋವಿಡ್–19 ವಿರುದ್ಧ ಕೇಂದ್ರ ಸರ್ಕಾರ ಸಾರಿರುವ ಹೋರಾಟಕ್ಕೆ ಕೈಜೋಡಿಸಿದೆ.
ಸನ್ರೈಸರ್ಸ್ ಫ್ರಾಂಚೈಸ್ ₹10 ಕೋಟಿ ದೇಣಿಗೆ ನೀಡಲು ನಿರ್ಧರಿಸಿದೆ.
‘ಸನ್ರೈಸರ್ಸ್ ತಂಡದ ಒಡೆತನ ಹೊಂದಿರುವ ಸನ್ ಟಿವಿ ಸಮೂಹವು ಕೋವಿಡ್–19 ಪರಿಹಾರ ನಿಧಿಗೆ ₹10 ಕೋಟಿ ನೀಡಲಿದೆ’ ಎಂದು ಫ್ರಾಂಚೈಸ್, ಗುರುವಾರ ಟ್ವೀಟ್ ಮಾಡಿದೆ.
ಸನ್ರೈಸರ್ಸ್ ಫ್ರಾಂಚೈಸ್ನ ಈ ನಿರ್ಧಾರದ ಬಗ್ಗೆ ನಾಯಕ ಡೇವಿಡ್ ವಾರ್ನರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ಸನ್ ಟಿವಿ ಸಮೂಹ ಅತ್ಯುತ್ತಮ ಕೆಲಸ ಮಾಡಿದೆ’ ಎಂದು ಆಸ್ಟ್ರೇಲಿಯಾದ ವಾರ್ನರ್ ಟ್ವೀಟ್ ಮಾಡಿದ್ದಾರೆ.
ಕಿಂಗ್ಸ್ ಇಲೆವನ್ ಪಂಜಾಬ್ ಹಾಗೂ ಕೋಲ್ಕತ್ತ ನೈಟ್ರೈಡರ್ಸ್ ಫ್ರಾಂಚೈಸ್ಗಳೂ ಈ ಹಿಂದೆ ಪ್ರಧಾನ ಮಂತ್ರಿಗಳ ‘ಕೇರ್ಸ್’ ನಿಧಿಗೆ ದೇಣಿಗೆ ನೀಡಿದ್ದವು. ವಿರಾಟ್ ಕೊಹ್ಲಿ, ಸುನಿಲ್ ಗಾವಸ್ಕರ್, ಯುವರಾಜ್ ಸಿಂಗ್, ಸುರೇಶ್ ರೈನಾ ಸೇರಿದಂತೆ ಹಲವು ಕ್ರಿಕೆಟಿಗರೂ ಸಹಾಯ ಹಸ್ತ ಚಾಚಿದ್ದರು.