<p><strong>ನವದೆಹಲಿ:</strong> ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಸನ್ರೈಸರ್ಸ್ ಹೈದರಾಬಾದ್ ತಂಡವು ಕೋವಿಡ್–19 ವಿರುದ್ಧ ಕೇಂದ್ರ ಸರ್ಕಾರ ಸಾರಿರುವ ಹೋರಾಟಕ್ಕೆ ಕೈಜೋಡಿಸಿದೆ.</p>.<p>ಸನ್ರೈಸರ್ಸ್ ಫ್ರಾಂಚೈಸ್ ₹10 ಕೋಟಿ ದೇಣಿಗೆ ನೀಡಲು ನಿರ್ಧರಿಸಿದೆ.</p>.<p>‘ಸನ್ರೈಸರ್ಸ್ ತಂಡದ ಒಡೆತನ ಹೊಂದಿರುವ ಸನ್ ಟಿವಿ ಸಮೂಹವು ಕೋವಿಡ್–19 ಪರಿಹಾರ ನಿಧಿಗೆ ₹10 ಕೋಟಿ ನೀಡಲಿದೆ’ ಎಂದು ಫ್ರಾಂಚೈಸ್, ಗುರುವಾರ ಟ್ವೀಟ್ ಮಾಡಿದೆ.</p>.<p>ಸನ್ರೈಸರ್ಸ್ ಫ್ರಾಂಚೈಸ್ನ ಈ ನಿರ್ಧಾರದ ಬಗ್ಗೆ ನಾಯಕ ಡೇವಿಡ್ ವಾರ್ನರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.</p>.<p>‘ಸನ್ ಟಿವಿ ಸಮೂಹ ಅತ್ಯುತ್ತಮ ಕೆಲಸ ಮಾಡಿದೆ’ ಎಂದು ಆಸ್ಟ್ರೇಲಿಯಾದ ವಾರ್ನರ್ ಟ್ವೀಟ್ ಮಾಡಿದ್ದಾರೆ.</p>.<p>ಕಿಂಗ್ಸ್ ಇಲೆವನ್ ಪಂಜಾಬ್ ಹಾಗೂ ಕೋಲ್ಕತ್ತ ನೈಟ್ರೈಡರ್ಸ್ ಫ್ರಾಂಚೈಸ್ಗಳೂ ಈ ಹಿಂದೆ ಪ್ರಧಾನ ಮಂತ್ರಿಗಳ ‘ಕೇರ್ಸ್’ ನಿಧಿಗೆ ದೇಣಿಗೆ ನೀಡಿದ್ದವು. ವಿರಾಟ್ ಕೊಹ್ಲಿ, ಸುನಿಲ್ ಗಾವಸ್ಕರ್, ಯುವರಾಜ್ ಸಿಂಗ್, ಸುರೇಶ್ ರೈನಾ ಸೇರಿದಂತೆ ಹಲವು ಕ್ರಿಕೆಟಿಗರೂ ಸಹಾಯ ಹಸ್ತ ಚಾಚಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಸನ್ರೈಸರ್ಸ್ ಹೈದರಾಬಾದ್ ತಂಡವು ಕೋವಿಡ್–19 ವಿರುದ್ಧ ಕೇಂದ್ರ ಸರ್ಕಾರ ಸಾರಿರುವ ಹೋರಾಟಕ್ಕೆ ಕೈಜೋಡಿಸಿದೆ.</p>.<p>ಸನ್ರೈಸರ್ಸ್ ಫ್ರಾಂಚೈಸ್ ₹10 ಕೋಟಿ ದೇಣಿಗೆ ನೀಡಲು ನಿರ್ಧರಿಸಿದೆ.</p>.<p>‘ಸನ್ರೈಸರ್ಸ್ ತಂಡದ ಒಡೆತನ ಹೊಂದಿರುವ ಸನ್ ಟಿವಿ ಸಮೂಹವು ಕೋವಿಡ್–19 ಪರಿಹಾರ ನಿಧಿಗೆ ₹10 ಕೋಟಿ ನೀಡಲಿದೆ’ ಎಂದು ಫ್ರಾಂಚೈಸ್, ಗುರುವಾರ ಟ್ವೀಟ್ ಮಾಡಿದೆ.</p>.<p>ಸನ್ರೈಸರ್ಸ್ ಫ್ರಾಂಚೈಸ್ನ ಈ ನಿರ್ಧಾರದ ಬಗ್ಗೆ ನಾಯಕ ಡೇವಿಡ್ ವಾರ್ನರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.</p>.<p>‘ಸನ್ ಟಿವಿ ಸಮೂಹ ಅತ್ಯುತ್ತಮ ಕೆಲಸ ಮಾಡಿದೆ’ ಎಂದು ಆಸ್ಟ್ರೇಲಿಯಾದ ವಾರ್ನರ್ ಟ್ವೀಟ್ ಮಾಡಿದ್ದಾರೆ.</p>.<p>ಕಿಂಗ್ಸ್ ಇಲೆವನ್ ಪಂಜಾಬ್ ಹಾಗೂ ಕೋಲ್ಕತ್ತ ನೈಟ್ರೈಡರ್ಸ್ ಫ್ರಾಂಚೈಸ್ಗಳೂ ಈ ಹಿಂದೆ ಪ್ರಧಾನ ಮಂತ್ರಿಗಳ ‘ಕೇರ್ಸ್’ ನಿಧಿಗೆ ದೇಣಿಗೆ ನೀಡಿದ್ದವು. ವಿರಾಟ್ ಕೊಹ್ಲಿ, ಸುನಿಲ್ ಗಾವಸ್ಕರ್, ಯುವರಾಜ್ ಸಿಂಗ್, ಸುರೇಶ್ ರೈನಾ ಸೇರಿದಂತೆ ಹಲವು ಕ್ರಿಕೆಟಿಗರೂ ಸಹಾಯ ಹಸ್ತ ಚಾಚಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>