<p><strong>ಕೊಲಂಬೊ:</strong> ಚೆಂಡಿನ ಹೊಳಪು ಉಳಿಸಿಕೊಳ್ಳಲು ಬೆವರು ಬಳಕೆಯು ಎಂಜಲಿನಷ್ಟು ಪರಿಣಾಮಕಾರಿಯಲ್ಲವೆಂದು ಶ್ರೀಲಂಕಾ ತಂಡದ ಬೌಲರ್ಗಳು ಮುಖ್ಯ ಕೋಚ್ ಮಿಕಿ ಆರ್ಥರ್ ಅವರಿಗೆ ತಿಳಿಸಿದ್ದಾರೆ.</p>.<p>ಕೊರೊನಾ ವೈರಸ್ ಸೋಂಕು ಪ್ರಸರಣ ತಡೆಗೆ ಚೆಂಡಿಗೆ ಎಂಜಲು ಲೇಪಿಸುವುದನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲು ಶಿಫಾರಸು ಮಾಡಿರುವ ಐಸಿಸಿ ಕ್ರಿಕೆಟ್ ಸಮಿತಿಯಲ್ಲಿ ಆರ್ಥರ್ ಸದಸ್ಯರಾಗಿದ್ದಾರೆ.</p>.<p>ಲಂಕಾ ತಂಡವು ಈಚೆಗಷ್ಟೇ ಅಭ್ಯಾಶ ಶಿಬಿರ ಆರಂಭಿಸಿದೆ. ಕ್ರಿಕೆಟಿಗರು ತಾಲೀಮು ನಡೆಸುತ್ತಿದ್ದಾರೆ.</p>.<p>‘ಬೆವರು ಬಳಕೆಯಿಂದ ಚೆಂಡು ತುಸು ಭಾರವಾಯಿತು ಎಂದು ಬೌಲರ್ಗಳು ಹೇಳಿದ್ದಾರೆ. ಆದರೆ ಸಲೈವಾದಷ್ಟು ಪರಿಣಾಮಕಾರಿಯಲ್ಲ ಎಂದಿದ್ದಾರೆ. ಚೆಂಡಿನ ಹೊಳಪು ಹೆಚ್ಚಿಸಲು ಎಂಜಲು ಬಳಕೆಯು ಇಲ್ಲಿಯವರೆಗೂ ರೂಢಿಗತವಾಗಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಈ ರೂಢಿಯನ್ನು ಬದಲಾಯಿಸಿಕೊಳ್ಳುವ ಅವಶ್ಯಕತೆ ಇದೆ’ ಎಂದು ಆರ್ಥರ್ ಹೇಳಿದ್ದಾರೆ.</p>.<p>‘ನಾನು ಐಸಿಸಿ ಕ್ರಿಕೆಟ್ ಸಮಿತಿಯಲ್ಲಿದ್ದೇನೆ. ಈ ಶಿಫಾರಸು ಮಾಡುವ ಮುನ್ನ ಏನೆಲ್ಲ ಚರ್ಚೆಗಳು ನಡೆದಿವೆ ಎಂಬುದು ಸ್ಪಷ್ಟವಾಗಿ ಗೊತ್ತಿದೆ. ಬೆವರಿನಿಂದ ಕೊರೊನಾ ಸೋಂಕು ಪ್ರಸರಣವಾಗುವುದಿಲ್ಲವೆಂಬುದು ಸಾಬೀತಾಗಿದೆ. ಅದ್ದರಿಂದ ಅದೊಂದಕ್ಕೆ ಅನುಮತಿ ನೀಡಲು ನಿರ್ಧರಿಸಲಾಗಿದೆ’ ಎಂದು ಆರ್ಥರ್ ಸ್ಪಷ್ಟಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಲಂಬೊ:</strong> ಚೆಂಡಿನ ಹೊಳಪು ಉಳಿಸಿಕೊಳ್ಳಲು ಬೆವರು ಬಳಕೆಯು ಎಂಜಲಿನಷ್ಟು ಪರಿಣಾಮಕಾರಿಯಲ್ಲವೆಂದು ಶ್ರೀಲಂಕಾ ತಂಡದ ಬೌಲರ್ಗಳು ಮುಖ್ಯ ಕೋಚ್ ಮಿಕಿ ಆರ್ಥರ್ ಅವರಿಗೆ ತಿಳಿಸಿದ್ದಾರೆ.</p>.<p>ಕೊರೊನಾ ವೈರಸ್ ಸೋಂಕು ಪ್ರಸರಣ ತಡೆಗೆ ಚೆಂಡಿಗೆ ಎಂಜಲು ಲೇಪಿಸುವುದನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲು ಶಿಫಾರಸು ಮಾಡಿರುವ ಐಸಿಸಿ ಕ್ರಿಕೆಟ್ ಸಮಿತಿಯಲ್ಲಿ ಆರ್ಥರ್ ಸದಸ್ಯರಾಗಿದ್ದಾರೆ.</p>.<p>ಲಂಕಾ ತಂಡವು ಈಚೆಗಷ್ಟೇ ಅಭ್ಯಾಶ ಶಿಬಿರ ಆರಂಭಿಸಿದೆ. ಕ್ರಿಕೆಟಿಗರು ತಾಲೀಮು ನಡೆಸುತ್ತಿದ್ದಾರೆ.</p>.<p>‘ಬೆವರು ಬಳಕೆಯಿಂದ ಚೆಂಡು ತುಸು ಭಾರವಾಯಿತು ಎಂದು ಬೌಲರ್ಗಳು ಹೇಳಿದ್ದಾರೆ. ಆದರೆ ಸಲೈವಾದಷ್ಟು ಪರಿಣಾಮಕಾರಿಯಲ್ಲ ಎಂದಿದ್ದಾರೆ. ಚೆಂಡಿನ ಹೊಳಪು ಹೆಚ್ಚಿಸಲು ಎಂಜಲು ಬಳಕೆಯು ಇಲ್ಲಿಯವರೆಗೂ ರೂಢಿಗತವಾಗಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಈ ರೂಢಿಯನ್ನು ಬದಲಾಯಿಸಿಕೊಳ್ಳುವ ಅವಶ್ಯಕತೆ ಇದೆ’ ಎಂದು ಆರ್ಥರ್ ಹೇಳಿದ್ದಾರೆ.</p>.<p>‘ನಾನು ಐಸಿಸಿ ಕ್ರಿಕೆಟ್ ಸಮಿತಿಯಲ್ಲಿದ್ದೇನೆ. ಈ ಶಿಫಾರಸು ಮಾಡುವ ಮುನ್ನ ಏನೆಲ್ಲ ಚರ್ಚೆಗಳು ನಡೆದಿವೆ ಎಂಬುದು ಸ್ಪಷ್ಟವಾಗಿ ಗೊತ್ತಿದೆ. ಬೆವರಿನಿಂದ ಕೊರೊನಾ ಸೋಂಕು ಪ್ರಸರಣವಾಗುವುದಿಲ್ಲವೆಂಬುದು ಸಾಬೀತಾಗಿದೆ. ಅದ್ದರಿಂದ ಅದೊಂದಕ್ಕೆ ಅನುಮತಿ ನೀಡಲು ನಿರ್ಧರಿಸಲಾಗಿದೆ’ ಎಂದು ಆರ್ಥರ್ ಸ್ಪಷ್ಟಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>