<p><strong>ದುಬೈ:</strong> ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಸೋಲುವಂತೆ ಟೀಮ್ ಇಂಡಿಯಾ ಮಾರ್ಗದರ್ಶಕ ಮಹೇಂದ್ರ ಸಿಂಗ್ ಧೋನಿ ಹಾಗೂ ಕೆ.ಎಲ್. ರಾಹುಲ್ ಅವರಲ್ಲಿ ಪಾಕಿಸ್ತಾನದ ಅಭಿಮಾನಿಗಳು ವಿನಂತಿ ಮಾಡಿದ್ದಾರೆ.</p>.<p>ಭಾರತ ಹಾಗೂ ಪಾಕಿಸ್ತಾನ ನಡುವಣ ರೋಚಕ ಕದನವು ಇಂದು ಸಂಜೆ (ಭಾನುವಾರ) ದುಬೈಯಲ್ಲಿ 7.30ಕ್ಕೆ ಆರಂಭವಾಗಲಿದೆ.</p>.<p>ಇದನ್ನೂ ಓದಿ:<a href="https://www.prajavani.net/sports/cricket/t20-world-cup-cricket-india-pakistan-match-today-megastars-ready-to-pounce-on-pakistans-pretenders-878145.html" itemprop="url">T20 WC: ಭಾರತ–ಪಾಕ್ ಮುಖಾಮುಖಿ ಇಂದು, ಭಾರತಕ್ಕೆ ಜಯದ ಪರಂಪರೆ ಮುಂದುವರಿಸುವ ಸವಾಲು </a></p>.<p>ಭಾರತೀಯ ಆಟಗಾರರು ಶನಿವಾರ ಅಭ್ಯಾಸದ ಬಳಿಕ ಹೋಟೆಲ್ಗೆ ಹಿಂತಿರುಗುತ್ತಿದ್ದ ವೇಳೆ ಪಾಕಿಸ್ತಾನದ ಅಭಿಮಾನಿಗಳು ವಿನಂತಿಸಿದ್ದಾರೆ.</p>.<p>'ರಾಹುಲ್, ದಯವಿಟ್ಟು ನಾಳಿನ ಪಂದ್ಯದಲ್ಲಿ ಉತ್ತಮವಾಗಿ ಆಡಬೇಡಿ' ಎಂದು ವಿನಂತಿಸಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಅವರಿಗೂ ಇದಕ್ಕೆ ಸಮಾನವಾದ ಪ್ರಶ್ನೆ ಎದುರಾಗಿತ್ತು. 'ದಯವಿಟ್ಟು ಈ ಪಂದ್ಯವನ್ನು ಬಿಟ್ಟುಬಿಡಿ' ಎಂದು ವಿನಂತಿ ಮಾಡಿದ್ದಾರೆ.</p>.<p>ಈ ಸಂದರ್ಭದಲ್ಲಿ ಮಹಿ, 'ಇದುವೇ ನಮ್ಮ ಕೆಲಸ' ಎಂದು ನಗುಮುಖದಿಂದಲೇ ಉತ್ತರಿಸುತ್ತಾರೆ. ಮಹಿ ಜೊತೆಗೆ ಜಸ್ಪ್ರೀತ್ ಬೂಮ್ರಾ ಸಹ ಕಂಡುಬಂದಿದ್ದಾರೆ.</p>.<p>ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯದಲ್ಲಿ ಯಾರು ಗೆಲ್ಲಲಿದ್ದಾರೆ ಎಂಬುದು ಬಹಳಷ್ಟು ಕುತೂಹಲ ಕೆರಳಿಸಿದೆ. ವಿಶ್ವಕಪ್ನಲ್ಲಿ ಇದುವರೆಗೆ ಆಡಿರುವ ಎಲ್ಲ 12 ಪಂದ್ಯಗಳಲ್ಲಿ ಭಾರತ ಗೆಲುವಿನ ದಾಖಲೆಯನ್ನು ಹೊಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದುಬೈ:</strong> ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಸೋಲುವಂತೆ ಟೀಮ್ ಇಂಡಿಯಾ ಮಾರ್ಗದರ್ಶಕ ಮಹೇಂದ್ರ ಸಿಂಗ್ ಧೋನಿ ಹಾಗೂ ಕೆ.ಎಲ್. ರಾಹುಲ್ ಅವರಲ್ಲಿ ಪಾಕಿಸ್ತಾನದ ಅಭಿಮಾನಿಗಳು ವಿನಂತಿ ಮಾಡಿದ್ದಾರೆ.</p>.<p>ಭಾರತ ಹಾಗೂ ಪಾಕಿಸ್ತಾನ ನಡುವಣ ರೋಚಕ ಕದನವು ಇಂದು ಸಂಜೆ (ಭಾನುವಾರ) ದುಬೈಯಲ್ಲಿ 7.30ಕ್ಕೆ ಆರಂಭವಾಗಲಿದೆ.</p>.<p>ಇದನ್ನೂ ಓದಿ:<a href="https://www.prajavani.net/sports/cricket/t20-world-cup-cricket-india-pakistan-match-today-megastars-ready-to-pounce-on-pakistans-pretenders-878145.html" itemprop="url">T20 WC: ಭಾರತ–ಪಾಕ್ ಮುಖಾಮುಖಿ ಇಂದು, ಭಾರತಕ್ಕೆ ಜಯದ ಪರಂಪರೆ ಮುಂದುವರಿಸುವ ಸವಾಲು </a></p>.<p>ಭಾರತೀಯ ಆಟಗಾರರು ಶನಿವಾರ ಅಭ್ಯಾಸದ ಬಳಿಕ ಹೋಟೆಲ್ಗೆ ಹಿಂತಿರುಗುತ್ತಿದ್ದ ವೇಳೆ ಪಾಕಿಸ್ತಾನದ ಅಭಿಮಾನಿಗಳು ವಿನಂತಿಸಿದ್ದಾರೆ.</p>.<p>'ರಾಹುಲ್, ದಯವಿಟ್ಟು ನಾಳಿನ ಪಂದ್ಯದಲ್ಲಿ ಉತ್ತಮವಾಗಿ ಆಡಬೇಡಿ' ಎಂದು ವಿನಂತಿಸಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಅವರಿಗೂ ಇದಕ್ಕೆ ಸಮಾನವಾದ ಪ್ರಶ್ನೆ ಎದುರಾಗಿತ್ತು. 'ದಯವಿಟ್ಟು ಈ ಪಂದ್ಯವನ್ನು ಬಿಟ್ಟುಬಿಡಿ' ಎಂದು ವಿನಂತಿ ಮಾಡಿದ್ದಾರೆ.</p>.<p>ಈ ಸಂದರ್ಭದಲ್ಲಿ ಮಹಿ, 'ಇದುವೇ ನಮ್ಮ ಕೆಲಸ' ಎಂದು ನಗುಮುಖದಿಂದಲೇ ಉತ್ತರಿಸುತ್ತಾರೆ. ಮಹಿ ಜೊತೆಗೆ ಜಸ್ಪ್ರೀತ್ ಬೂಮ್ರಾ ಸಹ ಕಂಡುಬಂದಿದ್ದಾರೆ.</p>.<p>ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯದಲ್ಲಿ ಯಾರು ಗೆಲ್ಲಲಿದ್ದಾರೆ ಎಂಬುದು ಬಹಳಷ್ಟು ಕುತೂಹಲ ಕೆರಳಿಸಿದೆ. ವಿಶ್ವಕಪ್ನಲ್ಲಿ ಇದುವರೆಗೆ ಆಡಿರುವ ಎಲ್ಲ 12 ಪಂದ್ಯಗಳಲ್ಲಿ ಭಾರತ ಗೆಲುವಿನ ದಾಖಲೆಯನ್ನು ಹೊಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>