<p><strong>ಪುಲ್ವಾಮಾ, ಜಮ್ಮು–ಕಾಶ್ಮೀರ (ಪಿಟಿಐ):</strong> ದಕ್ಷಿಣ ಕಾಶ್ಮೀರದ ಪುಲ್ವಾಮಾ ಎಂದಾಕ್ಷಣ ಭಯೋತ್ಪಾದಕರ ದಾಳಿಯ ಹತ್ತಾರು ಪ್ರಕರಣಗಳು ನೆನಪಿಗೆ ಬರುತ್ತವೆ. ಆದರೆ ಸೋಮವಾರ ರಾತ್ರಿ ಇದೇ ಪುಲ್ವಾಮಾದಲ್ಲಿ ನೂರಾರು ಜನರು ಸೇರಿದ್ದರು. ಹೊನಲು ಬೆಳಕಿನ ಅಂಗಳದಲ್ಲಿ ಸಂಭ್ರಮಿಸಿದರು. </p>.<p>ಪುಲ್ವಾಮಾ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಆರಂಭವಾದ ರಾಯಲ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯವು ಈ ಸಂಭ್ರಮಕ್ಕೆ ಕಾರಣವಾಯಿತು. ಈ ಟೂರ್ನಿಯಲ್ಲಿ ಒಟ್ಟು 12 ತಂಡಗಳು ಭಾಗವಹಿಸಿವೆ. ಮೊದಲ ಪಂದ್ಯದಲ್ಲಿ ರಾಯಲ್ ಗುಡ್ವಿಲ್ ಮತ್ತು ಸುಲ್ತಾನ್ ಸ್ಪ್ರಿಂಗ್ಸ್ ಬಾರಾಮುಲ್ಲಾ ತಂಡಗಳು ಮುಖಾಮುಖಿಯಾಗಿದ್ದವು. </p>.<p>‘ಹೊಸ ಇನಿಂಗ್ಸ್ನ ಆರಂಭ ಇದು’ ಎಂದು ಪುಲ್ವಾಮಾದ ಪಿಡಿಪಿ ಶಾಸಕ ವಹೀದ್ ಉರ್ ರೆಹಮಾನ್ ಬಣ್ಣಿಸಿದರು. </p>.<p>‘ಕ್ರೀಡೆಯು ಭರವಸೆ ಮತ್ತು ಅವಕಾಶವನ್ನು ಬೆಸೆಯುವ ಸೇತುವೆ. ಇದು ಕೇವಲ ಪಂದ್ಯವಲ್ಲ. ಹಲವು ಆಕಾಂಕ್ಷೆಗಳ ಹಬ್ಬವಾಗಿದೆ’ ಎಂದೂ ಅವರು ಹೇಳಿದರು. </p>.<p>‘ಸ್ಥಳೀಯ ಪ್ರತಿಭೆಗಳಿಗೆ ಕ್ರೀಡೆಯತ್ತ ಆಕರ್ಷಿಸುವುದು ನಮ್ಮ ಮುಖ್ಯ ಗುರಿ. ಯುವಜನತೆಗೆ ಒಂದು ಉತ್ತಮ ವೇದಿಕೆ ನೀಡುವುದು ಈ ಟೂರ್ನಿಯ ಉದ್ದೇಶ‘ ಎಂದು ಆಯೋಜಕರು ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪುಲ್ವಾಮಾ, ಜಮ್ಮು–ಕಾಶ್ಮೀರ (ಪಿಟಿಐ):</strong> ದಕ್ಷಿಣ ಕಾಶ್ಮೀರದ ಪುಲ್ವಾಮಾ ಎಂದಾಕ್ಷಣ ಭಯೋತ್ಪಾದಕರ ದಾಳಿಯ ಹತ್ತಾರು ಪ್ರಕರಣಗಳು ನೆನಪಿಗೆ ಬರುತ್ತವೆ. ಆದರೆ ಸೋಮವಾರ ರಾತ್ರಿ ಇದೇ ಪುಲ್ವಾಮಾದಲ್ಲಿ ನೂರಾರು ಜನರು ಸೇರಿದ್ದರು. ಹೊನಲು ಬೆಳಕಿನ ಅಂಗಳದಲ್ಲಿ ಸಂಭ್ರಮಿಸಿದರು. </p>.<p>ಪುಲ್ವಾಮಾ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಆರಂಭವಾದ ರಾಯಲ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯವು ಈ ಸಂಭ್ರಮಕ್ಕೆ ಕಾರಣವಾಯಿತು. ಈ ಟೂರ್ನಿಯಲ್ಲಿ ಒಟ್ಟು 12 ತಂಡಗಳು ಭಾಗವಹಿಸಿವೆ. ಮೊದಲ ಪಂದ್ಯದಲ್ಲಿ ರಾಯಲ್ ಗುಡ್ವಿಲ್ ಮತ್ತು ಸುಲ್ತಾನ್ ಸ್ಪ್ರಿಂಗ್ಸ್ ಬಾರಾಮುಲ್ಲಾ ತಂಡಗಳು ಮುಖಾಮುಖಿಯಾಗಿದ್ದವು. </p>.<p>‘ಹೊಸ ಇನಿಂಗ್ಸ್ನ ಆರಂಭ ಇದು’ ಎಂದು ಪುಲ್ವಾಮಾದ ಪಿಡಿಪಿ ಶಾಸಕ ವಹೀದ್ ಉರ್ ರೆಹಮಾನ್ ಬಣ್ಣಿಸಿದರು. </p>.<p>‘ಕ್ರೀಡೆಯು ಭರವಸೆ ಮತ್ತು ಅವಕಾಶವನ್ನು ಬೆಸೆಯುವ ಸೇತುವೆ. ಇದು ಕೇವಲ ಪಂದ್ಯವಲ್ಲ. ಹಲವು ಆಕಾಂಕ್ಷೆಗಳ ಹಬ್ಬವಾಗಿದೆ’ ಎಂದೂ ಅವರು ಹೇಳಿದರು. </p>.<p>‘ಸ್ಥಳೀಯ ಪ್ರತಿಭೆಗಳಿಗೆ ಕ್ರೀಡೆಯತ್ತ ಆಕರ್ಷಿಸುವುದು ನಮ್ಮ ಮುಖ್ಯ ಗುರಿ. ಯುವಜನತೆಗೆ ಒಂದು ಉತ್ತಮ ವೇದಿಕೆ ನೀಡುವುದು ಈ ಟೂರ್ನಿಯ ಉದ್ದೇಶ‘ ಎಂದು ಆಯೋಜಕರು ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>