‘ಆಸ್ಟ್ರೇಲಿಯಾ ತಂಡವನ್ನು ಅದರ ತವರು ನೆಲದಲ್ಲಿಯೇ ಸೋಲಿಸಿದ್ದು ಬಹುದೊಡ್ಡ ಸಾಧನೆ. ಏಕೆಂದರೆ, ಆ ಸರಣಿಯ ಮೊದಲ ಪಂದ್ಯದಲ್ಲಿ ಭಾರತವು ಅತ್ಯಂತ ಹೀನಾಯವಾಗಿ ಸೋತಿತ್ತು. ಅದರ ನಂತರ ಪುಟಿದೆದ್ದ ರೀತಿ ಅನನ್ಯವಾದದ್ದು. ನಾಯಕ ವಿರಾಟ್ ಕೊಹ್ಲಿ ಅವರ ಗೈರುಹಾಜರಿಯಲ್ಲಿಯೂ ಯುವ ಆಟಗಾರರು ದಾಖಲೆ ಬರೆದರು‘ ಎಂದು ಲಕ್ಷ್ಮಣ್ ಶ್ಲಾಘಿಸಿದರು.