<p><strong>ನವದೆಹಲಿ</strong>: ಭಾರತದ ಫುಟ್ಬಾಲ್ನಲ್ಲಿ ಅಗ್ರ ಸ್ಥರದ ಲೀಗ್ಅನ್ನು ಇನ್ನು ಮುಂದೆ ಖಾಸಗಿಯವರು ವಹಿಸುವಂತಿಲ್ಲ. ಸುಪ್ರೀಂ ಕೋರ್ಟ್ ಸಮ್ಮತಿಸಿರುವ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ನ (ಎಐಎಫ್ಎಫ್) ಹೊಸ ನಿಯಮಾವಳಿಯ ಪ್ರಕಾರ ಈ ಲೀಗ್ನ ಮಾಲೀಕತ್ವ ಫೆಡರೇಷನ್ ಕೈಯ್ಯಲೇ ಇರಲಿದೆ.</p>.<p>ರಿಲಯನ್ಸ್ನ ಅಧೀನಸಂಸ್ಥೆಯಾದ ಫುಟ್ಬಾಲ್ ಸ್ಪೋರ್ಟ್ಸ್ ಡೆವಲಪ್ಮೆಂಟ್ ಲಿಮಿಟೆಡ್ (ಎಫ್ಎಸ್ಡಿಎಲ್) 2014ರಿಂದ ದೇಶಿ ಫುಟ್ಬಾಲ್ನ ಅಗ್ರಸ್ಥರದ ಲೀಗ್ ಆಗಿರುವ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಮಾಲೀಕತ್ವ ಮತ್ತು ನಿರ್ವಹಣೆ ಹೊಂದಿತ್ತು.</p>.<p>ಲೀಗ್ನ ಮಾಲೀಕತ್ವ ಮತ್ತು ನಿರ್ವಹಣೆಯನ್ನು ಇನ್ನು ಎಐಎಫ್ಎಫ್ ವಹಿಸಿಕೊಳ್ಳಲಿದೆ. ಹೊಸ ನಿಯಮಾವಳಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಅಂಗೀಕಾರದ ಮುದ್ರೆ ಒತ್ತಿದೆ.</p>.<p>ಪರಿಷ್ಕೃತ ನಿಯಮಾವಳಿಯ ಪ್ರಕಾರ ಅಗ್ರ ಲೀಗ್ನಲ್ಲಿ ಬಡ್ತಿ ಮತ್ತು ಹಿಂಬಡ್ತಿ (ಪ್ರಮೋಷನ್– ರೆಲಿಗೇಷನ್) ಇರಲಿದೆ.</p>.<p>ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಲ್.ನಾಗೇಶ್ವರ ರಾವ್ ಅವರು ಸಿದ್ಧಪಡಿಸಿರುವ ಎಐಎಫ್ಎಫ್ನ ಹೊಸ ಕರಡಿಗೆ ಕೆಲವು ಮಾರ್ಪಾಡುಗಳೊಂದಿಗೆ ಸಮ್ಮತಿ ನೀಡಿರುವ ನ್ಯಾಯಾಲಯವು, ನಾಲ್ಕು ವಾರಗಳ ಒಳಗಾಗಿ ಸರ್ವಸದಸ್ಯರ ಸಭೆಯಲ್ಲಿ ಇದನ್ನು ಅಂಗೀಕರಿಸುವಂತೆ ನಿರ್ದೇಶನ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಭಾರತದ ಫುಟ್ಬಾಲ್ನಲ್ಲಿ ಅಗ್ರ ಸ್ಥರದ ಲೀಗ್ಅನ್ನು ಇನ್ನು ಮುಂದೆ ಖಾಸಗಿಯವರು ವಹಿಸುವಂತಿಲ್ಲ. ಸುಪ್ರೀಂ ಕೋರ್ಟ್ ಸಮ್ಮತಿಸಿರುವ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ನ (ಎಐಎಫ್ಎಫ್) ಹೊಸ ನಿಯಮಾವಳಿಯ ಪ್ರಕಾರ ಈ ಲೀಗ್ನ ಮಾಲೀಕತ್ವ ಫೆಡರೇಷನ್ ಕೈಯ್ಯಲೇ ಇರಲಿದೆ.</p>.<p>ರಿಲಯನ್ಸ್ನ ಅಧೀನಸಂಸ್ಥೆಯಾದ ಫುಟ್ಬಾಲ್ ಸ್ಪೋರ್ಟ್ಸ್ ಡೆವಲಪ್ಮೆಂಟ್ ಲಿಮಿಟೆಡ್ (ಎಫ್ಎಸ್ಡಿಎಲ್) 2014ರಿಂದ ದೇಶಿ ಫುಟ್ಬಾಲ್ನ ಅಗ್ರಸ್ಥರದ ಲೀಗ್ ಆಗಿರುವ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಮಾಲೀಕತ್ವ ಮತ್ತು ನಿರ್ವಹಣೆ ಹೊಂದಿತ್ತು.</p>.<p>ಲೀಗ್ನ ಮಾಲೀಕತ್ವ ಮತ್ತು ನಿರ್ವಹಣೆಯನ್ನು ಇನ್ನು ಎಐಎಫ್ಎಫ್ ವಹಿಸಿಕೊಳ್ಳಲಿದೆ. ಹೊಸ ನಿಯಮಾವಳಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಅಂಗೀಕಾರದ ಮುದ್ರೆ ಒತ್ತಿದೆ.</p>.<p>ಪರಿಷ್ಕೃತ ನಿಯಮಾವಳಿಯ ಪ್ರಕಾರ ಅಗ್ರ ಲೀಗ್ನಲ್ಲಿ ಬಡ್ತಿ ಮತ್ತು ಹಿಂಬಡ್ತಿ (ಪ್ರಮೋಷನ್– ರೆಲಿಗೇಷನ್) ಇರಲಿದೆ.</p>.<p>ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಲ್.ನಾಗೇಶ್ವರ ರಾವ್ ಅವರು ಸಿದ್ಧಪಡಿಸಿರುವ ಎಐಎಫ್ಎಫ್ನ ಹೊಸ ಕರಡಿಗೆ ಕೆಲವು ಮಾರ್ಪಾಡುಗಳೊಂದಿಗೆ ಸಮ್ಮತಿ ನೀಡಿರುವ ನ್ಯಾಯಾಲಯವು, ನಾಲ್ಕು ವಾರಗಳ ಒಳಗಾಗಿ ಸರ್ವಸದಸ್ಯರ ಸಭೆಯಲ್ಲಿ ಇದನ್ನು ಅಂಗೀಕರಿಸುವಂತೆ ನಿರ್ದೇಶನ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>