ಅದರ ನಂತರ ತಂಡವು ಹೆಚ್ಚು ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿತು. 62ನೇ ನಿಮಿಷದಲ್ಲಿ ಮುಂಬೈನ ಪ್ರತೀಕ್ ಚೌಧರಿ ಎಟಿಕೆಯ ರಕ್ಷಣಾ ಕೋಟೆಯನ್ನು ಭೇದಿಸಿ ಗೋಲು ಗಳಿಸಿದರು. ಸಮಬಲ ಸಾಧಿಸಲು ಕಾರಣರಾದರು. ನಂತರ ತಂಡದ ಅವಧಿ ಮುಗಿಯುವವರೆಗೂ ಯಾರಿಗೂ ಮುನ್ನಡೆ ಸಾಧಿಸಲು ಸಾಧ್ಯವಾಗಲಿಲ್ಲ. ಈ ತುರುಸಿನ ಹಣಾಹಣಿಯಲ್ಲಿ ಉಭಯ ತಂಡಗಳ ಆಟಗಾರರ ನಡುವೆ ಮಾತಿನ ಚಕಮಕಿ ಮತ್ತು ತಳ್ಳಾಟಗಳೂ ನಡೆದಿವು. ಮುಂಬೈನ ಸರ್ಗಿ ಕೆವಿಯನ್, ಸುಭಾಶಿಶ್ ಬೋಸ್ ಮತ್ತು ಎಟಿಕೆಯ ಅನಾಸ್ ಎಡತೊಡಿಕಾ ಅವರು ಹಳದಿ ಕಾರ್ಡ್ ದರ್ಶನ ಮಾಡಬೇಕಾಯಿತು.