<p><strong>ಬೆಂಗಳೂರು:</strong> ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್ಸಿ) ವಿರುದ್ಧದ ಐಎಸ್ಎಲ್ ಹಣಾಹಣಿಯ ವೇಳೆ ತಮ್ಮ ತಂಡದ ಆಟಗಾರನನ್ನು ಪಂದ್ಯದ ರೆಫರಿಯು ಮಂಗ ಎಂದು ಕರೆದಿದ್ದಾಗಿ ಮುಂಬೈ ಸಿಟಿ ಎಫ್ಸಿ ತಂಡದ ಕೋಚ್ ಜೋರ್ಗೆ ಕೋಸ್ಟಾ ದೂರಿದ್ದಾರೆ.</p>.<p>ಈ ಕುರಿತು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಎಐಎಫ್ಎಫ್) ತನಿಖೆ ನಡೆಸುವ ಸಾಧ್ಯತೆ ಇದೆ.</p>.<p>ಭಾನುವಾರದ ಹಣಾಹಣಿಯಲ್ಲಿ ಮುಂಬೈ ತಂಡ 3–2 ಗೋಲುಗಳಿಂದ ಗೆದ್ದಿತ್ತು.</p>.<p>ಸೌದಿ ಅರೇಬಿಯಾದ ರೆಫರಿ ಟರ್ಕಿ ಅಲಕುದಾಯರ್ ಅವರು ಸರ್ಜಿ ಕೆವಿನ್ ಅವರನ್ನು ಕೋತಿ ಎಂದು ಕರೆದಿದ್ದಲ್ಲದೇ ಕೆಲ ಸಂಜ್ಞೆಗಳ ಮೂಲಕ ಅವರನ್ನು ಹೀಯಾಳಿಸಿದ್ದರು ಎಂದು ಕೋಸ್ಟಾ ಆರೋಪಿಸಿದ್ದಾರೆ.</p>.<p>‘ಐಎಸ್ಎಲ್ ಟೂರ್ನಿಯಲ್ಲಿ ಸಾಕಷ್ಟು ಮಂದಿ ವಿದೇಶಿ ಆಟಗಾರರು, ಕೋಚ್ಗಳು ಮತ್ತು ನೆರವು ಸಿಬ್ಬಂದಿ ಭಾಗವಹಿಸಿದ್ದಾರೆ. ಈ ಲೀಗ್ನ ಯಶಸ್ಸಿಗಾಗಿ ಎಲ್ಲರೂ ಶ್ರಮಿಸುತ್ತಿದ್ದಾರೆ. ಅವರೊಂದಿಗೆ ಗೌರವಯುತವಾಗಿ ನಡೆದುಕೊಳ್ಳಬೇಕು’ ಎಂದಿದ್ದಾರೆ.</p>.<p>‘ಎಐಎಫ್ಎಫ್ ಶಿಸ್ತು ಸಮಿತಿಯು ಪ್ರಕರಣದ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಿದೆ’ ಎಂದು ಲೀಗ್ನ ವಕ್ತಾರರೊಬ್ಬರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್ಸಿ) ವಿರುದ್ಧದ ಐಎಸ್ಎಲ್ ಹಣಾಹಣಿಯ ವೇಳೆ ತಮ್ಮ ತಂಡದ ಆಟಗಾರನನ್ನು ಪಂದ್ಯದ ರೆಫರಿಯು ಮಂಗ ಎಂದು ಕರೆದಿದ್ದಾಗಿ ಮುಂಬೈ ಸಿಟಿ ಎಫ್ಸಿ ತಂಡದ ಕೋಚ್ ಜೋರ್ಗೆ ಕೋಸ್ಟಾ ದೂರಿದ್ದಾರೆ.</p>.<p>ಈ ಕುರಿತು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಎಐಎಫ್ಎಫ್) ತನಿಖೆ ನಡೆಸುವ ಸಾಧ್ಯತೆ ಇದೆ.</p>.<p>ಭಾನುವಾರದ ಹಣಾಹಣಿಯಲ್ಲಿ ಮುಂಬೈ ತಂಡ 3–2 ಗೋಲುಗಳಿಂದ ಗೆದ್ದಿತ್ತು.</p>.<p>ಸೌದಿ ಅರೇಬಿಯಾದ ರೆಫರಿ ಟರ್ಕಿ ಅಲಕುದಾಯರ್ ಅವರು ಸರ್ಜಿ ಕೆವಿನ್ ಅವರನ್ನು ಕೋತಿ ಎಂದು ಕರೆದಿದ್ದಲ್ಲದೇ ಕೆಲ ಸಂಜ್ಞೆಗಳ ಮೂಲಕ ಅವರನ್ನು ಹೀಯಾಳಿಸಿದ್ದರು ಎಂದು ಕೋಸ್ಟಾ ಆರೋಪಿಸಿದ್ದಾರೆ.</p>.<p>‘ಐಎಸ್ಎಲ್ ಟೂರ್ನಿಯಲ್ಲಿ ಸಾಕಷ್ಟು ಮಂದಿ ವಿದೇಶಿ ಆಟಗಾರರು, ಕೋಚ್ಗಳು ಮತ್ತು ನೆರವು ಸಿಬ್ಬಂದಿ ಭಾಗವಹಿಸಿದ್ದಾರೆ. ಈ ಲೀಗ್ನ ಯಶಸ್ಸಿಗಾಗಿ ಎಲ್ಲರೂ ಶ್ರಮಿಸುತ್ತಿದ್ದಾರೆ. ಅವರೊಂದಿಗೆ ಗೌರವಯುತವಾಗಿ ನಡೆದುಕೊಳ್ಳಬೇಕು’ ಎಂದಿದ್ದಾರೆ.</p>.<p>‘ಎಐಎಫ್ಎಫ್ ಶಿಸ್ತು ಸಮಿತಿಯು ಪ್ರಕರಣದ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಿದೆ’ ಎಂದು ಲೀಗ್ನ ವಕ್ತಾರರೊಬ್ಬರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>