<p><strong>ಬೆಂಗಳೂರು:</strong> ಎಂಥಾ ಪರಿಸ್ಥಿತಿಯಲ್ಲೂ ಕಠಿಣ ಹೋರಾಟದಲ್ಲಿ ತೊಡಗುವ ಉತ್ಕಟ ಬಯಕೆಯೇ ಈ ಋತುವಿನುದ್ದಕ್ಕೂ ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್ಸಿ) ತಂಡದ ಆಟದಲ್ಲಿ ಮೈದಳೆದಂತೆ ಕಾಣುತಿತ್ತು. ಎಫ್ಸಿ ಗೋವಾ ವಿರುದ್ಧ ಬುಧವಾರ ನಡೆದ ಐಎಸ್ಎಲ್ ಸೆಮಿಫೈನಲ್ ಮೊದಲ ಲೆಗ್ನಲ್ಲೂ ಈ ಮನೋಭಾವ ಎದ್ದುಕಂಡಿತು.</p>.<p>ಐಎಸ್ಎಲ್ ಪ್ಲೇ ಆಫ್ ಹಂತದಲ್ಲಿ ಸತತ ಎರಡು ಜಯ ಸಾಧಿಸಿದ ಮೂರನೇ ಕೋಚ್ ಎಂಬ ಹಿರಿಮೆ ಬಿಎಫ್ಸಿ ಹೆಡ್ ಕೋಚ್ ಜೆರಾರ್ಡ್ ಝಾರ್ಗೋಝಾ ಅವರದಾಯಿತು. ಸೈಮನ್ ಗ್ರೇಸನ್ ಮತ್ತು ಪೀಟರ್ ಕ್ರಾಟ್ಕಿ ಮೊದಲ ಇಬ್ಬರು.</p>.<p>‘ಪೂರ್ವಸಿದ್ಧತೆ ಮತ್ತು ಮನೋಭೂಮಿಕೆ ನಮ್ಮ ತಂಡವು, ಗೋವಾ ವಿರುದ್ಧ ಕಂಠೀರವ ಕ್ರೀಡಾಂಗಣದಲ್ಲಿ 2–0 ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು’ ಎನ್ನುತ್ತಾರೆ ಝಾರ್ಗೋಝಾ.</p>.<p>‘ಮುಂಬೈ ವಿರುದ್ಧ ಪ್ಲೇಆಫ್ ಪಂದ್ಯಕ್ಕೆ ಮೊದಲು 10 ದಿನ ನಮಗೆ ತರಬೇತಿಗೆ ದೊರಕಿತ್ತು. ಆಗಲೇ ತಂಡ ಪ್ಲೇ ಆಫ್ ಮೂಡ್ನಲ್ಲಿದ್ದುದು ವ್ಯಕ್ತವಾಗಿತ್ತು. ತಂಡದಲ್ಲಿ ಅಂಥ ವಿಶ್ವಾಸ ಕಾಣಬಹುದಾಗಿತ್ತು’ ಎಂದು ಬುಧವಾರ ತಂಡದ ಗೆಲುವಿನ ನಂತರ ಪತ್ರಿಕಾಗೋಷ್ಠಿಯಲ್ಲಿ ಝಾರ್ಗೋಝಾ ಹೇಳಿದರು.</p>.<p>ಗೋವಾ ವಿರುದ್ಧ ಸೆಮಿಫೈನಲ್ ಲೆಗ್ಗೆ ಮೊದಲಿನ ಪಂದ್ಯದಲ್ಲಿ ಬ್ಲೂಸ್ ತಂಡ, ಮುಂಬೈ ಸಿಟಿ ಎಫ್ಸಿ ತಂಡವನ್ನು 5–0 ಗೋಲುಗಳಿಂದ ಸದೆಬಡಿದಿತ್ತು.</p>.<p>‘ಮುಂಬೈ ವಿರುದ್ಧದ ಗೆಲುವು ನಮಗೆ ಅಗತ್ಯ ಮನೋಬಲವನ್ನು ಒದಗಿಸಿತು. ಏಕೆಂದರೆ ಗೋವಾ ತಂಡ ಲೀಗ್ನ ಅತ್ಯುತ್ತಮ ತಂಡಗಳಲ್ಲಿ ಒಂದಾಗಿತ್ತು. ನಮಗೆ ಆ ತಂಡ ಎದುರಿಸಲು ಬೇಕಾದ ಸ್ಥೈರ್ಯವನ್ನು ಆ ಗೆಲುವು ಒದಗಿಸಿತ್ತು. ನಾವು ಆ ಗೆಲುವಿಗೆ ಯೋಗ್ಯರಾಗಿದ್ದೆವು. ಇನ್ನೂ ಹೆಚ್ಚಿನ ಗೋಲು ಗಳಿಸಬಹುದಾಗಿತ್ತು. ನಾವು ಗೋವಾದಲ್ಲೂ ಕಠಿಣ ಹೋರಾಟ ನೀಡುತ್ತೇವೆ’ ಎಂದು ಅವರು ವಿಶ್ವಾಸದಿಂದ ಹೇಳಿದರು.</p>.<p>ಎದುರಾಳಿ ತಂಡದ ಬಗ್ಗೆಯೂ ಅವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ‘ಅವರು (ಎಫ್ಸಿ ಗೋವಾ) ತವರಿನಲ್ಲಿ ಎರಡನೇ ಲೆಗ್ ಆಡಲು ಎಲ್ಲ ರೀತಿ ಯೋಗ್ಯರಾಗಿದ್ದಾರೆ. ಅವರು ಲೀಗ್ನಲ್ಲಿ ನಮಗಿಂತ 10 ಪಾಯಿಂಟ್ ಹೆಚ್ಚು ಪಡೆದಿದ್ದರು’ ಎಂದರು.</p>.<p>ನಾಜೂಕಾದ ಫಿನಿಷಿಂಗ್ ಮೂಲಕ ಬಿಎಫ್ಸಿ ತಂಡ ದಾಳಿಯಲ್ಲಿ ಗಮನಸೆಳೆದರೆ, ಭಾರತ ತಂಡದ ಆಟಗಾರರಾದ ನಾಮ್ಗ್ಯಾಲ್ ಭುಟಿಯಾ, ಚಿಂಗ್ಲೆಸನಾ ಸಿಂಗ್, ರಾಹುಲ್ ಭೆಕೆ, ರೋಷನ್ ಸಿಂಗ್ ಅವರಿದ್ದ ರಕ್ಷಣಾ ಪಡೆಯ ಕಾರ್ಯನಿರ್ವಹಣೆ ಮೆಚ್ಚುಗೆಗೆ ಪಾತ್ರವಾಯಿತು.</p>.<p>‘ಅವರ ಆಟ ನಿಜಕ್ಕೂ ಅಮೋಘವಾಗಿತ್ತು. ಭುಟಿಯಾ ಪಂದ್ಯದ ಆಟಗಾರನಾದರೆ, ರೋಷನ್ ಮತ್ತು ಇನ್ನಿಬ್ಬರು ಸೆಂಟರ್–ಬ್ಯಾಕ್ಗಳು ಅಚ್ಚುಕಟ್ಟಾದ ಆಟವಾಡಿದರು. ಮುಂದೆಯೂ ಅವರಿಂದ ಇಂಥ ಆಟ ಬರುವ ವಿಶ್ವಾಸವಿದೆ’ ಎಂದರು.</p>.<p>ಬೆಂಗಳೂರು ಎಫ್ಸಿ, ಫತೋರ್ಡಾದ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುವ ಸೆಮಿಫೈನಲ್ ಎರಡನೇ ಲೆಗ್ ಆಡಲು ಗೋವಾಕ್ಕೆ ತೆರಳಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಎಂಥಾ ಪರಿಸ್ಥಿತಿಯಲ್ಲೂ ಕಠಿಣ ಹೋರಾಟದಲ್ಲಿ ತೊಡಗುವ ಉತ್ಕಟ ಬಯಕೆಯೇ ಈ ಋತುವಿನುದ್ದಕ್ಕೂ ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್ಸಿ) ತಂಡದ ಆಟದಲ್ಲಿ ಮೈದಳೆದಂತೆ ಕಾಣುತಿತ್ತು. ಎಫ್ಸಿ ಗೋವಾ ವಿರುದ್ಧ ಬುಧವಾರ ನಡೆದ ಐಎಸ್ಎಲ್ ಸೆಮಿಫೈನಲ್ ಮೊದಲ ಲೆಗ್ನಲ್ಲೂ ಈ ಮನೋಭಾವ ಎದ್ದುಕಂಡಿತು.</p>.<p>ಐಎಸ್ಎಲ್ ಪ್ಲೇ ಆಫ್ ಹಂತದಲ್ಲಿ ಸತತ ಎರಡು ಜಯ ಸಾಧಿಸಿದ ಮೂರನೇ ಕೋಚ್ ಎಂಬ ಹಿರಿಮೆ ಬಿಎಫ್ಸಿ ಹೆಡ್ ಕೋಚ್ ಜೆರಾರ್ಡ್ ಝಾರ್ಗೋಝಾ ಅವರದಾಯಿತು. ಸೈಮನ್ ಗ್ರೇಸನ್ ಮತ್ತು ಪೀಟರ್ ಕ್ರಾಟ್ಕಿ ಮೊದಲ ಇಬ್ಬರು.</p>.<p>‘ಪೂರ್ವಸಿದ್ಧತೆ ಮತ್ತು ಮನೋಭೂಮಿಕೆ ನಮ್ಮ ತಂಡವು, ಗೋವಾ ವಿರುದ್ಧ ಕಂಠೀರವ ಕ್ರೀಡಾಂಗಣದಲ್ಲಿ 2–0 ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು’ ಎನ್ನುತ್ತಾರೆ ಝಾರ್ಗೋಝಾ.</p>.<p>‘ಮುಂಬೈ ವಿರುದ್ಧ ಪ್ಲೇಆಫ್ ಪಂದ್ಯಕ್ಕೆ ಮೊದಲು 10 ದಿನ ನಮಗೆ ತರಬೇತಿಗೆ ದೊರಕಿತ್ತು. ಆಗಲೇ ತಂಡ ಪ್ಲೇ ಆಫ್ ಮೂಡ್ನಲ್ಲಿದ್ದುದು ವ್ಯಕ್ತವಾಗಿತ್ತು. ತಂಡದಲ್ಲಿ ಅಂಥ ವಿಶ್ವಾಸ ಕಾಣಬಹುದಾಗಿತ್ತು’ ಎಂದು ಬುಧವಾರ ತಂಡದ ಗೆಲುವಿನ ನಂತರ ಪತ್ರಿಕಾಗೋಷ್ಠಿಯಲ್ಲಿ ಝಾರ್ಗೋಝಾ ಹೇಳಿದರು.</p>.<p>ಗೋವಾ ವಿರುದ್ಧ ಸೆಮಿಫೈನಲ್ ಲೆಗ್ಗೆ ಮೊದಲಿನ ಪಂದ್ಯದಲ್ಲಿ ಬ್ಲೂಸ್ ತಂಡ, ಮುಂಬೈ ಸಿಟಿ ಎಫ್ಸಿ ತಂಡವನ್ನು 5–0 ಗೋಲುಗಳಿಂದ ಸದೆಬಡಿದಿತ್ತು.</p>.<p>‘ಮುಂಬೈ ವಿರುದ್ಧದ ಗೆಲುವು ನಮಗೆ ಅಗತ್ಯ ಮನೋಬಲವನ್ನು ಒದಗಿಸಿತು. ಏಕೆಂದರೆ ಗೋವಾ ತಂಡ ಲೀಗ್ನ ಅತ್ಯುತ್ತಮ ತಂಡಗಳಲ್ಲಿ ಒಂದಾಗಿತ್ತು. ನಮಗೆ ಆ ತಂಡ ಎದುರಿಸಲು ಬೇಕಾದ ಸ್ಥೈರ್ಯವನ್ನು ಆ ಗೆಲುವು ಒದಗಿಸಿತ್ತು. ನಾವು ಆ ಗೆಲುವಿಗೆ ಯೋಗ್ಯರಾಗಿದ್ದೆವು. ಇನ್ನೂ ಹೆಚ್ಚಿನ ಗೋಲು ಗಳಿಸಬಹುದಾಗಿತ್ತು. ನಾವು ಗೋವಾದಲ್ಲೂ ಕಠಿಣ ಹೋರಾಟ ನೀಡುತ್ತೇವೆ’ ಎಂದು ಅವರು ವಿಶ್ವಾಸದಿಂದ ಹೇಳಿದರು.</p>.<p>ಎದುರಾಳಿ ತಂಡದ ಬಗ್ಗೆಯೂ ಅವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ‘ಅವರು (ಎಫ್ಸಿ ಗೋವಾ) ತವರಿನಲ್ಲಿ ಎರಡನೇ ಲೆಗ್ ಆಡಲು ಎಲ್ಲ ರೀತಿ ಯೋಗ್ಯರಾಗಿದ್ದಾರೆ. ಅವರು ಲೀಗ್ನಲ್ಲಿ ನಮಗಿಂತ 10 ಪಾಯಿಂಟ್ ಹೆಚ್ಚು ಪಡೆದಿದ್ದರು’ ಎಂದರು.</p>.<p>ನಾಜೂಕಾದ ಫಿನಿಷಿಂಗ್ ಮೂಲಕ ಬಿಎಫ್ಸಿ ತಂಡ ದಾಳಿಯಲ್ಲಿ ಗಮನಸೆಳೆದರೆ, ಭಾರತ ತಂಡದ ಆಟಗಾರರಾದ ನಾಮ್ಗ್ಯಾಲ್ ಭುಟಿಯಾ, ಚಿಂಗ್ಲೆಸನಾ ಸಿಂಗ್, ರಾಹುಲ್ ಭೆಕೆ, ರೋಷನ್ ಸಿಂಗ್ ಅವರಿದ್ದ ರಕ್ಷಣಾ ಪಡೆಯ ಕಾರ್ಯನಿರ್ವಹಣೆ ಮೆಚ್ಚುಗೆಗೆ ಪಾತ್ರವಾಯಿತು.</p>.<p>‘ಅವರ ಆಟ ನಿಜಕ್ಕೂ ಅಮೋಘವಾಗಿತ್ತು. ಭುಟಿಯಾ ಪಂದ್ಯದ ಆಟಗಾರನಾದರೆ, ರೋಷನ್ ಮತ್ತು ಇನ್ನಿಬ್ಬರು ಸೆಂಟರ್–ಬ್ಯಾಕ್ಗಳು ಅಚ್ಚುಕಟ್ಟಾದ ಆಟವಾಡಿದರು. ಮುಂದೆಯೂ ಅವರಿಂದ ಇಂಥ ಆಟ ಬರುವ ವಿಶ್ವಾಸವಿದೆ’ ಎಂದರು.</p>.<p>ಬೆಂಗಳೂರು ಎಫ್ಸಿ, ಫತೋರ್ಡಾದ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುವ ಸೆಮಿಫೈನಲ್ ಎರಡನೇ ಲೆಗ್ ಆಡಲು ಗೋವಾಕ್ಕೆ ತೆರಳಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>