<p><strong>ಮಂಗಳೂರು</strong>: ಬೆಂಗಳೂರಿನ ಡಬ್ಲ್ಯುಸಿಟಿಟಿಸಿಯ ಆಕಾಶ್ ಕೆ.ಜೆ ಮತ್ತು ಬಿಎನ್ಎಂನ ದೇಶ್ನಾ ವಂಶಿಕಾ, ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳೆಯರ ವಿಭಾಗದ ಪ್ರಶಸ್ತಿ ಮುಡಿಗೇರಿಸಿಕೊಂಡರು.</p><p>ಕಂಕನಾಡಿಯ ಫಾದರ್ ಮುಲ್ಲರ್ ಒಳಾಂಗಣ ಕ್ರೀಡಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಟೇಬಲ್ ಟೆನಿಸ್ ಸಂಸ್ಥೆ ಆಯೋಜಿಸಿರುವ ಟೂರ್ನಿಯ ಎರಡನೇ ದಿನವಾದ ಶುಕ್ರವಾರ ಪುರುಷರ ವಿಭಾಗದ ಫೈನಲ್ನಲ್ಲಿ ಮೂರನೇ ಶ್ರೇಯಾಂಕದ ಆಕಾಶ್ 11-8, 11-4, 11-4, 11-7ರಲ್ಲಿ ನಾಲ್ಕನೇ ಶ್ರೇಯಾಂಕದ ಯಶ್ವಂತ್ ಎದುರು ಗೆದ್ದರು.</p><p>ಮಹಿಳೆಯರ ವಿಭಾಗದ ಪ್ರಶಸ್ತಿ ಸುತ್ತಿನಲ್ಲಿ ಅಗ್ರ ಶ್ರೇಯಾಂಕದ ದೇಶ್ನಾ 4-11, 11-8, 11-5, 11-6, 13-11ರಲ್ಲಿ ಡಬ್ಲ್ಯುಸಿಟಿಟಿಸಿಯ ಎರಡನೇ ಶ್ರೇಯಾಂಕಿತೆ ಅನರ್ಘ್ಯ ಮಂಜುನಾಥ್ ಎದುರು ಗೆದ್ದರು. </p><p>ಪುರುಷರ ವಿಭಾಗದ ಅಗ್ರ ಶ್ರೇಯಾಂಕದ ಅನಿರ್ಭನ್ ರಾಯ್ ಚೌಧರಿ ಸೆಮಿಫೈನಲ್ನಲ್ಲಿ ಸೋತಿದ್ದರು. ಗುರುವಾರ 19 ವರ್ಷದೊಳಗಿನವರ ಪ್ರಶಸ್ತಿ ಗೆದ್ದಿದ್ದ ರೋಹಿತ್ ಶಂಕರ್ ಅವರನ್ನು ಸೆಮಿಯಲ್ಲಿ ಆಕಾಶ್ ಮಣಿಸಿದ್ದರು.</p><p><strong>ಖುಷಿಗೆ ಆಘಾತ:</strong> ಮೊದಲ ರಾಜ್ಯ ರ್ಯಾಂಕಿಂಗ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದ ಡಬ್ಲ್ಯುಸಿಟಿಟಿಸಿಯ ಖುಷಿ ವಿ, ಇಲ್ಲಿ ಆಘಾತ ಅನುಭವಿಸಿದರು. ಗುರುವಾರ 19 ವರ್ಷದೊಳಗಿನವರ ವಿಭಾಗದ ಪ್ರಶಸ್ತಿ ಗೆದ್ದಿದ್ದ ಸಹನಾ ಮೂರ್ತಿ ವಿರುದ್ಧ ಕ್ವಾರ್ಟರ್ ಫೈನಲ್ನಲ್ಲಿ ಖುಷಿ ಸೋತರು.</p>.<p><strong>ಫಲಿತಾಂಶಗಳು</strong></p><p><strong>ಪುರುಷರ ಫೈನಲ್:</strong> ಆಕಾಶ್ಗೆ ಯಶ್ವಂತ್ ವಿರುದ್ಧ 11-8,11-4,11-4,11-7ರಲ್ಲಿ ಗೆಲುವು. </p><p><strong>ಸೆಮಿಫೈನಲ್</strong>: ಆಕಾಶ್ಗೆ ರೋಹಿತ್ ಶಂಕರ್ ವಿರುದ್ಧ 11-8,3-11,6-11,11-4,12-10,11-7ರಲ್ಲಿ, ಯಶ್ವಂತ್ಗೆ ಅನಿರ್ಬನ್ ವಿರುದ್ಧ 11-9,5-11,11-8,11-4,6-11,11-3ರಲ್ಲಿ ಜಯ. </p><p><strong>ಕ್ವಾರ್ಟರ್ ಫೈನಲ್</strong>: ಆಕಾಶ್ಗೆ ಶ್ರೇಯಲ್ ವಿರುದ್ಧ 7-11,11-7,11-3,9-11,11-7ರಲ್ಲಿ, ಯಶ್ವಂತ್ಗೆ ವಿಭಾಸ್ ವಿರುದ್ಧ 11-9,4-11,11-8,11-4ರಲ್ಲಿ, ಅನಿರ್ಭನ್ಗೆ ತೇಶುಬ್ ವಿರುದ್ಧ 10-12,11-2,11-9,11-8ರಲ್ಲಿ, ರೋಹಿತ್ಗೆ ಕಲೈವಣ್ಣನ್ ವಿರುದ್ಧ 11-9,11-4,11-8ರಲ್ಲಿ ಜಯ. </p><p><strong>ಮಹಿಳೆಯರ ಫೈನಲ್:</strong> ದೇಶ್ನಾಗೆ ಅನರ್ಘ್ಯ ವಿರುದ್ಧ 4-11,11-8,11-5,11-6,13-11ರಲ್ಲಿ ಜಯ.</p><p><strong>ಸೆಮಿಫೈನಲ್</strong>: ದೇಶ್ನಾಗೆ ತೃಪ್ತಿ ವಿರುದ್ಧ 10-12,11-2,11-6,12-10,11-1ರಲ್ಲಿ, ಅನರ್ಘ್ಯಗೆ ಸಹನಾ ಎದುರು 7-11,11-8,7-11,13-11,11-9,11-8ರಲ್ಲಿ ಜಯ.</p><p><strong>ಕ್ವಾರ್ಟರ್ ಫೈನಲ್</strong>: ದೇಶ್ನಾಗೆ ಹಿಮಾಂಶಿ ವಿರುದ್ಧ 9-11,12-10,11-5,12-10ರಲ್ಲಿ, ಅನರ್ಘ್ಯಗೆ ತನಿಷ್ಕಾ ವಿರುದ್ಧ 15-17,12-10,14-12,11-5ರಲ್ಲಿ, ತೃಪ್ತಿಗೆ ಪ್ರೇಕ್ಷಾ ಎದುರು 11-2,11-9,11-4ರಲ್ಲಿ, ಸಹನಾಗೆ ಖುಷಿ ವಿರುದ್ಧ 6-11,11-4,11-5,11-5ರಲ್ಲಿ ಜಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು</strong>: ಬೆಂಗಳೂರಿನ ಡಬ್ಲ್ಯುಸಿಟಿಟಿಸಿಯ ಆಕಾಶ್ ಕೆ.ಜೆ ಮತ್ತು ಬಿಎನ್ಎಂನ ದೇಶ್ನಾ ವಂಶಿಕಾ, ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳೆಯರ ವಿಭಾಗದ ಪ್ರಶಸ್ತಿ ಮುಡಿಗೇರಿಸಿಕೊಂಡರು.</p><p>ಕಂಕನಾಡಿಯ ಫಾದರ್ ಮುಲ್ಲರ್ ಒಳಾಂಗಣ ಕ್ರೀಡಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಟೇಬಲ್ ಟೆನಿಸ್ ಸಂಸ್ಥೆ ಆಯೋಜಿಸಿರುವ ಟೂರ್ನಿಯ ಎರಡನೇ ದಿನವಾದ ಶುಕ್ರವಾರ ಪುರುಷರ ವಿಭಾಗದ ಫೈನಲ್ನಲ್ಲಿ ಮೂರನೇ ಶ್ರೇಯಾಂಕದ ಆಕಾಶ್ 11-8, 11-4, 11-4, 11-7ರಲ್ಲಿ ನಾಲ್ಕನೇ ಶ್ರೇಯಾಂಕದ ಯಶ್ವಂತ್ ಎದುರು ಗೆದ್ದರು.</p><p>ಮಹಿಳೆಯರ ವಿಭಾಗದ ಪ್ರಶಸ್ತಿ ಸುತ್ತಿನಲ್ಲಿ ಅಗ್ರ ಶ್ರೇಯಾಂಕದ ದೇಶ್ನಾ 4-11, 11-8, 11-5, 11-6, 13-11ರಲ್ಲಿ ಡಬ್ಲ್ಯುಸಿಟಿಟಿಸಿಯ ಎರಡನೇ ಶ್ರೇಯಾಂಕಿತೆ ಅನರ್ಘ್ಯ ಮಂಜುನಾಥ್ ಎದುರು ಗೆದ್ದರು. </p><p>ಪುರುಷರ ವಿಭಾಗದ ಅಗ್ರ ಶ್ರೇಯಾಂಕದ ಅನಿರ್ಭನ್ ರಾಯ್ ಚೌಧರಿ ಸೆಮಿಫೈನಲ್ನಲ್ಲಿ ಸೋತಿದ್ದರು. ಗುರುವಾರ 19 ವರ್ಷದೊಳಗಿನವರ ಪ್ರಶಸ್ತಿ ಗೆದ್ದಿದ್ದ ರೋಹಿತ್ ಶಂಕರ್ ಅವರನ್ನು ಸೆಮಿಯಲ್ಲಿ ಆಕಾಶ್ ಮಣಿಸಿದ್ದರು.</p><p><strong>ಖುಷಿಗೆ ಆಘಾತ:</strong> ಮೊದಲ ರಾಜ್ಯ ರ್ಯಾಂಕಿಂಗ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದ ಡಬ್ಲ್ಯುಸಿಟಿಟಿಸಿಯ ಖುಷಿ ವಿ, ಇಲ್ಲಿ ಆಘಾತ ಅನುಭವಿಸಿದರು. ಗುರುವಾರ 19 ವರ್ಷದೊಳಗಿನವರ ವಿಭಾಗದ ಪ್ರಶಸ್ತಿ ಗೆದ್ದಿದ್ದ ಸಹನಾ ಮೂರ್ತಿ ವಿರುದ್ಧ ಕ್ವಾರ್ಟರ್ ಫೈನಲ್ನಲ್ಲಿ ಖುಷಿ ಸೋತರು.</p>.<p><strong>ಫಲಿತಾಂಶಗಳು</strong></p><p><strong>ಪುರುಷರ ಫೈನಲ್:</strong> ಆಕಾಶ್ಗೆ ಯಶ್ವಂತ್ ವಿರುದ್ಧ 11-8,11-4,11-4,11-7ರಲ್ಲಿ ಗೆಲುವು. </p><p><strong>ಸೆಮಿಫೈನಲ್</strong>: ಆಕಾಶ್ಗೆ ರೋಹಿತ್ ಶಂಕರ್ ವಿರುದ್ಧ 11-8,3-11,6-11,11-4,12-10,11-7ರಲ್ಲಿ, ಯಶ್ವಂತ್ಗೆ ಅನಿರ್ಬನ್ ವಿರುದ್ಧ 11-9,5-11,11-8,11-4,6-11,11-3ರಲ್ಲಿ ಜಯ. </p><p><strong>ಕ್ವಾರ್ಟರ್ ಫೈನಲ್</strong>: ಆಕಾಶ್ಗೆ ಶ್ರೇಯಲ್ ವಿರುದ್ಧ 7-11,11-7,11-3,9-11,11-7ರಲ್ಲಿ, ಯಶ್ವಂತ್ಗೆ ವಿಭಾಸ್ ವಿರುದ್ಧ 11-9,4-11,11-8,11-4ರಲ್ಲಿ, ಅನಿರ್ಭನ್ಗೆ ತೇಶುಬ್ ವಿರುದ್ಧ 10-12,11-2,11-9,11-8ರಲ್ಲಿ, ರೋಹಿತ್ಗೆ ಕಲೈವಣ್ಣನ್ ವಿರುದ್ಧ 11-9,11-4,11-8ರಲ್ಲಿ ಜಯ. </p><p><strong>ಮಹಿಳೆಯರ ಫೈನಲ್:</strong> ದೇಶ್ನಾಗೆ ಅನರ್ಘ್ಯ ವಿರುದ್ಧ 4-11,11-8,11-5,11-6,13-11ರಲ್ಲಿ ಜಯ.</p><p><strong>ಸೆಮಿಫೈನಲ್</strong>: ದೇಶ್ನಾಗೆ ತೃಪ್ತಿ ವಿರುದ್ಧ 10-12,11-2,11-6,12-10,11-1ರಲ್ಲಿ, ಅನರ್ಘ್ಯಗೆ ಸಹನಾ ಎದುರು 7-11,11-8,7-11,13-11,11-9,11-8ರಲ್ಲಿ ಜಯ.</p><p><strong>ಕ್ವಾರ್ಟರ್ ಫೈನಲ್</strong>: ದೇಶ್ನಾಗೆ ಹಿಮಾಂಶಿ ವಿರುದ್ಧ 9-11,12-10,11-5,12-10ರಲ್ಲಿ, ಅನರ್ಘ್ಯಗೆ ತನಿಷ್ಕಾ ವಿರುದ್ಧ 15-17,12-10,14-12,11-5ರಲ್ಲಿ, ತೃಪ್ತಿಗೆ ಪ್ರೇಕ್ಷಾ ಎದುರು 11-2,11-9,11-4ರಲ್ಲಿ, ಸಹನಾಗೆ ಖುಷಿ ವಿರುದ್ಧ 6-11,11-4,11-5,11-5ರಲ್ಲಿ ಜಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>