ಕೊಂಚ ನಿಧಾನವಾಗಿ ಹೊಂದಿಕೊಂಡ ಭಾರತ ತಂಡಕ್ಕೆ ರಾಜಿಂದರ್ ಸಿಂಗ್ ಪೆನಾಲ್ಟಿ ಕಾರ್ನರ್ ಮೂಲಕ ಮುನ್ನಡೆ ಒದಗಿಸಿಕೊಟ್ಟರು. ವಿರಾಮದ ವೇಳೆಗೆ ಈ ಮುನ್ನಡೆಯನ್ನು ರಕ್ಷಿಸಿಕೊಳ್ಳುವಲ್ಲಿ ಭಾರತ ತಂಡ ಯಶಸ್ವಿ ಆಯಿತು. ಉತ್ತರಾರ್ಧದ ಆರಂಭದಲ್ಲಿ ಅಮಿರ್ ಅಲಿ ಕ್ಷಿಪ್ರಗತಿಯಲ್ಲಿ ಗೋಲು ಗಳಿಸಿ ಭಾರತದ ಮುನ್ನಡೆ ಹೆಚ್ಚಿಸಿದರು. ನಂತರ ಇಂಗ್ಲೆಂಡ್ ಒತ್ತಡಕ್ಕೆ ಸಿಲುಕಿತು. ಅಮನ್ದೀಪ್, ಪೆನಾಲ್ಟಿ ಕಾರ್ನರ್ ಪರಿವರ್ತಿಸಿ ಭಾರತದ ಮುನ್ನಡೆಯನ್ನು ಹೆಚ್ಚಿಸಿದರು. 15 ನಿಮಿಷಗಳು ಉಳಿದಿರುವಾಗ ಇಂಗ್ಲೆಂಡ್ ಸಾಕಷ್ಟು ಒತ್ತಡ ಹೇರಿತಾದರೂ, ಭಾರತದ ರಕ್ಷಣಾಕೋಟೆ ಭೇದಿಸಲು ಆಗಲಿಲ್ಲ. ಪಂದ್ಯ ಇನ್ನೇನು ಮುಗಿಯಲಿದೆ ಎನ್ನುವಾಗ ಅರೈಜೀತ್ ಮುನ್ನಡೆಯನ್ನು (4–0) ಮತ್ತಷ್ಟು ಉಬ್ಬಿಸಿದರು.