<p><strong>ನವದೆಹಲಿ:</strong> ವಿಶ್ವ ಚೆಸ್ ಚಾಂಪಿಯನ್ಷಿಪ್ ಗೆದ್ದ ಅತಿ ಕಿರಿಯ ಭಾರತೀಯ ಎಂದೆನಿಸಿರುವ ಡಿ.ಗುಕೇಶ್ ಅವರನ್ನು ಐದು ಬಾರಿಯ ವಿಶ್ವ ಚಾಂಪಿಯನ್, ಚೆಸ್ ದಿಗ್ಗಜ ವಿಶ್ವನಾಥನ್ ಆನಂದ್ ಅಭಿನಂದಿಸಿದ್ದಾರೆ. </p><p>ಇದೇ ವೇಳೆ ಕಿವಿಮಾತು ಕೂಡ ಹೇಳಿದ್ದಾರೆ. ಯಶಸ್ಸಿನೊಂದಿಗೆ ಟೀಕೆಗಳು ಸಾಮಾನ್ಯ. ಅದನ್ನು ಕಡೆಗಣಿಸುವಂತೆ ಸಲಹೆ ಮಾಡಿದ್ದಾರೆ. </p><p>ಸಿಂಗಪುರದಲ್ಲಿ ನಡೆದ ಫೈನಲ್ನ ನಿರ್ಣಾಯಕ 14ನೇ ಪಂದ್ಯದಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಮಣಿಸಿದ್ದ ಗುಕೇಶ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು.</p><p>ಆ ಮೂಲಕ ಐದು ಬಾರಿಯ ವಿಶ್ವ ಚಾಂಪಿಯನ್ ಆನಂದ್ ಬಳಿಕ ವಿಶ್ವ ಚೆಸ್ ಚಾಂಪಿಯನ್ಷಿಪ್ ಗೆದ್ದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಗುಕೇಶ್ ಪಾತ್ರರಾಗಿದ್ದರು. ಗುಕೇಶ್ ಅವರಿಗೆ ಮಾರ್ಗದರ್ಶನ ನೀಡುವಲ್ಲಿಯೂ ಆನಂದ್ ಮಹತ್ವದ ಪಾತ್ರ ವಹಿಸಿದ್ದರು. </p><p>ಆದರೆ ಫೈನಲ್ ಆಟದ ಗುಣಮಟ್ಟದ ಬಗ್ಗೆ ಮಾಜಿ ವಿಶ್ವ ಚಾಂಪಿಯನ್ ರಷ್ಯಾದ ವ್ಲಾಡಿಮಿರ್ ಕ್ರಾಮ್ನಿಕ್ ಅಸಮಾಧಾನ ತೋಡಿಕೊಂಡಿದ್ದರು. 'ಬಾಲಿಶ ಆಟ, ನಮಗೆಲ್ಲರಿಗೂ ತಿಳಿದಿರುವಂತೆಯೇ ಇದು ಚದುರಂಗ ಆಟದ ಅಂತ್ಯವಾಗಿದೆ' ಎಂದು ಟೀಕಿಸಿದ್ದರು. </p><p>ಐದು ಬಾರಿಯ ವಿಶ್ವ ಚಾಂಪಿಯನ್ ನಾರ್ವೆಯ ಮ್ಯಾಗ್ನಸ್ ಕಾರ್ಲಸನ್ ಸಹ ಟೀಕೆ ಮಾಡಿದ್ದು, 'ಇದು ಇಬ್ಬರು ವಿಶ್ವ ಚಾಂಪಿಯನ್ಷಿಪ್ ಸ್ಪರ್ಧಿಗಳ ನಡುವಣ ಆಟದಂತೆ ಭಾಸವಾಗುತ್ತಿಲ್ಲ. ಪಂದ್ಯಾವಳಿಯ ಎರಡು ಅಥವಾ ಮೂರನೇ ಸುತ್ತಿನ ಆಟದಂತೆ ತೋರುತ್ತಿದೆ' ಎಂದು ಹೇಳಿದ್ದರು. </p><p>ಆದರೆ ಗುಕೇಶ್ ಮೆಂಟರ್ ಆಗಿರುವ ಆನಂದ್, ಗುಕೇಶ್ ಯಶಸ್ಸಿನ ಬಗ್ಗೆ ತುಂಬಾ ಹೆಮ್ಮೆ ವ್ಯಕ್ತಪಡಿಸಿದ್ದಾರೆ. 'ಇತಿಹಾಸ ರಚನೆಯಾಯಿತು. ನಾನು ತುಂಬಾ ಸಂತಸಗೊಂಡಿದ್ದೇನೆ' ಎಂದು ಹೇಳಿದ್ದಾರೆ. </p><p>'ಪ್ರತಿ ಪಂದ್ಯದ ಬಳಿಕವೂ ಟೀಕೆಗಳು ಬರುತ್ತವೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಟೀಕೆಗಳನ್ನು ಕಡೆಗಣಿಸಿ, ಅಷ್ಟೇ. ನಿಮ್ಮಗೆಲ್ಲರಿಗೂ ಗುಕೇಶ್ ಸಾಧನೆಯ ಬಗ್ಗೆ ತಿಳಿದಿದೆ. ಮತ್ತಷ್ಟು ಪ್ರಬಲ ಆಟಗಾರನಾಗಿ ಹೊರಹೊಮ್ಮಿದ್ದಾರೆ' ಎಂದು ಹೊಗಳಿದ್ದಾರೆ. </p>.ಗುಕೇಶ್ ವಿಶ್ವ ಚೆಸ್ ಚಾಂಪಿಯನ್; ಉಕ್ಕಿ ಬಂದ ಆನಂದದ ಕಣ್ಣೀರು.11ರ ಹರೆಯದಲ್ಲೇ ತಾನಾಡಿದ ಮಾತನ್ನು ಸಾಧಿಸಿ ತೋರಿಸಿದ ಗುಕೇಶ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ವಿಶ್ವ ಚೆಸ್ ಚಾಂಪಿಯನ್ಷಿಪ್ ಗೆದ್ದ ಅತಿ ಕಿರಿಯ ಭಾರತೀಯ ಎಂದೆನಿಸಿರುವ ಡಿ.ಗುಕೇಶ್ ಅವರನ್ನು ಐದು ಬಾರಿಯ ವಿಶ್ವ ಚಾಂಪಿಯನ್, ಚೆಸ್ ದಿಗ್ಗಜ ವಿಶ್ವನಾಥನ್ ಆನಂದ್ ಅಭಿನಂದಿಸಿದ್ದಾರೆ. </p><p>ಇದೇ ವೇಳೆ ಕಿವಿಮಾತು ಕೂಡ ಹೇಳಿದ್ದಾರೆ. ಯಶಸ್ಸಿನೊಂದಿಗೆ ಟೀಕೆಗಳು ಸಾಮಾನ್ಯ. ಅದನ್ನು ಕಡೆಗಣಿಸುವಂತೆ ಸಲಹೆ ಮಾಡಿದ್ದಾರೆ. </p><p>ಸಿಂಗಪುರದಲ್ಲಿ ನಡೆದ ಫೈನಲ್ನ ನಿರ್ಣಾಯಕ 14ನೇ ಪಂದ್ಯದಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಮಣಿಸಿದ್ದ ಗುಕೇಶ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು.</p><p>ಆ ಮೂಲಕ ಐದು ಬಾರಿಯ ವಿಶ್ವ ಚಾಂಪಿಯನ್ ಆನಂದ್ ಬಳಿಕ ವಿಶ್ವ ಚೆಸ್ ಚಾಂಪಿಯನ್ಷಿಪ್ ಗೆದ್ದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಗುಕೇಶ್ ಪಾತ್ರರಾಗಿದ್ದರು. ಗುಕೇಶ್ ಅವರಿಗೆ ಮಾರ್ಗದರ್ಶನ ನೀಡುವಲ್ಲಿಯೂ ಆನಂದ್ ಮಹತ್ವದ ಪಾತ್ರ ವಹಿಸಿದ್ದರು. </p><p>ಆದರೆ ಫೈನಲ್ ಆಟದ ಗುಣಮಟ್ಟದ ಬಗ್ಗೆ ಮಾಜಿ ವಿಶ್ವ ಚಾಂಪಿಯನ್ ರಷ್ಯಾದ ವ್ಲಾಡಿಮಿರ್ ಕ್ರಾಮ್ನಿಕ್ ಅಸಮಾಧಾನ ತೋಡಿಕೊಂಡಿದ್ದರು. 'ಬಾಲಿಶ ಆಟ, ನಮಗೆಲ್ಲರಿಗೂ ತಿಳಿದಿರುವಂತೆಯೇ ಇದು ಚದುರಂಗ ಆಟದ ಅಂತ್ಯವಾಗಿದೆ' ಎಂದು ಟೀಕಿಸಿದ್ದರು. </p><p>ಐದು ಬಾರಿಯ ವಿಶ್ವ ಚಾಂಪಿಯನ್ ನಾರ್ವೆಯ ಮ್ಯಾಗ್ನಸ್ ಕಾರ್ಲಸನ್ ಸಹ ಟೀಕೆ ಮಾಡಿದ್ದು, 'ಇದು ಇಬ್ಬರು ವಿಶ್ವ ಚಾಂಪಿಯನ್ಷಿಪ್ ಸ್ಪರ್ಧಿಗಳ ನಡುವಣ ಆಟದಂತೆ ಭಾಸವಾಗುತ್ತಿಲ್ಲ. ಪಂದ್ಯಾವಳಿಯ ಎರಡು ಅಥವಾ ಮೂರನೇ ಸುತ್ತಿನ ಆಟದಂತೆ ತೋರುತ್ತಿದೆ' ಎಂದು ಹೇಳಿದ್ದರು. </p><p>ಆದರೆ ಗುಕೇಶ್ ಮೆಂಟರ್ ಆಗಿರುವ ಆನಂದ್, ಗುಕೇಶ್ ಯಶಸ್ಸಿನ ಬಗ್ಗೆ ತುಂಬಾ ಹೆಮ್ಮೆ ವ್ಯಕ್ತಪಡಿಸಿದ್ದಾರೆ. 'ಇತಿಹಾಸ ರಚನೆಯಾಯಿತು. ನಾನು ತುಂಬಾ ಸಂತಸಗೊಂಡಿದ್ದೇನೆ' ಎಂದು ಹೇಳಿದ್ದಾರೆ. </p><p>'ಪ್ರತಿ ಪಂದ್ಯದ ಬಳಿಕವೂ ಟೀಕೆಗಳು ಬರುತ್ತವೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಟೀಕೆಗಳನ್ನು ಕಡೆಗಣಿಸಿ, ಅಷ್ಟೇ. ನಿಮ್ಮಗೆಲ್ಲರಿಗೂ ಗುಕೇಶ್ ಸಾಧನೆಯ ಬಗ್ಗೆ ತಿಳಿದಿದೆ. ಮತ್ತಷ್ಟು ಪ್ರಬಲ ಆಟಗಾರನಾಗಿ ಹೊರಹೊಮ್ಮಿದ್ದಾರೆ' ಎಂದು ಹೊಗಳಿದ್ದಾರೆ. </p>.ಗುಕೇಶ್ ವಿಶ್ವ ಚೆಸ್ ಚಾಂಪಿಯನ್; ಉಕ್ಕಿ ಬಂದ ಆನಂದದ ಕಣ್ಣೀರು.11ರ ಹರೆಯದಲ್ಲೇ ತಾನಾಡಿದ ಮಾತನ್ನು ಸಾಧಿಸಿ ತೋರಿಸಿದ ಗುಕೇಶ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>