ವೇಗದ ಪಾಸಿಂಗ್ ಮತ್ತು ಕೌಶಲದ ಆಟದಿಂದ ಭಾರತ, ಜರ್ಮನಿ ತಂಡದ ರಕ್ಷಣಾ ವಿಭಾಗವನ್ನು ಗಲಿಬಿಲಿಗೊಳಿಸಿತು. ಜರ್ಮನಿಗೆ ಡಜನ್ಗೂ ಹೆಚ್ಚು ಪೆನಾಲ್ಟಿ ಕಾರ್ನರ್ ಅವಕಾಶ ದೊರೆತರೂ ವ್ಯರ್ಥವಾದವು. ಹಲವು ಬಾರಿ ಭಾರತ ಆಟಗಾರರು ರಕ್ಷಣಾ ಗೋಡೆ ಭೇದಿಸಿದರು. ಅನುಭವಿ ಗೋಲ್ಕೀಪರ್ ಪಿ.ಆರ್.ಶ್ರೀಜೇಶ್ ತಮ್ಮ ಪಾತ್ರವನ್ನು ಪರಿಪೂರ್ಣವಾಗಿ ನಿರ್ವಹಿಸಿದರು.