<p><strong>ಬೆಂಗಳೂರು:</strong> ದಕ್ಷಿಣ ಕನ್ನಡ ಮತ್ತು ಗದಗ ತಂಡಗಳು ನಗರದಲ್ಲಿ ನಡೆಯುತ್ತಿರುವ ಕರ್ನಾಟಕ ಮಿನಿ ಗೇಮ್ಸ್ನಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ವಾಲಿಬಾಲ್ ಸ್ಪರ್ಧೆಯ ಪ್ರಶಸ್ತಿಯನ್ನು ಗೆದ್ದುಕೊಂಡವು. </p>.<p>ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಸಹಭಾಗಿತ್ವದ ಕ್ರೀಡಾಕೂಟದ ಆರನೇ ದಿನವಾದ ಶುಕ್ರವಾರ ನಡೆದ ವಾಲಿಬಾಲ್ ಫೈನಲ್ನಲ್ಲಿ ದಕ್ಷಿಣ ಕನ್ನಡದ ಬಾಲಕರು 3–0 (25–23, 25–22, 25–17) ಯಿಂದ ಬೆಂಗಳೂರು ತಂಡವನ್ನು ಮಣಿಸಿದರು. ಗದಗ ಬಾಲಕಿಯರು ಪ್ರಶಸ್ತಿ ಸುತ್ತಿನಲ್ಲಿ 3–0 (25-11, 25-12, 25-11) ಯಿಂದ ಬೆಂಗಳೂರು ತಂಡವನ್ನು ಸೋಲಿಸಿದರು. </p>.<p>ಉತ್ತರ ಕನ್ನಡ ಜಿಲ್ಲಾ ಬಾಲಕರ ತಂಡವು ಕಬಡ್ಡಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಫೈನಲ್ನಲ್ಲಿ 55–26ರಿಂದ ಬೆಂಗಳೂರು ನಗರ ತಂಡವನ್ನು ಮಣಿಸಿತು. ಬಾಲಕಿಯರ ವಿಭಾಗದಲ್ಲಿ ಚಿಕ್ಕಮಗಳೂರು ತಂಡವು ಚಾಂಪಿಯನ್ ಆಯಿತು. ಪ್ರಶಸ್ತಿ ಸುತ್ತಿನಲ್ಲಿ 33–25ರಿಂದ ದಕ್ಷಿಣ ಕನ್ನಡ ತಂಡವನ್ನು ಪರಾಭವಗೊಳಿಸಿತು. </p>.<p>ಬಾಲಕರ ಫುಟ್ಬಾಲ್ ಫೈನಲ್ನಲ್ಲಿ ಬೆಳಗಾವಿ ತಂಡವು 3–2ರಿಂದ ಪೆನಾಲ್ಟಿ ಶೂಟೌಟ್ನಲ್ಲಿ ದಕ್ಷಿಣ ಕನ್ನಡ ತಂಡವನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತು. ನಿಗದಿತ ಅವಧಿಯ ಪಂದ್ಯವು 1–1ರಿಂದ ಡ್ರಾಗೊಂಡಿತ್ತು. </p>.<p>ಉನ್ನತಿ, ತನಯ್ಗೆ ಪ್ರಶಸ್ತಿ: ಮಂಡ್ಯದ ಉನ್ನತಿ ವಿ ಮುರಳೀಧರ್ ಮತ್ತು ಬೆಂಗಳೂರಿನ ತನಯ್ ಬಾಬು ಪೈ ಅವರು ಕ್ರಮವಾಗಿ ಬಾಲಕಿಯರ ಮತ್ತು ಬಾಲಕರ ಟೆನಿಸ್ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು. ಫೈನಲ್ನಲ್ಲಿ ಉನ್ನತಿ 6-0, 6-1ರಿಂದ ಬೆಂಗಳೂರಿನ ಕಾಶ್ವಿ ವಿ. ಕೋಣಂಕಿ ವಿರುದ್ಧ; ತನಯ್ 6–2, 6–2ರಿಂದ ಬೆಂಗಳೂರಿನ ಮಾಧವ್ ದಾಧಿಚ್ ವಿರುದ್ಧ ಜಯ ಸಾಧಿಸಿದರು. </p>.<p>ಮೈಸೂರು ಜಿಲ್ಲೆಯ ರುತ್ವಿ ಎಂ. ಮಹೇಶ್ ಮತ್ತು ಸಾನ್ವಿ ಪ್ರಕಾಶ್ರಾಜ್ ಪುರೋಹಿತ್ ಅವರು ಬಾಲಕಿಯರ ಡಬಲ್ಸ್ ಪ್ರಶಸ್ತಿಯನ್ನು ಹಾಗೂ ಬೆಂಗಳೂರಿನ ಮಾಧವ್ ದಾಧಿಚ್ ಮತ್ತು ತನಯ್ ಬಾಬು ಪೈ ಬಾಲಕರ ಡಬಲ್ಸ್ ಪ್ರಶಸ್ತಿ ಗೆದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ದಕ್ಷಿಣ ಕನ್ನಡ ಮತ್ತು ಗದಗ ತಂಡಗಳು ನಗರದಲ್ಲಿ ನಡೆಯುತ್ತಿರುವ ಕರ್ನಾಟಕ ಮಿನಿ ಗೇಮ್ಸ್ನಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ವಾಲಿಬಾಲ್ ಸ್ಪರ್ಧೆಯ ಪ್ರಶಸ್ತಿಯನ್ನು ಗೆದ್ದುಕೊಂಡವು. </p>.<p>ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಸಹಭಾಗಿತ್ವದ ಕ್ರೀಡಾಕೂಟದ ಆರನೇ ದಿನವಾದ ಶುಕ್ರವಾರ ನಡೆದ ವಾಲಿಬಾಲ್ ಫೈನಲ್ನಲ್ಲಿ ದಕ್ಷಿಣ ಕನ್ನಡದ ಬಾಲಕರು 3–0 (25–23, 25–22, 25–17) ಯಿಂದ ಬೆಂಗಳೂರು ತಂಡವನ್ನು ಮಣಿಸಿದರು. ಗದಗ ಬಾಲಕಿಯರು ಪ್ರಶಸ್ತಿ ಸುತ್ತಿನಲ್ಲಿ 3–0 (25-11, 25-12, 25-11) ಯಿಂದ ಬೆಂಗಳೂರು ತಂಡವನ್ನು ಸೋಲಿಸಿದರು. </p>.<p>ಉತ್ತರ ಕನ್ನಡ ಜಿಲ್ಲಾ ಬಾಲಕರ ತಂಡವು ಕಬಡ್ಡಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಫೈನಲ್ನಲ್ಲಿ 55–26ರಿಂದ ಬೆಂಗಳೂರು ನಗರ ತಂಡವನ್ನು ಮಣಿಸಿತು. ಬಾಲಕಿಯರ ವಿಭಾಗದಲ್ಲಿ ಚಿಕ್ಕಮಗಳೂರು ತಂಡವು ಚಾಂಪಿಯನ್ ಆಯಿತು. ಪ್ರಶಸ್ತಿ ಸುತ್ತಿನಲ್ಲಿ 33–25ರಿಂದ ದಕ್ಷಿಣ ಕನ್ನಡ ತಂಡವನ್ನು ಪರಾಭವಗೊಳಿಸಿತು. </p>.<p>ಬಾಲಕರ ಫುಟ್ಬಾಲ್ ಫೈನಲ್ನಲ್ಲಿ ಬೆಳಗಾವಿ ತಂಡವು 3–2ರಿಂದ ಪೆನಾಲ್ಟಿ ಶೂಟೌಟ್ನಲ್ಲಿ ದಕ್ಷಿಣ ಕನ್ನಡ ತಂಡವನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತು. ನಿಗದಿತ ಅವಧಿಯ ಪಂದ್ಯವು 1–1ರಿಂದ ಡ್ರಾಗೊಂಡಿತ್ತು. </p>.<p>ಉನ್ನತಿ, ತನಯ್ಗೆ ಪ್ರಶಸ್ತಿ: ಮಂಡ್ಯದ ಉನ್ನತಿ ವಿ ಮುರಳೀಧರ್ ಮತ್ತು ಬೆಂಗಳೂರಿನ ತನಯ್ ಬಾಬು ಪೈ ಅವರು ಕ್ರಮವಾಗಿ ಬಾಲಕಿಯರ ಮತ್ತು ಬಾಲಕರ ಟೆನಿಸ್ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು. ಫೈನಲ್ನಲ್ಲಿ ಉನ್ನತಿ 6-0, 6-1ರಿಂದ ಬೆಂಗಳೂರಿನ ಕಾಶ್ವಿ ವಿ. ಕೋಣಂಕಿ ವಿರುದ್ಧ; ತನಯ್ 6–2, 6–2ರಿಂದ ಬೆಂಗಳೂರಿನ ಮಾಧವ್ ದಾಧಿಚ್ ವಿರುದ್ಧ ಜಯ ಸಾಧಿಸಿದರು. </p>.<p>ಮೈಸೂರು ಜಿಲ್ಲೆಯ ರುತ್ವಿ ಎಂ. ಮಹೇಶ್ ಮತ್ತು ಸಾನ್ವಿ ಪ್ರಕಾಶ್ರಾಜ್ ಪುರೋಹಿತ್ ಅವರು ಬಾಲಕಿಯರ ಡಬಲ್ಸ್ ಪ್ರಶಸ್ತಿಯನ್ನು ಹಾಗೂ ಬೆಂಗಳೂರಿನ ಮಾಧವ್ ದಾಧಿಚ್ ಮತ್ತು ತನಯ್ ಬಾಬು ಪೈ ಬಾಲಕರ ಡಬಲ್ಸ್ ಪ್ರಶಸ್ತಿ ಗೆದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>