<p><strong>ಬೆಂಗಳೂರು</strong>: ಇಂಟರ್ನ್ಯಾಷನಲ್ ಮಾಸ್ಟರ್ ಶರಣ್ ರಾವ್, ಭಾನುವಾರ ಹೊಸಕೋಟೆ ತಾಲ್ಲೂಕಿನ ದೊಡ್ಡ ದುನ್ನಸಂದ್ರದಲ್ಲಿ ಮುಕ್ತಾಯಗೊಂಡ ಕರ್ನಾಟಕ ರಾಜ್ಯ ರ್ಯಾಪಿಡ್ ಚೆಸ್ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಗೆದ್ದುಕೊಂಡರು. ರಾಜ್ಯ ಬ್ಲಿಟ್ಝ್ ಚಾಂಪಿಯನ್ಷಿಪ್ ಪ್ರಶಸ್ತಿ ಮಂಗಳೂರಿನ ಸಿದ್ಧಾಂತ್ ಪೂಂಜಾ ಅವರ ಪಾಲಾಯಿತು.</p><p>ಶೃಂಗ ಇಂಟರ್ನ್ಯಾಷನಲ್ ಶಾಲೆಯಲ್ಲಿ, ಬೆಂಗಳೂರು ಗ್ರಾಮೀಣ ಜಿಲ್ಲಾ ಚೆಸ್ ಸಂಸ್ಥೆ ಆಶ್ರಯದಲ್ಲಿ ನಡೆದ ಎರಡು ದಿನಗಳ ರ್ಯಾಪಿಡ್ ಟೂರ್ನಿಯಲ್ಲಿ ಮಂಗಳೂರಿನ ಶರಣ್ 9 ಸುತ್ತುಗಳಿಂದ ಎಂಟು ಪಾಯಿಂಟ್ಸ್ (7 ಗೆಲುವು, 2 ಡ್ರಾ) ಗಳಿಸಿ ಅಜೇಯರಾಗುಳಿದರು. ಮೈಸೂರಿನ ಬಾಲಕಿಶನ್ ಎ ಮತ್ತು ಅಮನ್ ಖನ್ನಾ ಅವರೂ ತಲಾ ಎಂಟು ಪಾಯಿಂಟ್ಸ್ ಸಂಗ್ರಹಿಸಿದರೂ ಟೈಬ್ರೇಕ್ ಆಧಾರದ ಮೇಲೆ ಎರಡು ಮತ್ತು ಮೂರನೇ ಸ್ಥಾನ ಪಡೆದರು.</p><p>ಶರಣ್ ಮತ್ತು ಬಾಲಕಿಶನ್ ಅವರು ಜಾರ್ಖಂಡ್ನಲ್ಲಿ ಮುಂದಿನ ಫೆಬ್ರುವರಿಯಲ್ಲಿ ನಡೆಯಲಿರುವ ರಾಷ್ಟ್ರೀಯ ರ್ಯಾಪಿಡ್ ಟೂರ್ನಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.</p><p>‘ಟೂರ್ನಿ ತೀವ್ರ ಪೈಪೋಟಿಯಿಂದ ಕೂಡಿತ್ತು. ರ್ಯಾಪಿಡ್ ವಿಭಾಗದಲ್ಲಿ ಭಾಗವಹಿಸಿದ್ದ 336 ಆಟಗಾರರಲ್ಲಿ 190 ಮಂದಿ ರೇಟೆಡ್ ಆಟಗಾರರಿದ್ದರು’ ಎಂದು ಚೀಫ್ ಆರ್ಬಿಟರ್, ಹುಬ್ಬಳ್ಳಿಯ ಕೆ.ವಿ.ಶ್ರೀಪಾದ್ ತಿಳಿಸಿದರು.</p><p>ಬ್ಲಿಟ್ಸ್ ಚಾಂಪಿಯನ್ಷಿಪ್ನಲ್ಲಿ ಸಿದ್ಧಾಂತ್ ಮತ್ತು ಪ್ರಣವ್ ಎ.ಜೆ. ತಲಾ 8 ಅಂಕ ಪಡೆದರೂ, ಟೈಬ್ರೇಕ್ ಆಧಾರದಲ್ಲಿ ಪ್ರಣವ್ ಮೊದಲಿಗರಾದರು. ಪಾರ್ಥಸಾರಥಿ ಆರ್., ಅರ್ಕಸೇನ ಗುಪ್ತಾ ಮತ್ತು ಪ್ರೀತಮ್ ಶರ್ಮಾ (ತಲಾ 7.5) ಕ್ರಮವಾಗಿ ಮೂರರಿಂದ ಐದರವರೆಗಿನ ಸ್ಥಾನಗಳನ್ನು ಪಡೆದರು.</p><p>ಸಿದ್ಧಾಂತ್ ಮತ್ತು ಪ್ರಣವ್ ಅವರು ಮುಂದಿನ ರಾಷ್ಟ್ರೀಯ ಬ್ಲಿಟ್ಝ್ ಚಾಂಪಿಯನ್ಷಿಪ್ನಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಇಂಟರ್ನ್ಯಾಷನಲ್ ಮಾಸ್ಟರ್ ಶರಣ್ ರಾವ್, ಭಾನುವಾರ ಹೊಸಕೋಟೆ ತಾಲ್ಲೂಕಿನ ದೊಡ್ಡ ದುನ್ನಸಂದ್ರದಲ್ಲಿ ಮುಕ್ತಾಯಗೊಂಡ ಕರ್ನಾಟಕ ರಾಜ್ಯ ರ್ಯಾಪಿಡ್ ಚೆಸ್ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಗೆದ್ದುಕೊಂಡರು. ರಾಜ್ಯ ಬ್ಲಿಟ್ಝ್ ಚಾಂಪಿಯನ್ಷಿಪ್ ಪ್ರಶಸ್ತಿ ಮಂಗಳೂರಿನ ಸಿದ್ಧಾಂತ್ ಪೂಂಜಾ ಅವರ ಪಾಲಾಯಿತು.</p><p>ಶೃಂಗ ಇಂಟರ್ನ್ಯಾಷನಲ್ ಶಾಲೆಯಲ್ಲಿ, ಬೆಂಗಳೂರು ಗ್ರಾಮೀಣ ಜಿಲ್ಲಾ ಚೆಸ್ ಸಂಸ್ಥೆ ಆಶ್ರಯದಲ್ಲಿ ನಡೆದ ಎರಡು ದಿನಗಳ ರ್ಯಾಪಿಡ್ ಟೂರ್ನಿಯಲ್ಲಿ ಮಂಗಳೂರಿನ ಶರಣ್ 9 ಸುತ್ತುಗಳಿಂದ ಎಂಟು ಪಾಯಿಂಟ್ಸ್ (7 ಗೆಲುವು, 2 ಡ್ರಾ) ಗಳಿಸಿ ಅಜೇಯರಾಗುಳಿದರು. ಮೈಸೂರಿನ ಬಾಲಕಿಶನ್ ಎ ಮತ್ತು ಅಮನ್ ಖನ್ನಾ ಅವರೂ ತಲಾ ಎಂಟು ಪಾಯಿಂಟ್ಸ್ ಸಂಗ್ರಹಿಸಿದರೂ ಟೈಬ್ರೇಕ್ ಆಧಾರದ ಮೇಲೆ ಎರಡು ಮತ್ತು ಮೂರನೇ ಸ್ಥಾನ ಪಡೆದರು.</p><p>ಶರಣ್ ಮತ್ತು ಬಾಲಕಿಶನ್ ಅವರು ಜಾರ್ಖಂಡ್ನಲ್ಲಿ ಮುಂದಿನ ಫೆಬ್ರುವರಿಯಲ್ಲಿ ನಡೆಯಲಿರುವ ರಾಷ್ಟ್ರೀಯ ರ್ಯಾಪಿಡ್ ಟೂರ್ನಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.</p><p>‘ಟೂರ್ನಿ ತೀವ್ರ ಪೈಪೋಟಿಯಿಂದ ಕೂಡಿತ್ತು. ರ್ಯಾಪಿಡ್ ವಿಭಾಗದಲ್ಲಿ ಭಾಗವಹಿಸಿದ್ದ 336 ಆಟಗಾರರಲ್ಲಿ 190 ಮಂದಿ ರೇಟೆಡ್ ಆಟಗಾರರಿದ್ದರು’ ಎಂದು ಚೀಫ್ ಆರ್ಬಿಟರ್, ಹುಬ್ಬಳ್ಳಿಯ ಕೆ.ವಿ.ಶ್ರೀಪಾದ್ ತಿಳಿಸಿದರು.</p><p>ಬ್ಲಿಟ್ಸ್ ಚಾಂಪಿಯನ್ಷಿಪ್ನಲ್ಲಿ ಸಿದ್ಧಾಂತ್ ಮತ್ತು ಪ್ರಣವ್ ಎ.ಜೆ. ತಲಾ 8 ಅಂಕ ಪಡೆದರೂ, ಟೈಬ್ರೇಕ್ ಆಧಾರದಲ್ಲಿ ಪ್ರಣವ್ ಮೊದಲಿಗರಾದರು. ಪಾರ್ಥಸಾರಥಿ ಆರ್., ಅರ್ಕಸೇನ ಗುಪ್ತಾ ಮತ್ತು ಪ್ರೀತಮ್ ಶರ್ಮಾ (ತಲಾ 7.5) ಕ್ರಮವಾಗಿ ಮೂರರಿಂದ ಐದರವರೆಗಿನ ಸ್ಥಾನಗಳನ್ನು ಪಡೆದರು.</p><p>ಸಿದ್ಧಾಂತ್ ಮತ್ತು ಪ್ರಣವ್ ಅವರು ಮುಂದಿನ ರಾಷ್ಟ್ರೀಯ ಬ್ಲಿಟ್ಝ್ ಚಾಂಪಿಯನ್ಷಿಪ್ನಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>