<p><strong>ಬೆಂಗಳೂರು: </strong>ಪೆನಾಲ್ಟಿ ಶೂಟೌಟ್ ಮತ್ತು ಸಡನ್ ಡೆತ್ನಲ್ಲಿ ಕೈಚಳಕ ತೋರಿದ ವೀರಣ್ಣ ಗೌಡ, ಶಾಂತಿನಗರದಲ್ಲಿರುವ ಕೆ.ಎಂ.ಕಾರ್ಯಪ್ಪ ಹಾಕಿ ಅರೆನಾದಲ್ಲಿ ಶನಿವಾರ ಸೇರಿದ್ದ ಅಭಿಮಾನಿಗಳನ್ನು ರಂಜಿಸಿದರು.</p>.<p>ವೀರಣ್ಣ ಅವರ ಅಮೋಘ ಆಟದಿಂದಾಗಿ ಸಾಯ್ ತಂಡ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸ್ಮಾರಕ ರಾಜ್ಯಮಟ್ಟದ ಹಾಕಿ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿತು.</p>.<p>ಸೆಮಿಫೈನಲ್ನಲ್ಲಿ ಸಾಯ್ ತಂಡ ಸಡನ್ ಡೆತ್ನಲ್ಲಿ 6–5 ಗೋಲುಗಳಿಂದ ಡಿವೈಇಎಸ್ ತಂಡವನ್ನು ಮಣಿಸಿತು.</p>.<p>ನಿಗದಿತ ಅವಧಿಯಲ್ಲಿ ಉಭಯ ತಂಡಗಳು 1–1 ಗೋಲುಗಳಿಂದ ಸಮಬಲ ಸಾಧಿಸಿದ್ದವು. ಸಾಯ್ ಪರ ವೀರಣ್ಣ 19ನೇ ನಿಮಿಷದಲ್ಲಿ ಗೋಲು ಗಳಿಸಿದರೆ, ಡಿವೈಇಎಸ್ ತಂಡದ ಎನ್.ಕುಮಾರ್ 24ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರು.</p>.<p>ಪೆನಾಲ್ಟಿ ಶೂಟೌಟ್ನಲ್ಲಿ ಸಾಯ್ ತಂಡದ ವೀರಣ್ಣ, ಮೊಹಮ್ಮದ್ ರಾಹೀಲ್ ಮತ್ತು ಶಮಂತ್ ಗೋಲು ಬಾರಿಸಿದರು. ವೀರಣ್ಣ ಪೆನಾಲ್ಟಿ ಸ್ಟ್ರೋಕ್ ಮೂಲಕವೂ ಚೆಂಡನ್ನು ಗುರಿ ತಲುಪಿಸಿದರು.</p>.<p>ಡಿವೈಇಎಸ್ ಪರ ಪವನ್ ಮಡಿವಾಳರ್, ಎನ್.ಕುಮಾರ್, ವಸಂತ್ ಮತ್ತು ಡಿ.ಯು.ಶ್ರೀಕಾಂತ್ ಅವರು ಗೋಲು ಹೊಡೆದಿದ್ದರಿಂದ ಮತ್ತೆ ಸಮಬಲ ಕಂಡುಬಂತು. ಸಡನ್ ಡೆತ್ನಲ್ಲಿ ಮತ್ತೊಮ್ಮೆ ಕೈಚಳಕ ತೋರಿದ ವೀರಣ್ಣ, ಸಾಯ್ ತಂಡದ ಸಂಭ್ರಮಕ್ಕೆ ಕಾರಣರಾದರು.</p>.<p>ದಿನದ ಇನ್ನೊಂದು ಸೆಮಿಫೈನಲ್ನಲ್ಲಿ ಕೆನರಾ ಬ್ಯಾಂಕ್ 2–1 ಗೋಲುಗಳಿಂದ ಕೊಡವ ಸಮಾಜ ತಂಡವನ್ನು ಮಣಿಸಿತು.</p>.<p>ಕೆನರಾ ಬ್ಯಾಂಕ್ ತಂಡದ ಕೆ.ಪಿ.ಸೋಮಯ್ಯ ಮತ್ತು ವರ್ಗೀಸ್ ಜಾನ್ ಅವರು 33 ಮತ್ತು 37ನೇ ನಿಮಿಷಗಳಲ್ಲಿ ಗೋಲು ಬಾರಿಸಿದರು. ಕೊಡವ ಸಮಾಜ ತಂಡದ ಬಿ.ಪಿ.ಸೋಮಣ್ಣ 42ನೇ ನಿಮಿಷದಲ್ಲಿ ಗೋಲು ದಾಖಲಿಸಿ ಸೋಲಿನ ನಡುವೆಯೂ ಗಮನ ಸೆಳೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಪೆನಾಲ್ಟಿ ಶೂಟೌಟ್ ಮತ್ತು ಸಡನ್ ಡೆತ್ನಲ್ಲಿ ಕೈಚಳಕ ತೋರಿದ ವೀರಣ್ಣ ಗೌಡ, ಶಾಂತಿನಗರದಲ್ಲಿರುವ ಕೆ.ಎಂ.ಕಾರ್ಯಪ್ಪ ಹಾಕಿ ಅರೆನಾದಲ್ಲಿ ಶನಿವಾರ ಸೇರಿದ್ದ ಅಭಿಮಾನಿಗಳನ್ನು ರಂಜಿಸಿದರು.</p>.<p>ವೀರಣ್ಣ ಅವರ ಅಮೋಘ ಆಟದಿಂದಾಗಿ ಸಾಯ್ ತಂಡ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸ್ಮಾರಕ ರಾಜ್ಯಮಟ್ಟದ ಹಾಕಿ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿತು.</p>.<p>ಸೆಮಿಫೈನಲ್ನಲ್ಲಿ ಸಾಯ್ ತಂಡ ಸಡನ್ ಡೆತ್ನಲ್ಲಿ 6–5 ಗೋಲುಗಳಿಂದ ಡಿವೈಇಎಸ್ ತಂಡವನ್ನು ಮಣಿಸಿತು.</p>.<p>ನಿಗದಿತ ಅವಧಿಯಲ್ಲಿ ಉಭಯ ತಂಡಗಳು 1–1 ಗೋಲುಗಳಿಂದ ಸಮಬಲ ಸಾಧಿಸಿದ್ದವು. ಸಾಯ್ ಪರ ವೀರಣ್ಣ 19ನೇ ನಿಮಿಷದಲ್ಲಿ ಗೋಲು ಗಳಿಸಿದರೆ, ಡಿವೈಇಎಸ್ ತಂಡದ ಎನ್.ಕುಮಾರ್ 24ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರು.</p>.<p>ಪೆನಾಲ್ಟಿ ಶೂಟೌಟ್ನಲ್ಲಿ ಸಾಯ್ ತಂಡದ ವೀರಣ್ಣ, ಮೊಹಮ್ಮದ್ ರಾಹೀಲ್ ಮತ್ತು ಶಮಂತ್ ಗೋಲು ಬಾರಿಸಿದರು. ವೀರಣ್ಣ ಪೆನಾಲ್ಟಿ ಸ್ಟ್ರೋಕ್ ಮೂಲಕವೂ ಚೆಂಡನ್ನು ಗುರಿ ತಲುಪಿಸಿದರು.</p>.<p>ಡಿವೈಇಎಸ್ ಪರ ಪವನ್ ಮಡಿವಾಳರ್, ಎನ್.ಕುಮಾರ್, ವಸಂತ್ ಮತ್ತು ಡಿ.ಯು.ಶ್ರೀಕಾಂತ್ ಅವರು ಗೋಲು ಹೊಡೆದಿದ್ದರಿಂದ ಮತ್ತೆ ಸಮಬಲ ಕಂಡುಬಂತು. ಸಡನ್ ಡೆತ್ನಲ್ಲಿ ಮತ್ತೊಮ್ಮೆ ಕೈಚಳಕ ತೋರಿದ ವೀರಣ್ಣ, ಸಾಯ್ ತಂಡದ ಸಂಭ್ರಮಕ್ಕೆ ಕಾರಣರಾದರು.</p>.<p>ದಿನದ ಇನ್ನೊಂದು ಸೆಮಿಫೈನಲ್ನಲ್ಲಿ ಕೆನರಾ ಬ್ಯಾಂಕ್ 2–1 ಗೋಲುಗಳಿಂದ ಕೊಡವ ಸಮಾಜ ತಂಡವನ್ನು ಮಣಿಸಿತು.</p>.<p>ಕೆನರಾ ಬ್ಯಾಂಕ್ ತಂಡದ ಕೆ.ಪಿ.ಸೋಮಯ್ಯ ಮತ್ತು ವರ್ಗೀಸ್ ಜಾನ್ ಅವರು 33 ಮತ್ತು 37ನೇ ನಿಮಿಷಗಳಲ್ಲಿ ಗೋಲು ಬಾರಿಸಿದರು. ಕೊಡವ ಸಮಾಜ ತಂಡದ ಬಿ.ಪಿ.ಸೋಮಣ್ಣ 42ನೇ ನಿಮಿಷದಲ್ಲಿ ಗೋಲು ದಾಖಲಿಸಿ ಸೋಲಿನ ನಡುವೆಯೂ ಗಮನ ಸೆಳೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>